ಆ್ಯಪ್ನಗರ

ಸಂಕ್ರಾಂತಿ ಹಿನ್ನೆಲೆಯಲ್ಲಿ ಹೆಚ್ಚುತ್ತಿದೆ ತರಕಾರಿ, ಹಣ್ಣುಗಳ ಬೆಲೆ

ಚನ್ನಮ್ಮನ ಕಿತ್ತೂರು : ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಸ್ಥಳೀಯ ಗುರುವಾರ ಪೇಟೆಯ ಸಂತೆಯಲ್ಲಿ ತರಕಾರಿ ಹಾಗೂ ಹಣ್ಣುಗಳ ಬೆಲೆ ಗಗನಕ್ಕೇರಿದೆ...

Vijaya Karnataka 11 Jan 2019, 5:00 am
ಚನ್ನಮ್ಮನ ಕಿತ್ತೂರು : ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಸ್ಥಳೀಯ ಗುರುವಾರ ಪೇಟೆಯ ಸಂತೆಯಲ್ಲಿ ತರಕಾರಿ ಹಾಗೂ ಹಣ್ಣುಗಳ ಬೆಲೆ ಗಗನಕ್ಕೇರಿದೆ.
Vijaya Karnataka Web BEL-10 KITTUR PHOTO 1


ತರಕಾರಿ, ಹಣ್ಣುಗಳ ದರ ಇಂತಿದೆ (ಪ್ರತಿ ಕಿಲೋಕ್ಕೆ):

ಬದನೆಕಾಯಿ 60 ರೂ., ಬೆಂಡಿಕಾಯಿ 40 ರೂ., ಸವತಿಕಾಯಿ 40 ರೂ., ಗಜ್ಜರಿ 60 ರೂ., ವಟಾಣಿ 60 ರೂ., ಟೊಮೇಟೊ 30 ರೂ., ಫ್ಲಾವರ್‌ 40 ರೂ., ಹೀರೇಕಾಯಿ 40 ರೂ., ಹಾಗಲಕಾಯಿ 40 ರೂ., ಚೌಳಿಕಾಯಿ 60 ರೂ., ದಪ್ಪ ಮೆಣಸಿನಕಾಯಿ 80 ರೂ., ಪೇರಲ ಹಣ್ಣು 60 ರೂ., ದಾಳಿಂಬೆ ಹಣ್ಣು 50 ರೂ., ಕಲ್ಲಂಗಡಿ ಹಣ್ಣು 60 ರೂ.

ನೇರ ಮಾರಾಟದಿಂದ ಲಾಭ:
ಸಗಟು ಮಾರುಕಟ್ಟೆಗೆ ಹೋಲಿಸಿದರೆ ಚಿಲ್ಲರೆ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ದುಬಾರಿಯಾಗಿಯೇ ಇದೆ. ಮದುವೆ ಸೀಜನ್‌ ಕೂಡ ಪ್ರಾರಂಭವಾಗಿರುವದರಿಂದ ಬೇಡಿಕೆ ಇನ್ನೂ ಜಾಸ್ತಿಯಾಗತ್ತಲೇ ಸಾಗಿದೆ. ಸದ್ಯಕ್ಕೆ ಕಡಿಮೆಯಾಗುವ ಭರವಸೆ ಇಲ್ಲ ಎನ್ನುತ್ತಾರೆ ತರಕಾರಿ ವ್ಯಾಪಾರಸ್ಥ ಫಕ್ಕೀರಪ್ಪ ಲಂಗೋಟಿ. ಹಣ್ಣುಗಳೂ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ನೋಡಿದಲ್ಲೆಲ್ಲ ಕೆಂಪನೆಯ ದಾಳಿಂಬೆ ಹಣ್ಣುಗಳು ಕಾಣುತ್ತಿವೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಕಲ್ಲಂಗಡಿ ಹಣ್ಣಿನ ಬೆಳೆ ಇನ್ನೂ ರೈತರ ಕೈಗೆ ಬಂದಿಲ್ಲವಾದರೂ ಹೊರ ರಾಜ್ಯಗಳಿಂದ ಹಣ್ಣುಗಳನ್ನು ತರಿಸಿ ವ್ಯಾಪಾರಸ್ಥರು ಮಾರುತ್ತಿದ್ದಾರೆ. ದಲ್ಲಾಳಿಗಳಿಗೆ ಮಾರುವ ಬದಲಾಗಿ ರೈತರು ತಾವೇ ಸ್ವತಃ ಸಂತೆಗೆ ತಂದು ತರಕಾರಿ ಮಾರುತ್ತಿರುವುದರಿಂದ ಲಾಭ ಗಿಟ್ಟಿಸಿಕೊಳ್ಳುತ್ತಿದ್ದಾರೆ.

ಇಳಿಮುಖವಾದ ಮಾಂಸದ ವ್ಯಾಪಾರ:
ಸಾಲಾಗಿ ಮದುವೆಗಳು ಹಾಗೂ ಹಬ್ಬಗಳು ಬರುತ್ತಿರುವುದರಿಂದ ಮೊಟ್ಟೆ ಹಾಗೂ ಮಾಂಸದ ವ್ಯಾಪಾರ ಅಷ್ಟಕಷ್ಟೆ ಎನ್ನುತ್ತಾರೆ ಚಿಕನ್‌ ಅಂಗಡಿ ಮಾಲೀಕ ಇನಾಯತ್‌ ಜಮಾದಾರ. ಮೊಟ್ಟೆಗಳು 5 ರೂ.ಗೆ ಒಂದರಂತೆ ಮಾರಾಟವಾಗುತ್ತಿದ್ದು, ಕೋಳಿ ಮಾಂಸ ಕಿಲೋಕ್ಕೆ 150ರೂ. ಹಾಗೂ ಕುರಿ ಮಾಂಸ ಕಿಲೋಕ್ಕೆ 400 ರೂ.ನಂತೆ ಮಾರಾಟವಾಗುತ್ತಿದೆ. ಕೆರೆಗಳಲ್ಲಿ ಮೀನುಗಳನ್ನು ಹಿಡಿಯುವ ಸಮಯ ಇದಾಗಿಲ್ಲವಾದ್ದರಿಂದ ಗೋವಾದಿಂದ ಮೀನುಗಳನ್ನು ತರಿಸಿ ಮಾರಾಟ ಮಾಡಲಾಗುತ್ತಿದೆ ಎನ್ನುತ್ತಾರೆ ಮಹಾದೇವ ಬೋವಿ.

ಚಳಿಗಾಲದಲ್ಲಿ ಶರೀರ ಬೆಚ್ಚಗಿಡಲು ಗೋಧಿಯಿಂದ ಮಾಡಿದ ಸಿಹಿ ಪದಾರ್ಥ, ಸಿಹಿಗೆಣಸು ಹಾಗೂ ಎಣ್ಣೆಯುಕ್ತ ಪದಾರ್ಥಗಳನ್ನು ಹೆಚ್ಚಾಗಿ ಬಳಸುತ್ತಾರೆ. ಆದರೂ ಸಿಹಿ ಪದಾರ್ಥದಿಂದ ಉಂಟಾಗುವ ಉಷ್ಣವನ್ನು ಸರಿದೂಗಿಸಲು ತರಕಾರಿ ಬೇಕೆ ಬೇಕು. ಹೀಗಾಗಿ ತರಕಾರಿ ದರಗಳು ಗಗನಕ್ಕೆ ಏರುತ್ತವೆ ಎನ್ನುತ್ತಾರೆ ನಾಟಿ ವೈದ್ಯರಾದ ಎಮ್‌.ಜಿ. ಹಿರೇಮಠ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ