ಆ್ಯಪ್ನಗರ

ರಾಯಣ್ಣಗೆ ಪತ್ನಿ, ಮಕ್ಕಳಿದ್ದರು!

ಬೈಲಹೊಂಗಲ : ರಾಯಣ್ಣನಿಗೆ ಪತ್ನಿ, ಮಗ ಇದ್ದರೆಂಬ ಸಂಶೋಧನೆ ...

Vijaya Karnataka 13 Jan 2019, 5:00 am
ಬೈಲಹೊಂಗಲ : ರಾಯಣ್ಣನಿಗೆ ಪತ್ನಿ, ಮಗ ಇದ್ದರೆಂಬ ಸಂಶೋಧನೆ ಮಾಡಿದ ಮತ್ತು ಇದನ್ನು ಬೆಳಕಿಗೆ ತಂದ ಯುವ ಸಾಹಿತಿ ಬಸವರಾಜ ಕಮತ ಕಾರ್ಯ ಶ್ಲಾಘನೀಯ ಎಂದು ಕವಿವಿ ನಿವೃತ್ತ ಇತಿಹಾಸ ಮತ್ತು ಪುರಾತತ್ವ ಪ್ರಾಧ್ಯಾಪಕ ಡಾ.ಆರ್‌.ಎಂ. ಷಡಕ್ಷ ರಯ್ಯ ಹೇಳಿದರು.
Vijaya Karnataka Web BEL-12HTP12


ತಾಲೂಕಿನ ಸಂಗೊಳ್ಳಿ ಗ್ರಾಮದ ಪ್ರೌಢಶಾಲೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸಂಗೊಳ್ಳಿ ರಾಯಣ್ಣ ಉತ್ಸವದ ಮೊದಲ ದಿನದ ಕಾರ್ಯಕ್ರಮದಲ್ಲಿ ಸಂಗೊಳ್ಳಿ ರಾಯಣ್ಣನ ಕುರಿತಾದ ಚಿಂತನ, ಮಂಥನ, ಸ್ಪಂದನ ಕುರಿತ ವಿಚಾರಗೋಷ್ಠಿಯ ಅಧ್ಯಕ್ಷ ತೆ ವಹಿಸಿ ಅವರು ಮಾತನಾಡಿದರು. ಸಾಹಿತಿ ಕಮತ ಇತರ ಸಂಶೋಧಕರಿಗೆ ಮಾದರಿಯಾದ್ದಾರೆ. ಜನಪದ ಸಾಹಿತ್ಯದಲ್ಲಿ ಸಂಗೊಳ್ಳಿ ರಾಯಣ್ಣನ ಶೂರತ್ವವನ್ನು ಮನ ಮುಟ್ಟುವಂತೆ ವರ್ಣಿಸಿರುವ ಕಾದಂಬರಿಕಾರರ ಸಾಹಿತ್ಯ ರಚನೆ ಅಮೋಘವಾಗಿದೆ. ಯಾವುದೇ ವಿಚಾರಗೋಷ್ಠಿಗಳಲ್ಲಿ ವಾದ, ವಿವಾದಗಳು ಇದ್ದಾಗಲೇ ಮಾತ್ರ ಸತ್ಯ ಸಂಗತಿಗಳು ಹೊರ ಬರುತ್ತವೆ ಎಂದರು.

ಬೆಳಗಾವಿಯ ರಾಣಿ ಪಾರ್ವತಿದೇವಿ ಮಹಾವಿದ್ಯಾಲಯದ ಉಪನ್ಯಾಸಕ ಡಾ.ಹರೀಶ ಕೋಲಕಾರ ಕಾದಂಬರಿಗಳಲ್ಲಿ ಸಂಗೊಳ್ಳಿ ರಾಯಣ್ಣ ಕುರಿತು ಉಪನ್ಯಾಸ ನೀಡಿ, ರಾಯಣ್ಣ ಒಬ್ಬ ಜನನಾಯಕ. ಚನ್ನಮ್ಮನ ಮಾನಸ ಪುತ್ರ. ಆ.15 ರಾಯಣ್ಣನ ಜನ್ಮದಿನ ಎನ್ನುವುದಕ್ಕೆ ಸ್ಪಷ್ಟ ದಾಖಲೆಗಳಿಲ್ಲ ಎಂದರು.

ಸಾಹಿತಿ ಮಂಜುನಾಥ ಕಳಸನ್ನವರ ಬ್ರಿಟಿಷ್‌ ದಾಖಲೆಗಳಲ್ಲಿ ಸಂಗೊಳ್ಳಿ ರಾಯಣ್ಣ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರರು. ತಾಪಂ ಅಧ್ಯಕ್ಷೆ ಶೈಲಾ ಸಿದ್ರಾಮನಿ ವಿಚಾರಗೋಷ್ಠಿ ಉದ್ಘಾಟಿಸಿದರು. ವಿದ್ಯಾರ್ಥಿನಿಯರಾದ ಸವಿತಾ ಬಾದಾಮಿ, ದೀಪಾ ಮಾಲಬನ್ನವರ ಅನಿಸಿಕೆ ವ್ಯಕ್ತಪಡಿಸಿದರು. ಸಾಹಿತಿ ಯ.ರು. ಪಾಟೀಲ ಆಶಯ ನುಡಿ ಮಂಡಿಸಿದರು. ಪ್ರಾಚಾರ್ಯ ಡಾ.ಚಂದ್ರಶೇಖರ ಗಣಾಚಾರಿ ಮತ್ತಿತರರು ಉಪಸ್ಥಿತರಿದ್ದರು. ಸಂಶೋಧಕ ಬಸವರಾಜ ಕಮತ ನಿರೂಪಿಸಿದರು. ತಹಸೀಲ್ದಾರ ಪ್ರಕಾಶ ಗಾಯಕವಾಡ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶಂಕರಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ