ಆ್ಯಪ್ನಗರ

ಗೋಕಾಕ ಜಿಲ್ಲಾಕೇಂದ್ರಕ್ಕೆ ಆಗ್ರಹಿಸಿ ಹೋರಾಟಕ್ಕೆ ಸಿದ್ಧ

ಗೋಕಾಕ: ಆಯೋಗಗಳ ವರದಿ ಮತ್ತು ಜಿಲ್ಲೆಗೆ ಬೇಕಾದ ಎಲ್ಲಮೂಲ ಸೌಲಭ್ಯಗಳನ್ನು ಹೊಂದಿರುವ ಪ್ರಮುಖ ...

Vijaya Karnataka 24 Sep 2019, 5:00 am
ಗೋಕಾಕ: ಆಯೋಗಗಳ ವರದಿ ಮತ್ತು ಜಿಲ್ಲೆಗೆ ಬೇಕಾದ ಎಲ್ಲಮೂಲ ಸೌಲಭ್ಯಗಳನ್ನು ಹೊಂದಿರುವ ಪ್ರಮುಖ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರವಾಗಿರುವ ಗೋಕಾಕನ್ನು ಜಿಲ್ಲಾಕೇಂದ್ರವನ್ನಾಗಿ ಘೋಷಿಸಬೇಕೆಂದು ಸರಕಾರಕ್ಕೆ ಆಗ್ರಹಿಸಿ ನ್ಯಾಯವಾದಿಗಳ ಸಂಘದ ಕಾರ್ಯಾಲಯದಲ್ಲಿಸೋಮವಾರ ನಡೆದ ಸಭೆಯಲ್ಲಿಗೋಕಾಕ ನ್ಯಾಯವಾದಿಗಳ ಸಂಘ ಸರ್ವಾನುಮತದ ನಿರ್ಣಯ ಕೈಗೊಂಡಿತು.
Vijaya Karnataka Web ready to fight for the gokaka district headquarters
ಗೋಕಾಕ ಜಿಲ್ಲಾಕೇಂದ್ರಕ್ಕೆ ಆಗ್ರಹಿಸಿ ಹೋರಾಟಕ್ಕೆ ಸಿದ್ಧ


ನ್ಯಾಯವಾದಿಗಳ ಸಂಘದ ಅಧ್ಯಕ್ಷ ಯು.ಬಿ. ಸಿಂಪಿ ಅವರ ಅಧ್ಯಕ್ಷತೆಯಲ್ಲಿಸಂಘದ ಪದಾಧಿಕಾರಿಗಳ ಮತ್ತು ನ್ಯಾಯವಾದಿಗಳ ಸಭೆ ಜರುಗಿತು. ನ್ಯಾಯವಾದಿ ಮತ್ತು ಬಿಜೆಪಿ ಮುಖಂಡ ಅಶೋಕ ಪೂಜಾರಿ ಮಾತನಾಡಿ, ''ಆಯೋಗಗಳ ವರದಿಗೆ ಪೂರಕವಾಗಿ ಗೋಕಾಕ ಎಂದೋ ಜಿಲ್ಲೆಯಾಗಿ ಘೋಷಣೆಯಾಗಬೇಕಾಗಿತ್ತು. ಆದರೆ ರಾಜಕೀಯ ಕಾರಣಗಳಿಂದಾಗಿ ಈ ಪ್ರಕ್ರಿಯೆ ತಾರ್ಕಿಕ ಅಂತ್ಯ ಕಂಡಿಲ್ಲ. ಇನ್ನು ಮುಂದೆ ಗೋಕಾಕ ಜಿಲ್ಲಾರಚನೆಯ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ'', ಎಂದರು.

ಯು.ಬಿ. ಸಿಂಪಿ ಮಾತನಾಡಿ, ''ಗೋಕಾಕ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಘೋಷಣೆಯಾಗಿರುವುದರಿಂದ ಹೋರಾಟದ ರೂಪರೇಷೆಗಳನ್ನು ಚುನಾವಣೆ ಮುಗಿಯುವವರೆಗೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಚುನಾವಣೆಯ ನಂತರ ಶ್ರೀ ಮುರುಘರಾಜೇಂದ್ರ ಸ್ವಾಮಿಗಳ ನೇತೃತ್ವದಲ್ಲಿಗೋಕಾಕ ನ್ಯಾಯವಾದಿಗಳ ಸಂಘ ಹೋರಾಟವನ್ನು ಮುಂದುವರಿಸಲಿದೆ'', ಎಂದು ಹೇಳಿದರು.

ದಸ್ತಗೀರ ಪೈಲವಾನ, ಬಿ.ಆರ್‌. ಕೊಪ್ಪ, ಶಾಮಾನಂದ ಪೂಜೇರಿ, ಶಶಿಧರ ದೇಮಶಟ್ಟಿ, ಎಸ್‌.ಎಸ್‌. ಪಾಟೀಲ, ಜಿ.ಎಮ್‌. ಬಟ್ಟಿ, ಎಸ್‌.ಜಿ. ಹಿರಟ್ಟಿ, ಎಮ್‌.ಕೆ. ಪೂಜೇರಿ, ಜಿ.ಎಸ್‌. ನಂದಿ, ಜಿ.ಕೆ. ಪೂಜೇರಿ, ಬಿ.ಟಿ. ಬೀರನಗಡ್ಡಿ, ಸಿ.ಬಿ. ಗಿಡ್ಡನ್ನವರ, ಜಿ.ಆರ್‌. ಪೂಜೇರಿ, ಪ್ರೇಮಾ ಚಿಕ್ಕೋಡಿ ಸೇರಿದಂತೆ ಅನೇಕ ವಕೀಲರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ