ಆ್ಯಪ್ನಗರ

ತಾಳ್ಮೆ ಕಳೆದುಕೊಳ್ಳದೆ ಬದುಕು ಮರುನಿರ್ಮಿಸಿಕೊಳ್ಳಿ

ಅಥಣಿ: ನಿಸರ್ಗ ಕೆಲವು ಸಲ ತಾಳ್ಮೆಯನ್ನು ಪರೀಕ್ಷೆ ಮಾಡುತ್ತದೆ...

Vijaya Karnataka 16 Aug 2019, 5:00 am
ಅಥಣಿ: ನಿಸರ್ಗ ಕೆಲವು ಸಲ ತಾಳ್ಮೆಯನ್ನು ಪರೀಕ್ಷೆ ಮಾಡುತ್ತದೆ. ಯಾರೂ ತಾಳ್ಮೆ ಕಳೆದುಕೊಳ್ಳದೆ ಎಲ್ಲರೂ ಬದುಕನ್ನು ಪುನಃ ನಿರ್ಮಾಣ ಮಾಡಿಕೊಳ್ಳಬೇಕು ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮಿಜಿ ಹೇಳಿದರು.
Vijaya Karnataka Web BEL-15 ATHANI-04


ಅವರು ಅಥಣಿ ತಾಲೂಕಿನ ಝೀರೊ ಪಾಯಿಂಟ್‌ ಸೇರಿದಂತೆ ನಾನಾ ಪುನರ್ವಸತಿ ಕೇಂದ್ರಗಳಿಗೆ ಭೇಟಿ ನೀಡಿ ಅವರು ಪ್ರವಾಹ ಸಂತ್ರಸ್ಥರನ್ನು ಉದ್ಧೇಶಿಸಿ ಮಾತನಾಡಿದರು. ಕಷ್ಟಗಳು ಮಾನವ ಜೀವಿಗೆ ಬರುವುದು ಸಹಜವಾಗಿದೆ. ಸುಖವಿದ್ದಾಗ ಹಿಗ್ಗದೆ ಕಷ್ಟದಲ್ಲಿದ್ದಾಗ ಕುಗ್ಗದೆ ಯಾವಾಗಲೂ ಸ್ಥಿತಪ್ರಜ್ಞತೆಯಿಂದ ಇರಬೇಕು. ಯಾವುದೇ ಹಾನಿಯಾಗಿರಲಿ, ಮರಳಿ ಅದನ್ನು ಸಂಪಾದಿಸುವ ಛಲವಿಟ್ಟುಕೊಂಡು ಹೊಸ ಜೀವನದತ್ತ ಸಾಗಬೇಕೆಂದು ಅವರು ಹೇಳಿದರು.

ಜಮಖಂಡಿ ಶಾಸಕ ಆನಂದ ನೇಮಗೌಡ, ಉದ್ಯಮಿ ಸಂಗಮೇಶ ನಿರಾಣಿ, ತೇರದಾಳ, ಶಾಸಕ ಸಿದ್ದು ಸವದಿ, ಶಾಸಕಿ ಸೌಮ್ಯ ರೆಡ್ಡಿ ಸೇರಿದಂತೆ ಅನೇಕರು ಪ್ರವಾಹ ಸಂತ್ರಸ್ತರನ್ನು ಭೇಟಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ