ಆ್ಯಪ್ನಗರ

ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಸಂಗೀತ ಶಿಕ್ಷಕರನ್ನು ನೇಮಿಸಿ

ಅಥಣಿ: ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ...

Vijaya Karnataka 14 Feb 2020, 5:00 am
ಅಥಣಿ: ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಒಳಗೊಂಡಂತೆ ಶಿಕ್ಷಣದ ಎಲ್ಲಹಂತಗಳಲ್ಲಿಸಂಗೀತ ಶಿಕ್ಷಕರನ್ನು ಕಡ್ಡಾಯವಾಗಿ ನೇಮಿಸಿಕೊಳ್ಳಬೇಕು ಎಂದು ಆಗ್ರಹಿಸಿ ಸಂಗೀತ ಶಿಕ್ಷಕರ ಸಂಘದಿಂದ ಉಪತಹಸೀಲ್ದಾರ್‌ ಎಸ್‌.ಎಸ್‌. ಬಿರಾದಾರ ಪಾಟೀಲ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
Vijaya Karnataka Web 13-ATHANI-1_53
ಶಿಕ್ಷಣದ ಎಲ್ಲಹಂತಗಳಲ್ಲಿಸಂಗೀತ ಶಿಕ್ಷಕರನ್ನು ನೇಮಿಸಿಕೊಳ್ಳಬೇಕು ಎಂದು ಆಗ್ರಹಿಸಿ ಸಂಗೀತ ಶಿಕ್ಷಕರ ಸಂಘದಿಂದ ಅಥಣಿ ಉಪತಹಸೀಲ್ದಾರ್‌ ಎಸ್‌.ಎಸ್‌. ಬಿರಾದಾರ ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು.


ಈ ವೇಳೆ ಮಾತನಾಡಿದ ಗಾನಯೋಗಿ ಸಂಗೀತ ಪರಿಷತ್‌ ಜಿಲ್ಲಾಕಾರ್ಯದರ್ಶಿ ನವನಾಥ ನಿಕ್ಕಂ ಅವರು, ಬೇಡಿಕೆ ತಕ್ಷಣ ಈಡೇರದಿದ್ದರೆ ಮುಂದಿನ ತಿಂಗಳು ಸಂಘದ ರಾಜ್ಯಾಧ್ಯಕ್ಷ ಚನವೀರ ಕಡಣಿಯವರ ನೇತೃತ್ವದಲ್ಲಿಬೆಂಗಳೂರಿನಲ್ಲಿಪ್ರತಿಭಟನಾ ರಾರ‍ಯಲಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕೆ.ಎಲ್‌. ಕುಂದರಗಿ, ಜ್ಯೋತಿಬಾ ಭೋಸಲೆ, ಅಶೋಕ ಸೂರ‍್ಯವಂಶಿ, ಬಾಬಾಸಾಹೇಬ ಕಾಂಬಳೆ, ಲಲಿತಾ ಮೆಕನಮರಡಿ, ಗಣೇಶ ಮಾನೆ, ಸವಿತಾ ಗುಡ್ಡದ, ಅರ್ಚನಾ ಪಾಟೀಲ, ಪ್ರಿಯಂಕಾ ಪಾಟೀಲ, ನಜಿಮಾ ಮುಲ್ಲಾ, ವಿದ್ಯಾ ಬುರ್ಲಿ, ಪ್ರಿಯಾ ಪಾಟೀಲ ಸೇರಿದಂತೆ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ