ಆ್ಯಪ್ನಗರ

ಅನ್ಯಾಯ ಸರಿಪಡಿಸುವಂತೆ ನೌಕರರ ಸಂಘದಿಂದ ಡಿಸಿಗೆ ಮನವಿ

ಬೆಳಗಾವಿ: ಎಸ್‌ಸಿ, ಎಸ್ಟಿ ನೌಕರರ ಹಿಂಬಡ್ತಿ ಮತ್ತು ಮುಂಬಡ್ತಿ ಪ್ರಕರಣದಲ್ಲಿ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರಕಾರಿ ಎಸ್ಸಿ, ಎಸ್ಟಿ ನೌಕರರ

Vijaya Karnataka 27 May 2018, 5:00 am
ಬೆಳಗಾವಿ: ಎಸ್‌ಸಿ, ಎಸ್ಟಿ ನೌಕರರ ಹಿಂಬಡ್ತಿ ಮತ್ತು ಮುಂಬಡ್ತಿ ಪ್ರಕರಣದಲ್ಲಿ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸರಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿಯ ಜಿಲ್ಲಾ ಘಟಕದವರು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಶನಿವಾರ ಮನವಿ ರವಾನಿಸಿದ್ದಾರೆ.
Vijaya Karnataka Web BLG-2605-2-52-26RAJU-3


ಎಸ್‌ಸಿ/ಎಸ್ಟಿ ನೌಕರರ ಮೀಸಲಾತಿ ಮುಂದುವರಿಸುವ ಸಂಗತಿಯಲ್ಲಿ ಬೆಳಗಾವಿ ಅಧಿವೇಶನದಲ್ಲಿ ರಾಜ್ಯಸರಕಾರ ಬಿಲ್‌ ಪಾಸ್‌ ಮಾಡಿ ಅಂಕಿತ ಹಾಕಲು ರಾಜ್ಯಪಾಲರ ಬಳಿಗೆ ಕಳುಹಿಸಿಕೊಟ್ಟಿತ್ತು. ರಾಜ್ಯಪಾಲರು ಈ ಬಿಲ್‌ನ್ನು ರಾಷ್ಟ್ರಪತಿಗಳಿಗೆ ಕಳುಹಿಸಿರುವುದರಿಂದ ರಾಷ್ಟ್ರಪತಿಗಳು ಕೂಡಲೇ ಗಮನಕ್ಕೆ ತಗೆದುಕೊಂಡು ಪರಿಶೀಲಿಸಿ ಬಿಲ್‌ಗೆ ಅಂಕಿತಹಾಕಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಸಂಘಟನೆ ಜಿಲ್ಲಾಧ್ಯಕ್ಷ ರಾಹುಲ ಮೇತ್ರಿ, ಗೌರವ ಅಧ್ಯಕ್ಷ ಸುರೇಶ ಭೀಮನಾಯ್ಕ್‌, ಪ್ರಧಾನ ಕಾರ್ಯದರ್ಶಿ ಬಸವರಾಜ ಚನ್ನಯ್ಯನವರ್‌, ಉಪಾಧ್ಯಕ್ಷ ಯಲ್ಲಪ್ಪ ಬಾಳೆಗಡ್ಡಿ, ಬಲ್ಲು ರಾಯವ್ವಗೋಳ, ಖಜಾಂಚಿ ಎಂ.ಬಿ. ಮೇತ್ರಿ, ಶಿವಕ್ಕ ಸತ್ಯಾಯಗೋಳ, ರಾಜು ಕೋಲಕಾರ, ಶಶಿಕಾಂತ ಸಿಂಗನ್ನವರ್‌, ಕೆ.ಎಂ. ಮಂಜು, ಸುಮಿತ್ರಾ ದುರ್ಗಿ, ಎಸ್‌.ಕೆ. ಪರಸನ್ನವರ್‌, ಸಂಜಯ ತಳವಾರ, ದತ್ತಾ ಬಿಲಾವರ, ಆರ್‌.ವಿ. ಮುರಾರಿ, ಎಸ್‌.ಎಂ. ನಾಯಕ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ