ಆ್ಯಪ್ನಗರ

ಗಟಾರ ತಡೆಯುವ ಖಾಸಗಿ ಆವರಣ ಗೋಡೆ ತೆರವಿಗೆ ಆಗ್ರಹ

ರಾಯಬಾಗ: ಪಟ್ಟಣದ 13 ನೇ ವಾರ್ಡ್‌ನ ಚಿಂಚಲಿ ರಸ್ತೆ ಸರಕಾರಿ ಭವನದ ಬಳಿ ...

Vijaya Karnataka 25 Aug 2019, 5:00 am
ರಾಯಬಾಗ: ಪಟ್ಟಣದ 13 ನೇ ವಾರ್ಡ್‌ನ ಚಿಂಚಲಿ ರಸ್ತೆ ಸರಕಾರಿ ಭವನದ ಬಳಿ ಚರಂಡಿ ನೀರು ಸರಾಗವಾಗಿ ಹರಿಯದಂತೆ ಖಾಸಗಿ ವ್ಯಕ್ತಿಗಳು ಗಟಾರಕ್ಕೆ ಅಡ್ಡಲಾಗಿ ಆವರಣ ಗೋಡೆ ನಿರ್ಮಿಸಿರುವುದನ್ನು ಕೂಡಲೇ ತೆರವುಗೊಳಿಸಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.
Vijaya Karnataka Web BEL-24RAIBAG2PHOTO1


ಪಟ್ಟಣದ ಲೋಕೋಪಯೋಗಿ ಇಲಾಖೆಯ ಸಭಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ 13 ನೇ ವಾರ್ಡ್‌ ನಿವಾಸಿಗಳಾದ ಗಣಪತಿ ಕಾಂಬಳೆ ಮತ್ತಿತರರು, ಪಟ್ಟಣ ಪಂಚಾಯಿತಿ ಚುನಾವಣೆ ಪೂರ್ವದಲ್ಲಿ ಇಲ್ಲಿನ ಖಾಸಗಿ ವ್ಯಕ್ತಿಯೊಬ್ಬರು ಚರಂಡಿ ನೀರು ಡ್ರೆನೇಜ್‌ ಮೂಲಕ ಹರಿದು ಹೋಗಲು ಒಪ್ಪಿಗೆ ನೀಡಿದ ಮೇರೆಗೆ ಚರಂಡಿ ನಿರ್ಮಿಸುವ ಕಾರ್ಯ ನಡೆದಿತ್ತು. ಆದರೆ ಚುನಾವಣೆ ಘೋಷಣೆಯಾಗಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಅರ್ಧಕ್ಕೆ ನಿಂತ ಕಾಮಗಾರಿ ಈವರೆಗೂ ಪ್ರಾರಂಭವಾಗದ ಕಾರಣ ನೀರು ಹರಿದು ಹೋಗದೆ ರಸ್ತೆ ತುಂಬ ನಿಂತು ಮಲಿನಗೊಂಡು ದುರ್ವಾಸನೆ ಹರಡಿ ಇಲ್ಲಿನ ನಿವಾಸಿಗಳಿಗೆ ತೀವ್ರ ತೊಂದರೆಯಾಗಿದೆ ಎಂದರು.

ಮಲಿನ ನೀರಿನಿಂದ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಮಕ್ಕಳಿಗೆ ಓಡಾಡಲು ತೊಂದರೆಯಾಗುತ್ತಿದೆ. ಚರಂಡಿ ನೀರು ಮನೆಯಲ್ಲಿ ನುಗ್ಗುತ್ತಿದೆ. ಕೊಳವೆಬಾವಿಗಳನೀರೂ ಕಲುಶಿತವಾಗಿದೆ. ದೊಡ್ಡ ಅನಾಹುತಕ್ಕೆ ಮುನ್ನ ಚರಂಡಿ ನೀರು ಹರಿದು ಹೋಗುವಂತೆ ಮಾಡಿ ಸಾರ್ವಜನಿಕರಿಗೆ ಹಾಗೂ ಇಲ್ಲಿನ ನಿವಾಸಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಗಣಪತಿ ಕಾಂಬಳೆ ಅಧಿಕಾರಿಗಳನ್ನು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ದಿಲೀಪ ವೇರ್ಣೇಕರ, ಆಸಿಫ್‌ ಮುಲ್ಲಾ, ಶಂಕರ ಬಾಣಸಗಿ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ