ಆ್ಯಪ್ನಗರ

ಪಿಂಚಣಿ ಸೌಲಭ್ಯ ಕಲ್ಪಿಸಲು ಆಗ್ರಹ

ಬೆಳಗಾವಿ: ರಾಜ್ಯದ ಅನುದಾನಿತ ಶಿಕ್ಷಣ ...

Vijaya Karnataka 22 Dec 2019, 5:00 am
ಬೆಳಗಾವಿ: ರಾಜ್ಯದ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ನಿವೃತ್ತಿ ನಂತರ ಪಿಂಚಣಿ ಸೌಲಭ್ಯ ನೀಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಜಿಲ್ಲಾ ಘಟಕ ಶನಿವಾರ ಬೆಳಗಾವಿ ಅಪರ ಜಿಲ್ಲಾಧಿಕಾರಿ ಎಂ. ಸತೀಶಕುಮಾರಗೆ ಮನವಿ ಸಲ್ಲಿಸಿತು.
Vijaya Karnataka Web 21BGM PHOTO_53
ರಾಜ್ಯ ಅನುದಾನಿತ ಪಿಂಚಣಿ ವಂಚಿತ ನೌಕರರ ಸಂಘದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.


ಈ ವೇಳೆ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ಎಂ. ಮಾಮೂಲದಾರ ಮಾತನಾಡಿ, ರಾಜ್ಯದ ಅನುದಾನಿತ ವಿದ್ಯಾ ಸಂಸ್ಥೆಗಳಲ್ಲಿ2006 ಏ.1ಕ್ಕಿಂತ ಮೊದಲು ನೇಮಕಗೊಂಡು ನಂತರ ಅನುದಾನಕ್ಕೊಳಪಟ್ಟ ಮತ್ತು 2006 ಏ.1ರ ನಂತರ ನೇಮಕ ಹೊಂದಿ ವೇತನ ಪಡೆಯುತ್ತಿರುವ ಸಾವಿರಾರು ನೌಕರರಿಗೆ ಹಳೆಯ ನಿಶ್ಚಿತ ಪಿಂಚಣಿ ಅಥವಾ ನೂತನ ಪಿಂಚಣಿ ಯೋಜನೆ ಸೌಲಭ್ಯಗಳಿರುವುದಿಲ್ಲ. ಪಿಂಚಣಿ ಸೌಲಭ್ಯ ದೊರೆಯದೆ ಈಗಾಗಲೇ 2000ಕ್ಕೂ ಹೆಚ್ಚು ನೌಕರರು ಕೊನೆಯ ತಿಂಗಳ ಸಂಬಳ ಮಾತ್ರ ಪಡೆದು ಬರಿಗೈಯಲ್ಲಿನಿವೃತ್ತಿಯಾಗಿದ್ದಾರೆ. ಅನೇಕ ನೌಕರರು ಸೇವೆಯಲ್ಲಿರುವಾಗಲೇ ಮರಣ ಹೊಂದಿದ್ದಾರೆ. ಅವರ ಕುಟುಂಬಗಳಿಗೆ ಯಾವುದೇ ರೀತಿಯ ಆಥಿಕ ಸೌಲಭ್ಯಗಳು ಸಿಗದೆ ಸಂಕಷ್ಟದಲ್ಲಿಜೀವನ ಕಳೆಯುತ್ತಿದ್ದಾರೆ. ಪಿಂಚಣಿ ನೀಡುವಂತೆ ರಾಜ್ಯಾದ್ಯಂತ ಹೋರಾಟ ಮಾಡಿದರೂ ಸರಕಾರ ಬೇಡಿಕೆ ಈಡೇರಿಸಿಲ್ಲಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ$ ಬಿ.ಸ್‌. ಕರಲಿಂಗಣ್ಣವರ, ಉಪಾಧ್ಯಕ್ಷ$ ಜೆ.ಎಸ್‌. ಕಾಮೋಜಿ, ಕಾಯದಶಿ ಸಂತೋಷ ಬಡ್ಡಿಮನಿ, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಮಮತಾ ಪೂಜೇರ, ಹಾಗೂ ಪದಾಧಿಕಾರಿಗಳಾದ ಆರ್‌.ಬಿ. ಲಕ್ಕನಗೌಡರ, ಆರ್‌.ಎನ್‌. ಇಟಗಿ, ಎನ್‌.ಎಂ. ಉಪ್ಪಿನ, ಎಸ್‌.ಐ. ಮೊರಬದ, ಬಿ.ಎನ್‌. ತೋಟಗಿ, ಎಂ. ಜಟ್ಟೆನ್ನವರ, ಎಸ್‌.ವಿ. ಭಜಂತ್ರಿ, ಟಿ.ಬಿ. ಪಡೆನ್ನವರ, ಬಿ.ಎಂ. ಸುಣಗಾರ, ಎಸ್‌.ಕೆ. ಗಸ್ತಿ, ಎಸ್‌.ಎಸ್‌. ಮಂಗಳೂಳಿ, ಬಿ.ಆರ್‌. ಹಿರೇಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪಿಂಚಣಿ ಸೌಲಭ್ಯ ಪ್ರತಿಯೊಬ್ಬ ನೌಕರನ ಹಕ್ಕು. ಆದರೆ, ಸರಕಾರ 2006ರ ನಂತರ ನೇಮಕ ಹೊಂದಿದ ಅನುದಾನಿತ ನೌಕರರಿಗೆ ಈ ವಿಷಯದಲ್ಲಿಅನ್ಯಾಯ ಮಾಡುತ್ತಿದೆ. ಇದನ್ನು ಖಂಡಿಸಿ 2020ರ ಜ.10ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿಅಹೋರಾತ್ರಿ ಮತ್ತು ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗಿದೆ.
-ಎಸ್‌.ಎಂ. ಮಾಮೂಲದಾರ,

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ