ಆ್ಯಪ್ನಗರ

ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ತಹಸೀಲ್ದಾರ್‌ಗೆ ಮನವಿ

ರಾಯಬಾಗ: ಪಟ್ಟಣದ ಹೃದಯ ಭಾಗದಲ್ಲಿ ಅಪೂರ್ಣಗೊಂಡ ಹಲವು ಕಾಮಗಾರಿಗಳಿಂದ ಸಾರ್ವಜನಿಕರ ಸಂಚಾರಕ್ಕೆ ತೀವ್ರ ...

Vijaya Karnataka 31 Jan 2019, 5:00 am
ರಾಯಬಾಗ : ಪಟ್ಟಣದ ಹೃದಯ ಭಾಗದಲ್ಲಿ ಅಪೂರ್ಣಗೊಂಡ ಹಲವು ಕಾಮಗಾರಿಗಳಿಂದ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ. ಇದನ್ನು ಕಂಡೂ ಕಾಣದಂತೆ ವರ್ತಿಸುತ್ತಿಧಿರುವ ಪಪಂ ಮುಖ್ಯಾಧಿಕಾರಿ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಗ್ರೇಡ್‌-2 ತಹಸೀಲ್ದಾರ್‌ ಬಸಪ್ಪ ಪೂಜಾ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
Vijaya Karnataka Web BEL-28RAIBAG5PHOTO


ಪಟ್ಟಣದ ದ್ವಿಪಥ ಮುಖ್ಯರಸ್ತೆ ಸೇರಿದಂತೆ ಚರಂಡಿ, ಪಾದಚಾರಿ ರಸ್ತೆ ಕಾಮಗಾರಿಗಳನ್ನು 6 ತಿಂಗಳಲ್ಲಿ ಮುಗಿಸುವ ಕರಾರು ಇದೆ. ಆದರೂ ಅಧಿಕಾರಿಗಳು ಕೆಲಸ ಆರಂಭಿಸಿ ಎರಡು ವರ್ಷ ಕಳೆದರೂ ಪೂರ್ಣಗೊಳಿಸಿಲ್ಲ. ಇದು ಪಟ್ಟಣದ ಪ್ರಮುಖ ರಸ್ತೆಯಾಗಿದ್ದು, ರಸ್ತೆಯ ಮೇಲೆ ಪ್ರತಿನಿತ್ಯ ಕಬ್ಬಿನ ಟ್ಯಾಕ್ಟರ್‌ಗಳು, ಬಸ್ಸು, ಲಾರಿ, ಆಟೋ ಸೇರಿದಂತೆ ನೂರಾರು ವಾಹನಗಳು ಚಲಿಸುತ್ತಿವೆ. ಅರ್ಧಕ್ಕೇ ನಿಂತಿರುವ ಕಾಮಗಾರಿಯಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ಭಯದಲ್ಲಿ ಸಂಚರಿಸುವಂತಾಗಿದೆ.

ಕಾಂಕ್ರೀಟ್‌ ಡಿವೈಡರ್‌ ನಿರ್ಮಿಸಿ :
ಈ ರಸ್ತೆಗೆ ಕಳಪೆ ಮಟ್ಟದ ಡಿವೈಡರ್‌ ಅಳವಡಿಸಲಾಗಿದ್ದು ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಡಿವೈಡರ್‌ ಹಾಳಾಗಿ ಹೋಗುತ್ತಿವೆ. ಕಾಮಗಾರಿ ಮಾಡುವಾಗ ನಿಖರವಾಗಿ ರಸ್ತೆ ಬದಿಯ ಗಡಿಯನ್ನು ಗುರುತಿಸಿ ಅಳತೆ ಮಾಡದೇ ಬೇಕಾಬಿಟ್ಟಿಯಾಗಿ ವ್ಯಾಪಾರಸ್ಥರ ಅಂಗಡಿಧಿಗಧಿಳನ್ನು ಕೆಡವಿಧಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದ ವ್ಯಾಪಾರಸ್ಥರು, ಹಳೆಯ ಕಾಮಗಾರಿಯನ್ನು ತೆರವುಗೊಳಿಸಿ ಕಾಂಕ್ರೀಟ್‌ ಡಿವೈಡರ್‌ ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಾರ್ವಜಕರ ಈ ತೊಂದರೆಯನ್ನು ಗಮನಿಸಿ ವಿಳಂಬ ನೀತಿ ಅನುಸರಿಸದೆ ಬೇಗನೆ ಕಾಮಗಾರಿ ಮುಗಿಸಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ವೇಳೆ ಲಕ್ಷ ್ಮಣ ಕೋಳಿ, ಮಹಾದೇವ ಕೋಕಾಟೆ, ಬೀರಪ್ಪ ವಂಟಮೂರೆ, ಎ.ಎಂ. ಗಡ್ಡೆ, ಅಪ್ಪಾಜಿ ಪೂಜೇರಿ, ಸಂತೋಷ ಮೇತ್ರಿ, ಶಿವಾನಂದ ಬಂತೆ, ಮಾಯಪ್ಪ ಪೂಜೇರಿ, ಸಿದ್ದು ವಂಟಮೂರೆ, ವೈಭವ ಇಜಾರೆ, ಚಂದ್ರಕಾಂತ ನಾವಿ, ಉದಯ ಮಾಳಿ ಹಾಗೂ ಸಾರ್ವಜನಿಕರು, ವ್ಯಾಪಾರಸ್ಥರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ