ಆ್ಯಪ್ನಗರ

ಅಥಣಿಗೆ ರೈಲು ಮಾರ್ಗ ಕಲ್ಪಿಸಲು ಆಗ್ರಹಿಸಿ ಮನವಿ

ಅಥಣಿ: ಅಥಣಿಗೆ ರೈಲು ಮಾರ್ಗ ಕಲ್ಪಿಸಿ ಕ್ಷೇತ್ರದ ಜನತೆಯ ಅಭಿವೃದ್ಧಿಗೆ ಸಹಕರಿಸಲು ಆಗ್ರಹಿಸಿ ಅಥಣಿ ರೈಲು ಮಾರ್ಗ ಹೋರಾಟ ಸಮಿತಿ ವತಿಯಿಂದ ಪ್ರಧಾನಿ ನರೇಂದ್ರ ...

Vijaya Karnataka 11 Jun 2019, 5:00 am
ಅಥಣಿ : ಅಥಣಿಗೆ ರೈಲು ಮಾರ್ಗ ಕಲ್ಪಿಸಿ ಕ್ಷೇತ್ರದ ಜನತೆಯ ಅಭಿವೃದ್ಧಿಗೆ ಸಹಕರಿಸಲು ಆಗ್ರಹಿಸಿ ಅಥಣಿ ರೈಲು ಮಾರ್ಗ ಹೋರಾಟ ಸಮಿತಿ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ಉಪತಹಸೀಲ್ದಾರ್‌ ರಾಜು ಬುರ್ಲಿ ಮೂಲಕ ಮನವಿ ಸಲ್ಲಿಸಲಾಯಿತು.
Vijaya Karnataka Web BEL-10 ATHANI-04


ಅನಂತರ ಮನವಿ ಸಲ್ಲಿಸಿ ಮಾತನಾಡಿದ ರೈಲು ಹೋರಾಟ ಸಮಿತಿ ಅಧ್ಯಕ್ಷ ರವಿ ಪೂಜಾರಿ, ಹಲವು ವರ್ಷಗಳ ಇತಿಹಾಸ ಇರುವ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೇಡಬಾಳ ರೈಲ್ವೆ ಸ್ಟೇಶನ್‌ನಿಂದ ಅಥಣಿ ಐಗಳಿ, ತಿಕೋಟಾ ಮಾರ್ಗವಗೊ ವಿಜಯಪುರವರೆಗೆ ರೈಲು ಮಾರ್ಗದ ಯೋಜನೆಯನ್ನು ಬ್ರಿಟಿಷ್‌ ಸರಕಾರ ಸಿದ್ಧಪಡಿಸಿತ್ತು. ಆದರೆ ದುರದೃಷ್ಟಕರ ಸಂಗತಿಯೆಂದರೆ ದೇಶಕ್ಕೆ ಸ್ವತಂತ್ರ ಸಿಕ್ಕು 72 ವರ್ಷವಾದರೂ ಅಥಣಿಗೆ ಇನ್ನೂ ರೈಲು ಮಾರ್ಗ ಕನಸಾಗಿಯೇ ಉಳಿದಿದೆ ಎಂದು ಆರೋಪಿಸಿದರು.

ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ಈ ಯೋಜನೆ ರೂಪುಗೊಂಡರೆ ಅಥಣಿ ಜನತೆಗೆ ಸಾಕಷ್ಟು ಅನುಕೂಲವಾಗುತ್ತದೆ. ಮುಖ್ಯವಾಗಿ ಈ ಭಾಗದ ನಿರುದ್ಯೋಗದ ಸಮಸ್ಯೆ ನಿವಾರಣೆಯಾಗುತ್ತದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳ ಜತೆಗೆ ಯೋಜನೆ ಜಾರಿಗೆ ತಾವೂ ಚರ್ಚಿಸುವುದಾಗಿ ತಿಳಿಸಿದರು.

ರೈತ ಸಂಘದ ಅಧ್ಯಕ್ಷ ಮಹಾದೇವ ಮಡಿವಾಳ, ಅಣ್ಣಾಸಾಹೇಬ ತೆಲಸಂಗ, ಆದಿತ್ಯ ಪವಾರ, ಲಕ್ಷ ್ಮಣ ವೈದಿ, ಜಗನ್ನಾಥ ಬಾಮನೆ, ಸುರೇಶ ಕೊಳ್ಳೊಳ್ಳಿ, ದೀಪಕ ಶಿಂಧೆ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ