ಆ್ಯಪ್ನಗರ

ಟೋಲ್‌ ಸಂಗ್ರಹ ರದ್ದುಗೊಳಿಸಲು ಮನವಿ

ಬೈಲಹೊಂಗಲ: ಹಿರೇಬಾಗೇವಾಡಿ-ಬೈಲಹೊಂಗಲ-ಸವದತ್ತಿ ಗ್ರಾಮೀಣ ...

Vijaya Karnataka 28 Dec 2019, 5:00 am
ಬೈಲಹೊಂಗಲ: ಹಿರೇಬಾಗೇವಾಡಿ-ಬೈಲಹೊಂಗಲ-ಸವದತ್ತಿ ಗ್ರಾಮೀಣ ಪ್ರದೇಶಕ್ಕೆ ತೆರಳುವ ರಸ್ತೆಯಲ್ಲಿಟೋಲ್‌ ಸಂಗ್ರಹಣೆಯನ್ನು ಜನಸಾಮಾನ್ಯರ ಹಿತದೃಷ್ಟಿಯಿಂದ ಹಿಂಪಡೆಯಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಗ್ರಾಮೀಣ ಅಧ್ಯಕ್ಷ, ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ ನೇತೃತ್ವದಲ್ಲಿಜಿಲ್ಲಾಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ಗೆ ಬೆಳಗಾವಿಯಲ್ಲಿಶುಕ್ರವಾರ ರೈತ ಸಂಘಟನೆಯ ಸದಸ್ಯರು ಮನವಿ ಸಲ್ಲಿಸಿದರು.
Vijaya Karnataka Web 27HTP9_53
ಹಿರೇಬಾಗೇವಾಡಿ-ಬೈಲಹೊಂಗಲ-ಸವದತ್ತಿ ಗ್ರಾಮೀಣ ಪ್ರದೇಶಕ್ಕೆ ತೆರಳುವ ರಸ್ತೆಯಲ್ಲಿಟೋಲ್‌ ಸಂಗ್ರಹ ಕೇಂದ್ರ ಬಂದ್‌ ಮಾಡುವಂತೆ ಜಿಲ್ಲಾಉಸ್ತುವಾರಿ ಸಚಿವ ಜಗದೀಶ ಶೆಟ್ಟರಿಗೆ ಮನವಿ ಸಲ್ಲಿಸಲಾಯಿತು.


ಬೈಲಹೊಂಗಲ-ಸವದತ್ತಿ-ಕಿತ್ತೂರು-ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಕೇವಲ 60 ಕೀ.ಮಿ. ರಸ್ತೆಗೆ 2 ಟೋಲ್‌ ಸಂಗ್ರಹ ಕೇಂದ್ರ ನಿರ್ಮಿಸಿರುವುದು ನಿಯಮ ಬಾಹಿರ. ರೈತರು ಬೆಳೆದ ಬೆಳೆಗಳನ್ನು ಸಾಗಾಣಿಕೆಗೆ ರಸ್ತೆ ಉಪಯೋಗಿಸುತ್ತಾರೆ. ಸರಕಾರ ಟೋಲ್‌ ಸಂಗ್ರಹಕ್ಕೆ ಮುಂದಾದರೆ ರೈತರ ಮೇಲೆ ಹೆಚ್ಚಿನ ಹೊರೆ ಬೀಳಲಿದೆ. ಕಾರಣ ಮಹಾರಾಷ್ಟ್ರ ಮಾದರಿಯಲ್ಲಿರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ಅನುದಾನ ಬಿಡುಗಡೆಗೊಳಿಸಿ ಟೋಲ್‌ನ್ನು ಸಂಪೂರ್ಣವಾಗಿ ಮುಕ್ತಗೊಳಿಸಬೇಕೆಂದು ಮನವಿ ಮಾಡಿದರು.

ಸವದತ್ತಿ ಶಾಸಕ ಆನಂದ ಮಾಮನಿ, ಎಫ್‌.ಎಸ್‌. ಸಿದ್ದನಗೌಡರ, ಬಿ.ಎಂ. ಚಿಕ್ಕನಗೌಡರ, ಮಹಾಂತೇಶ ಕಮತ, ಸುರೇಶ ಹೊಳಿ, ಮಲ್ಲಿಕಾರ್ಜುನ ಕರಡಿಗುದ್ದಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ