ಆ್ಯಪ್ನಗರ

ಕಸನಾಳ ಗ್ರಾಮಸ್ಥರಿಂದ ಜಿಪಂ ಸಿಇಒಗೆ ಮನವಿ

ಖಡಕಲಾಟ : ಬೇಸಿಗೆಯ ತಾಪ ದಿನದಿಂದ ದಿನಕ್ಕೆ ಏರುತ್ತಿರುವ ಸಂದರ್ಭದಲ್ಲಿ ಪ್ರತ್ಯೇಕ ನೀರು ಸರಬರಾಜು ಯೋಜನೆ ಮೂಲಕ ಗ್ರಾಮಕ್ಕೆ ನೀರು ಪೂರೈಕೆ ಮಾಡಲು ಆಗ್ರಹಿಸಿ ...

Vijaya Karnataka 11 May 2019, 5:00 am
ಖಡಕಲಾಟ : ಬೇಸಿಗೆಯ ತಾಪ ದಿನದಿಂದ ದಿನಕ್ಕೆ ಏರುತ್ತಿರುವ ಸಂದರ್ಭದಲ್ಲಿ ಪ್ರತ್ಯೇಕ ನೀರು ಸರಬರಾಜು ಯೋಜನೆ ಮೂಲಕ ಗ್ರಾಮಕ್ಕೆ ನೀರು ಪೂರೈಕೆ ಮಾಡಲು ಆಗ್ರಹಿಸಿ ಸಮೀಪದ ಕಸನಾಳ ಗ್ರಾಮಸ್ಥರು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು.
Vijaya Karnataka Web BLG-1005-2-52-10 KHDKLT 2


ಈ ಕುರಿತು ಕಳೆದ ಏ.30 ರಂದು ಮಾಣಕಾಪುರ-ಕಸನಾಳ ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿ ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಆಗ ಸ್ಥಳಕ್ಕೆ ಯಾವುದೇ ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಬಂದು ಸ್ಪಂದಿಸದ ಹಿನ್ನಲೆಯಲ್ಲಿ ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ.

ಬಹುಗ್ರಾಮ ಕುಡಿಯುವ ನೀರು ಯೋಜನೆಗೆ 2.90ಕೋಟಿ ರೂ. ಅನುದಾನ ಮಂಜೂರಾಗಿದೆ. ಗ್ರಾಮಕ್ಕೆ ಮಾಣಕಾಪುರದಿಂದ ನೀರು ಸರಬರಾಜು ಮಾಡುವುದಾಗಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಯೋಜನೆಯು ಸಮೀಪದ ದೂಧಗಂಗಾ ನದಿ ಕಸನಾಳ ಗ್ರಾಮದಿಂದಲೇ ಹಾದು ಹೋಗುತ್ತಿರುವಾಗ ಮುಂದಿನ ಗ್ರಾಮದಿಂದ ನೀರು ಸರಬರಾಜು ಮಾಡುವ ಸಾಹಸ ಅಗತ್ಯವಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಸುಖದೇವ ನಾಯಿಕ, ಗ್ರಾಪಂ ಸದಸ್ಯರಾದ ತುಳಸಿದಾಸ ನಾಯಿಕ, ಪಿಂಟು ಕಾಂಬಳೆ, ಕಿರಣ ಜಾಧವ, ಡಾ.ಅಜಿತ್‌ ಪಾಟೀಲ, ವಿಶ್ವಾಸ ನಾಯಿಕ್‌, ಅಶೋಕ ನಾಯಿಕ, ಅಜಿತ್‌ ಖೋತ್‌, ಪಂಡಿತ್‌ ನಾಯಿಕ್‌ ಮತ್ತಿತರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ