ಆ್ಯಪ್ನಗರ

ಹಂದಿಗಳ ಹಾವಳಿ ನಿಯಂತ್ರಿಸಲು ಮನವಿ

ಖಾನಾಪುರ: ತಾಲೂಕಿನ ನಂದಗಡ ಗ್ರಾಮದಲ್ಲಿ ಗಂಗಪ್ಪ ಕೊರವ ಎಂಬ ವ್ಯಕ್ತಿ ಹಂದಿ ಸಾಕಾಣಿಕೆ ಮಾಡುತ್ತಿದ್ದು, ಇದರಿಂದಾಗಿ ಗ್ರಾಮದ ಶುಚಿತ್ವಕ್ಕೆ ತೊಂದರೆ ಆಗಿದೆ...

Vijaya Karnataka 13 Jul 2019, 5:00 am
ಖಾನಾಪುರ : ತಾಲೂಕಿನ ನಂದಗಡ ಗ್ರಾಮದಲ್ಲಿ ಗಂಗಪ್ಪ ಕೊರವ ಎಂಬ ವ್ಯಕ್ತಿ ಹಂದಿ ಸಾಕಾಣಿಕೆ ಮಾಡುತ್ತಿದ್ದು, ಇದರಿಂದಾಗಿ ಗ್ರಾಮದ ಶುಚಿತ್ವಕ್ಕೆ ತೊಂದರೆ ಆಗಿದೆ. ಕಾರಣ ಹಂದಿಗಳ ಹಾವಳಿ ನಿಯಂತ್ರಿಸುವಂತೆ ಆಗ್ರಹಿಸಿ ತಹಸೀಲ್ದಾರ್‌ ಕಚೇರಿಗೆ ಗ್ರಾಮದ ಗ್ರಾಪಂ ಅಧ್ಯಕ್ಷ ರು, ಸದಸ್ಯರು, ಪಿಡಿಒ ಶುಕ್ರವಾರ ಮನವಿ ಸಲ್ಲಿಸಿದರು.
Vijaya Karnataka Web BEL-12KHANAPUR2


ಈ ಸಂದರ್ಭದಲ್ಲಿ ಹಂದಿಗಳ ಉಪಟಳದ ಬಗ್ಗೆ ತಹಸೀಲ್ದಾರರಿಗೆ ಮಾಹಿತಿ ನೀಡಿದ ಗ್ರಾಪಂ ಅಧ್ಯಕ್ಷ ಶಫಿ ಖಾಜಿ, ಗ್ರಾಮದ ಚಿಕ್ಕಮಕ್ಕಳು, ವಯೋವೃದ್ಧರು ಮತ್ತು ಮಹಿಳೆಯರ ಮೇಲೆ ಹಂದಿಗಳು ದಾಳಿ ನಡೆಸುತ್ತಿರುವ ಕಾರಣ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಗ್ರಾಮದ ರಸ್ತೆಗಳು, ಸಾರ್ವಜನಿಕ ಪ್ರದೇಶಗಳು ಮಲೀನಗೊಳ್ಳುತ್ತಿವೆ. ಈಗಾಗಲೇ ಗಂಗಪ್ಪ ಅವರಿಗೆ ಗ್ರಾಪಂ ವತಿಯಿಂದ ಎಚ್ಚರಿಕೆ ಪತ್ರ ನೀಡಿ ಸಾಕಷ್ಟು ಬಾರಿ ಹಂದಿಗಳನ್ನು ಹೊರಗೆ ಬಿಡದಂತೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ತಾಲೂಕು ಆಡಳಿತ ಮಧ್ಯ ಪ್ರವೇಶಿಸಿ ಹಂದಿಗಳ ಹಾವಳಿಯಿಂದ ನಂದಗಡ ಗ್ರಾಮವನ್ನು ಪಾರುಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿದರು.

ಮನವಿ ಸ್ವೀಕರಿಸಿದ ತಹಸೀಲ್ದಾರ್‌ ಶಿವಾನಂದ ಉಳ್ಳೇಗಡ್ಡಿ, ಈ ವಿಷಯವಾಗಿ ನಂದಗಡ ಪೊಲೀಸರು ಮತ್ತು ಪಶುವೈದ್ಯಕೀಯ ಇಲಾಖೆಯವರಿಗೆ ಪತ್ರ ಬರೆದು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸುವುದಾಗಿ ಹೇಳಿದರು. ಪಿಡಿಒ ಕೆ.ಎಸ್‌. ಗಣೇಶ್‌, ಸದಸ್ಯರಾದ ಪ್ರಕಾಶ ಭಜಂತ್ರಿ, ರಮೇಶ ಜಂಗಳಿ, ಬೇಬಿ ಚಾಪಗಾಂವಕರ, ಶ್ಯಾಮಲವ್ವ ಡೋಣಿ, ಮಹಾಂತೇಶ ರಾಹೂತ, ಮಹಾಂತೇಶ ಹುಡೇದಾರ, ಸುನಂದಾ ರಾಮಗುರವಾಡಿ, ಧೀರಜ ಫಾಥರ್ಡೆ, ರಾಜೇಂದ್ರ ಲಕ್ಕೇಬೈಲಕರ, ದಿಲೀಪಸಿಂಗ್‌ ಧಾಮಣೇಕರ, ಅಶ್ವಿನಿ ಹೊಸೂರಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ