ಆ್ಯಪ್ನಗರ

ಯಮಕನಮರಡಿಯಲ್ಲಿ ಕಂದಾಯ ಸಚಿವ ಆರ್‌.ಅಶೋಕ್‌ ಅವರಿಂದ ಬೆಳೆ ಹಾನಿ ವೀಕ್ಷಣೆ

ಯಮಕನಮರಡಿ: ಗ್ರಾಮದ ಸಿದ್ಧಯ್ಯ ಮಠಪತಿ ಅವರ ಟೊಮೆಟೋ ...

Vijaya Karnataka 20 Oct 2020, 5:00 am
ಯಮಕನಮರಡಿ: ಗ್ರಾಮದ ಸಿದ್ಧಯ್ಯ ಮಠಪತಿ ಅವರ ಟೊಮೆಟೋ ಬೆಳೆ ಹಾಗೂ ಆನಂದ ಚನ್ನಪ್ಪಗೋಳ ಅವರ ಕ್ಯಾಬೀಜ್‌ ಬೆಳೆಯನ್ನು ಕಂದಾಯ ಸಚಿವ ಆರ್‌.ಅಶೋಕ್‌ ಸೋಮವಾರ ಹೊಲಕ್ಕೆ ಭೇಟಿ ನೀಡಿ ವೀಕ್ಷಿಸಿ, ಮಾಹಿತಿ ಪಡೆದರು.
Vijaya Karnataka Web 19YMD4_53
ಯಮಕನಮರಡಿಯಲ್ಲಿ ಹಾನಿಗೊಳಗಾದ ರೈತರ ಬೆಳೆ ವೀಕ್ಷಿಸುತ್ತಿರುವ ಕಂದಾಯ ಸಚಿವ ಆರ್‌. ಅಶೋಕ್‌.


''ಕಳೆದ ವರ್ಷ ನೆರೆಯ ನಂತರ ಈ ಬಾರಿ ಎರಡು ಸಲ ಹೆಚ್ಚು ಮಳೆಯಾಗಿ ಹಲವಾರು ಜಿಲ್ಲೆಗಳಲ್ಲಿ ಹಾನಿಯಾಗಿದೆ. ಹಾನಿಗೊಳಗಾದ ಒಂದು ಹೆಕ್ಟೇರ್‌ ಪ್ರದೇಶದ ರೈತರಿಗೆ 10500 ರೂ. ನೀಡಲಾಗುವುದು. ಅದೇ ರೀತಿ ಹಾನಿಗೀಡಾದ ನಾನಾ ಬೆಳೆಗಳ ಬಗ್ಗೆ ಕೂಡ ಪರಿಹಾರ ನೀಡಲು ಸರಕಾರ ಬದ್ಧವಿದೆ'', ಎಂದರು.

ಈ ವೇಳೆ ಗ್ರಾಮದ ಶೇಖರ ರಾಜು ಕೊಂಕಣಿ ಎಂಬುವರು, ಕಳೆದ ಬಾರಿ ಸುರಿದ ಮಳೆಯಿಂದ ತಮ್ಮ ಮನೆ ಸಂಪೂರ್ಣ ಬಿದ್ದುಹೋಗಿದ್ದು ಪರಿಹಾರ ಹಣ ದೊರೆತಿಲ್ಲ ಎಂದು ಸಚಿವರ ಎದುರು ಅಳಲು ತೋಡಿಕೊಂಡರು.

ಸಚಿವ ರಮೇಶ ಜಾರಕಿಹೊಳಿ, ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ಯುವ ಧುರೀಣ ರವೀಂದ್ರ ಹಂಜಿ, ಮಾರುತಿ ಅಷ್ಟಗಿ, ಪಾರೇಶ ಮಲಾಜಿ, ಸುರೇಶ ಕೇದನೂರಿ, ಸಿದ್ದಣ್ಣ ಹಾಲದೇವರಮಠ, ಮಹಾವೀರ ನಾಶಿಪುಡಿ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ