ಆ್ಯಪ್ನಗರ

ಕಬಡ್ಡಿ ಪಂದ್ಯಾವಳಿಯ ರಿಕ್ಷಾ ಪ್ರಚಾರ

ಅಥಣಿ: ಪಟ್ಟಣದಲ್ಲಿ ಜಾಧವಜೀ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ನಿಮಿತ್ತ ಆಯೋಜಿಸಲಾಗಿರುವ ರಾಷ್ಟ್ರಮಟ್ಟದ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯ ಕುರಿತು ಸಾರ್ವಜನಿಕರಿಗೆ ಮಾಹಿತಿ ...

Vijaya Karnataka 11 Feb 2019, 5:00 am
ಅಥಣಿ: ಪಟ್ಟಣದಲ್ಲಿ ಜಾಧವಜೀ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ನಿಮಿತ್ತ ಆಯೋಜಿಸಲಾಗಿರುವ ರಾಷ್ಟ್ರಮಟ್ಟದ ಪುರುಷರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ಕೈಗೊಂಡಿದ್ದ ರಿಕ್ಷಾ ಪ್ರಚಾರಕ್ಕೆ ಪಂದ್ಯಾವಳಿ ಸಂಘಟನಾ ಸಮಿತಿ ಅಧ್ಯಕ್ಷ ಆರ್‌.ಬಿ. ದೇಶಪಾಂಡೆ ಚಾಲನೆ ನೀಡಿದರು.
Vijaya Karnataka Web BEL-10 ATHANI-02


ನಂತರ ಮಾತನಾಡಿದ ಅವರು 'ಸಂಸ್ಥೆಯ ಹಳೆಯ, ಹಾಲಿ ವಿದ್ಯಾರ್ಥಿಗಳು, ಸಂಸ್ಥೆಯ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ, ಅಥಣಿ ಹಾಗೂ ಸುತ್ತಮುತ್ತಲಿನ ಎಲ್ಲ ಸಾರ್ವಜನಿಕರಿಗೂ ಪಂದ್ಯಾವಳಿಯಲ್ಲಿ ಅವಕಾಶ ಕಲ್ಪಿಸಲಾಗಿದೆ' ಎಂದು ಮಾಹಿತಿ ನೀಡಿದರು.

ಈ ವೇಳೆ ಶತಮಾನೋತ್ಸವ ಸಮಿತಿ ಅಧ್ಯಕ್ಷ ರಾಮ ಕುಲಕರ್ಣಿ ಸಂಯೋಜಕ ಡಾ. ಪಿ.ಪಿ. ಮಿರಜ, ದೈಹಿಕ ನಿರ್ದೇಶಕ ಮತ್ತು ಪಂದ್ಯಾಟಗಳ ಸಂಘಟನಾ ಕಾರ್ಯದರ್ಶಿ ಪ್ರಕಾಶ ನರಗಟ್ಟಿ , ಸಂಜೀವ ಕುಲಕರ್ಣಿ, ಬಾಳೇಶ ಬಮನಾಳೆ, ಆರ್‌.ಎ. ಜೋಶಿ, ಶಶಿಧರ ಬರ್ಲಿ, ಸಚಿನ ಬಿದರಿ ಮತ್ತಿತರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ