ಆ್ಯಪ್ನಗರ

ರಿಕ್ಷಾ ಚಾಲಕರಿಂದ ಸಚಿವ ಸತೀಶ್‌ಗೆ ಮನವಿ ಜಿಲ್ಲಾಡಳಿತದ ನಿಯಮ ಸಡಿಲಿಕೆಗೆ ಆಗ್ರಹ

ಬೆಳಗಾವಿ: ಮಕ್ಕಳನ್ನು ಶಾಲೆಗಳಿಗೆ ಕರೆದೊಯ್ಯುವ ಆಟೋರಿಕ್ಷಾಗಳ ಮೇಲೆ ಜಿಲ್ಲಾಡಳಿತ ಹೇರಿದ ನಿರ್ಬಂಧ ವಿರೋಧಿಸಿ ಕಳೆದ ಗುರುವಾರದಿಂದ ಪ್ರತಿಭಟನೆ ನಡೆಸಿರುವ ಆಟೋ ...

Vijaya Karnataka 1 Jul 2019, 5:00 am
ಬೆಳಗಾವಿ: ಮಕ್ಕಳನ್ನು ಶಾಲೆಗಳಿಗೆ ಕರೆದೊಯ್ಯುವ ಆಟೋರಿಕ್ಷಾಗಳ ಮೇಲೆ ಜಿಲ್ಲಾಡಳಿತ ಹೇರಿದ ನಿರ್ಬಂಧ ವಿರೋಧಿಸಿ ಕಳೆದ ಗುರುವಾರದಿಂದ ಪ್ರತಿಭಟನೆ ನಡೆಸಿರುವ ಆಟೋ ಚಾಲಕರು, ನಿಯಮಗಳಲ್ಲಿ ಸಡಿಲಿಕೆ ಮಾಡುವಂತೆ ಆಗ್ರಹಿಸಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.
Vijaya Karnataka Web rickshaw drivers appeal to satish demand for relaxation of district authorities rule
ರಿಕ್ಷಾ ಚಾಲಕರಿಂದ ಸಚಿವ ಸತೀಶ್‌ಗೆ ಮನವಿ ಜಿಲ್ಲಾಡಳಿತದ ನಿಯಮ ಸಡಿಲಿಕೆಗೆ ಆಗ್ರಹ


ನೂರಾರು ಸಂಖ್ಯೆಯಲ್ಲಿ ಆಟೋರಿಕ್ಷಾಗಳೊಂದಿಗೆ ಆಗಮಿಸಿದ್ದ ಚಾಲಕರು ಸಚಿವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು. ರಿಕ್ಷಾವೊಂದರಲ್ಲಿ 6ಕ್ಕಿಂತ ಹೆಚ್ಚಿನ ಶಾಲಾ ಮಕ್ಕಳನ್ನು ಒಯ್ಯದಿರುವಂತೆ ಜಿಲ್ಲಾಡಳಿತ ನಿಯಮ ರೂಪಿಸಿದೆ. ಈ ನಿಯಮದಿಂದ ನಮಗೆ ಆರ್ಥಿಕ ಹೊರೆ ಉಂಟಾಗಲಿದೆ. ಕನಿಷ್ಠ 10 ಮಕ್ಕಳನ್ನು ಒಯ್ಯಲು ಅವಕಾಶ ಮಾಡಿಕೊಡುವ ಮೂಲಕ ನಮ್ಮ ಜೀವನ ನಿರ್ವಹಣೆಗೆ ಅನುವು ಮಾಡಿಕೊಡಬೇಕು ಎಂದು ವಿನಂತಿಸಿದರು.

ಚಾಲಕರ ಮನವಿಗೆ ಸ್ಪಂದಿಸಿದ ಸಚಿವರು, ಈ ವಿಷಯವಾಗಿ ಜಿಲ್ಲಾಧಿಕಾರಿ, ಪೊಲೀಸ್‌ ಆಯುಕ್ತರು ಮತ್ತು ಗೃಹ ಸಚಿವರೊಂದಿಗೆ ಮಾತನಾಡಿ, ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಆಟೋಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹನುಮಾನ ನಗರದ ದ್ವಿಪಥ ರಸ್ತೆಗುಂಟ ನಿಂತಿದ್ದರಿಂದ ಕೆಲಹೊತ್ತು ಸಂಚಾರ ತಾಪತ್ರಯಕ್ಕೆ ಕಾರಣವಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ