ಆ್ಯಪ್ನಗರ

ಜಿಎಸ್‌ಟಿಯಿಂದ ಆರ್ಥಿಕ ವ್ಯವಸ್ಥೆಗೆ ಬಲ; ಗ್ರಾಹಕರಿಗೆ ಹಿತ

ಬೆಳಗಾವಿ: ಜಿಎಸ್‌ಟಿಯಿಂದ ದೇಶದಲ್ಲಿ ಮುಂದಿನ ವರ್ಷಗಳಲ್ಲಿ ವಸ್ತುಗಳ ...

Vijaya Karnataka 2 Jul 2018, 5:00 am
ಬೆಳಗಾವಿ: ಜಿಎಸ್‌ಟಿಯಿಂದ ದೇಶದಲ್ಲಿ ಮುಂದಿನ ವರ್ಷಗಳಲ್ಲಿ ವಸ್ತುಗಳ ತೆರಿಗೆ ಪ್ರಮಾಣದಲ್ಲಿ ವ್ಯಾಪಕ ಇಳಿಕೆಯಾಗಲಿದ್ದು, ಜನರಿಗೆ ಇನ್ನಷ್ಟು ಅನುಕೂಲ ಆಗಲಿದೆ ಎಂದು ಸಂಸದ ಸುರೇಶ ಅಂಗಡಿ ಅಭಿಪ್ರಾಯಪಟ್ಟರು.
Vijaya Karnataka Web BLG-0107-2-52-1PRAMOD1


ಆದಾಯ ತೆರಿಗೆ ಇಲಾಖೆಯಿಂದ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಜಿಎಸ್‌ಟಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಎಸ್‌ಟಿ ಅನುಷ್ಠಾನದಿಂದ ದೇಶದಲ್ಲಿ ತೆರಿಗೆ ಸಂಗ್ರಹ ಹೆಚ್ಚಾಗಿದೆ. ಇನ್ನು ಮುಂದೆ ಗ್ರಾಹಕರಿಗೂ ಇದರಿಂದ ಹೆಚ್ಚು ಲಾಭವಾಗಲಿದೆ. ಜತೆಗೆ ಆರ್ಥಿಕ ದಿವಾಳಿಯಿಂದಲೂ ದೇಶ ಬಚಾವ್‌ ಆಗಿದ್ದು, ವ್ಯಾಪಾರ ವಹಿವಾಟುಗಳು ವೃದ್ಧಿಯಾಗಿವೆ. ಇನ್ನೊಂದೆಡೆ ರಾಜ್ಯದಿಂದ ರಾಜ್ಯಕ್ಕೆ ಹೋಗುವ ಸರಕು ಸಾಗಾಣೆ ವಾಹನಗಳಿಗೆ ಜಿಎಸ್‌ಟಿ ಬಹಳ ಸಹಕಾರಿಯಾಗಿದೆ ಎಂದರು.

ಕಿರುಕುಳ ಕಡಿಮೆ: ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಮಾತನಾಡಿ, ವ್ಯಾಪಾರಸ್ಥರು ಹಾಗೂ ಉದ್ದಿಮೆದಾರರಿಗೆ ತೆರಿಗೆ ಅಧಿಕಾರಿಗಳಿಂದ ಆಗುತ್ತಿದ್ದ ಕಿರುಕುಳ ಜಿಎಸ್‌ಟಿ ಅನುಷ್ಠಾನದಿಂದ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದೆ. ಜಿಎಸ್‌ಟಿ ಬಗ್ಗೆ ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ. ಇದರ ಬಗ್ಗೆ ಇಷ್ಟೆಲ್ಲ ಗೊಂದಲ ಬೇಡ. ಇದು ಒಂದೇ ರೂಪದ ಸ್ನೇಹಮಯಿ ತೆರಿಗೆ ಪದ್ದತಿಯಾಗಿದೆ. ದೇಶದ ಆದಾಯವೂ ಇದರಿಂದ ಹೆಚ್ಚಳವಾಗಿದ್ದು, ಆರ್ಥಿಕ ಸುಧಾರಣೆಗೆ ನೆರವಾಗಿದೆ ಎಂದರು.

ತೆರಿಗೆ ಇಲಾಖೆ ಆಯುಕ್ತ ವಿಜಯಕುಮಾರ ಮಾತನಾಡಿ, ಜಿಎಸ್‌ಟಿ ಸಂಪೂರ್ಣ ದೇಶವನ್ನು ಒಗ್ಗೂಡಿಸಿದೆ. ಒಂದು ದೇಶ, ಒಂದು ಮಾರುಕಟ್ಟೆ, ಒಂದು ತೆರಿಗೆ ಎನ್ನುವ ಜಿಎಸ್‌ಟಿಯ ಉದ್ದೇಶ ಸಾಧಿಸುವಲ್ಲಿ ಮೊದಲ ವರ್ಷದಲ್ಲಿಯೇ ಯಶಸ್ವಿಯಾಗಿದೆ ಎಂದರು. ಜಂಟಿ ಆಯುಕ್ತ ಎಸ್‌.ಕೆ. ಮಾಹ್ತೋ ಸ್ವಾಗತಿಸಿದರು. ಸಹಾಯಕ ಆಯುಕ್ತ ಎ.ಕೆ.ಸಾಸ್ಮಲ್‌ ವಂದಿಸಿದರು.

ಜಿಎಸ್‌ಟಿ ಅನುಷ್ಠಾನದಲ್ಲಿ ಎಲ್ಲ ಪಕ್ಷ ಗಳು ಸಹಕರಿಸಿವೆ. ದೇಶದಲ್ಲಿ ಪೆಟ್ರೋಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸಿದರೆ, ಬೆಲೆ ಇನ್ನಷ್ಟು ಕಡಿಮೆಯಾಗಲಿದೆ ಎಂದ ಅವರು, ಒಂದು ವರ್ಷದಲ್ಲಿ ಜಿಎಸ್‌ಟಿ ಅಭೂತಪೂರ್ವ ಯಶಸ್ಸು ಕಂಡಿದೆ.
- ಸುರೇಶ ಅಂಗಡಿ, ಸಂಸದ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ