ರಾಜು ಉಸ್ತಾದ್ ಬೆಳಗಾವಿ
ಕಳೆದ ಒಂದೂವರೆ ದಶಕದಿಂದ ಯೋಜನೆ ರೂಪದಲ್ಲೇ ಇರುವ ನಗರದ ಹೊರ ವಲಯದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಿಂಗ್ ರಸ್ತೆಗೆ ಒಂದಲ್ಲ ಒಂದು ಅಡ್ಡಿಗಳು ಎದುರಾಗುತ್ತಲೇ ಇವೆ.
2006ರಲ್ಲಿ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣದ ನಿರ್ಧಾರವಾಗುತ್ತಿದ್ದಂತೆ ರಿಂಗ್ ರಸ್ತೆ ಯೋಜನೆ ಮೊಳಕೆಯೊಡೆದು ನಕ್ಷೆಗೆ ಇಳಿದಿತ್ತು. ಹೇಗೆ ಅನುಷ್ಠಾನ ಎಂಬುದರ ಕುರಿತು ವರ್ಷಗಟ್ಟಲೆ ಚರ್ಚೆಯಾಯಿತು. ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಿ ಸ್ವಂತ ನಿರ್ವಹಣೆ (ಬೂಟ್) ಮಾಡುವುದು, ಸರಕಾರವೇ ನಿರ್ವಹಣೆ ಮಾಡಬೇಕು ಎಂದೆಲ್ಲ ಚರ್ಚೆಯಾಗಿತ್ತು. ಆಡಳಿತ ಈ ನಿಟ್ಟಿನಲ್ಲಿ ಸಮೀಕ್ಷೆ ಆರಂಭಿಸಿದಾಗ ರೈತರು ವಿರೋಧಿಸಿದ್ದರು. ಇನ್ನು ಯೋಜನೆ ಜಾರಿಗೊಳಿಸಲು ಖಾಸಗಿಯವರೂ ಮುಂದೆ ಬಾರದ್ದರಿಂದ ಯೋಜನೆ ಚರ್ಚೆಗೆ ಸೀಮಿತವಾಗಿತ್ತು.
ಕಳೆದ ದಶಕದಲ್ಲಿ ಇದು ಆಗಾಗ ಚರ್ಚೆಗೆ ಬಂದು ಹೋದರೂ, ಅನುಷ್ಠಾನವಾಗಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆಯವರು ಅಲ್ಲಲ್ಲಿ ಸಂಪರ್ಕ ರಸ್ತೆಗಳ ನಿರ್ಮಾಣದ ಕಡೆಗೆ ಗಮನ ನೀಡಿ ನಗರದ ಮೇಲಾಗುವ ವಾಹನ ದಟ್ಟಣೆ ಪ್ರಮಾಣ ಕಡಿಮೆ ಮಾಡುವ ಪ್ರಯತ್ನ ಮಾಡಿದ್ದರು. ಆದರೆ, ಇದು ಪೂರ್ಣ ಪರಿಹಾರವಲ್ಲದ್ದರಿಂದ ಸಂಸದ ಸುರೇಶ ಅಂಗಡಿ, ರಿಂಗ್ ರಸ್ತೆ ನಿರ್ಮಾಣದ ಹೊಣೆಯನ್ನು ಪೂರ್ಣವಾಗಿ ಕೇಂದ್ರ ಸರಕಾರವೇ ವಹಿಸಿಕೊಳ್ಳಬೇಕೆಂದು ಒತ್ತಡ ಹಾಕಿ ಯಶಸ್ಸು ಕಂಡಿದ್ದರು. ಇದರ ಫಲವಾಗಿ ಕೇಂದ್ರ ಸಾರಿಗೆ ಸಚಿವರು ಕಳೆದ ಜುಲೈ ತಿಂಗಳಿನಲ್ಲಿ ಬೆಳಗಾವಿಗೆ ಬಂದು ರಿಂಗ್ ರಸ್ತೆ ಜತೆಗೆ ಖಾನಾಪುರ ಮತ್ತು ಗೋವಾ ರಸ್ತೆ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಹೋಗಿದ್ದಾರೆ.
ರಿಂಗ್ ರಸ್ತೆ ನಿರ್ಮಾಣ ಉಸ್ತುವಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ತೆಗೆದುಕೊಂಡಿದ್ದರಿಂದ ಅದು ತನ್ನ ಕೆಲಸ ಆರಂಭಿಸಿತ್ತು. ಸರ್ವೆ, ನಕ್ಷೆ ತಯಾರಿ ನಡೆಸಿತ್ತು. ಆದರೆ, ತಹಸೀಲ್ದಾರ, ಉಪವಿಭಾಗಾಧಿಕಾರಿ ಮತ್ತು ಇಂಜಿನಿಯರಿಂಗ್ ತಂಡದ ಜತೆಗೆ ಇಲಾಖೆಯವರು ಹೋದ ಕಡೆಯಲ್ಲೆಲ್ಲ ರೈತರು ವಿರೋಧಿಸುತ್ತಿದ್ದಾರೆ. ಯೋಜನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ಕಡೆಗಂತೂ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ಅಧಿಕಾರಿಗಳು ಅಸಹಾಯಕತೆಗೆ ಸಿಲುಕಿದ್ದಾರೆ.
''ನಾವು ಸರಕಾರಿ ನೌಕರರು, ಮೇಲಿನ ಆದೇಶದಂತೆ ಕೆಲಸ ಮಾಡಲು ಬಂದಿದ್ದೇವೆ. ನಿಮ್ಮದು ಏನೇ ತಕರಾರು, ಆಕ್ಷೇಪಣೆಗಳು ಇದ್ದರೆ ಮೇಲಾಧಿಕಾರಿ ಇಲ್ಲವೆ ನ್ಯಾಯಾಲಯಕ್ಕೆ ತಿಳಿಸಿ. ನೀವು ಹೋಗಿ ಎಂದರೆ ನಾವಿಲ್ಲಿಂದ ಹೋಗುತ್ತೇವೆ'' ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಿದ್ದಾರೆ.
1327 ಎಕರೆ ಭೂಮಿ ಬೇಕು :
ನಗರ ಪೂರ್ವಭಾಗದ ಪುಣೆ ಹೆದ್ದಾರಿ ಕಡೆಯಿಂದ ಕಾಕತಿ, ಹಿಂಡಾಲ್ಕೋ, ಕಣಬರಗಿ, ಕಲಕಾಂಬ, ಮುಚ್ಚಂಡಿ, ಮುತಗಾ, ಶಿಂದೊಳ್ಳಿ, ಮಾಸ್ತಮರರ್ಡಿ ಮೂಲಕ ಸುವರ್ಣ ವಿಧಾನಸೌಧದ ಬಳಿ ಧಾರವಾಡ ಹೈವೇಗೆ ಸೇರಿಸುವುದು ಮತ್ತು ಪಶ್ಚಿಮಭಾಗದ ಧಾರವಾಡ ಹೈವೇಯಿಂದ ಹಲಗಾ, ಮಚ್ಛೆ, ಪೀರನವಾಡಿ, ಬೆಳಗುಂದಿ, ಉಚಗಾವಿ, ಅಳತಗೆ, ಬೆನಕನಹಳ್ಳಿ ಮೂಲಕ ಕಾಕತಿ ಹೈವೇಗೆ ಸೇರಿಸುವ ರಿಂಗ್ ರೋಡ್ ಇಲ್ಲವೆ ಸಂಪರ್ಕ ರಸ್ತೆಗೆ ಅಂದಾಜು 1,327 ಎಕರೆ ಜಮೀನು ಬೇಕಿದೆ. ಈ ಭಾಗದ ಭೂಮಿ ಫಲವತ್ತಾಗಿದೆ. ಇದನ್ನು ಅವಲಂಬಿಸಿಯೇ ನಾವು ಜೀವನ ನಡೆಸಿದ್ದೇನೆ. ಏನೇ ಆದರೂ ನಾವು ಭೂಸ್ವಾಧೀನಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ರಿಂಗ್ ರಸ್ತೆ ಬೇಕಿದ್ದರೆ ಹಿಂಡಾಲ್ಕೋ ಗುಡ್ಡ, ಮುಚ್ಚಂಡಿ ಗುಡ್ಡಿ, ಸುಳೇಬಾವಿ ಗುಡ್ಡದ ಮೂಲಕ ಧಾರವಾಡ ಹೈವೇ, ಇಲ್ಲಿಂದ ಹಲಗಾ, ಬಸ್ತವಾಡ, ಮಚ್ಛೆ ಮಾರ್ಗದಲ್ಲಿ ಫ್ಲೈಓವರ್ ನಿರ್ಮಿಸಬೇಕು ಎಂಬುದು ರೈತರ ಸಲಹೆ.
ನಾನು ರೈತ ಮತ್ತು ನಾಗರಿಕರ ಹಿತ ಕಾಯಲು ಸಿದ್ಧ. ಆದರೆ, ಎಲ್ಲದ್ದಕ್ಕೂ ಪ್ರತಿರೋಧ ಮಾಡಿದರೆ ಅಭಿವೃದ್ಧಿ ಯೋಜನೆಗಳು ಮುಂದುವರಿಯುವುದು ಕಷ್ಟವಾಗುತ್ತದೆ. 2-3 ಸಾವಿರ ಕೋಟಿ ರೂ. ವೆಚ್ಚದ ಈ ಯೋಜನೆ ಕೈ ತಪ್ಪಿಹೋಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ರೈತರ ಮನವೊಲಿಸುವ ಪ್ರಯತ್ನಗಳು ನಡೆದಿವೆ. ಅಧಿಕಾರಿಗಳೂ ಆ ಕೆಲಸ ಮಾಡುತ್ತಿದ್ದಾರೆ.
- ಸುರೇಶ ಅಂಗಡಿ, ಸಂಸದ
ರಿಂಗ್ ರಸ್ತೆ ನಿರ್ಮಾಣಕ್ಕೂ ಮೊದಲು ಆಡಳಿತ ಮತ್ತು ಸರಕಾರ ಜಮೀನು ಕಳೆದುಕೊಳ್ಳುವವರನ್ನು ವಿಶ್ವಾಸಕ್ಕೆ ತಗೆದುಕೊಳ್ಳಲಿ. ಅವರು ಏನು ಹೇಳುತ್ತಾರೆ ಎಂಬುದನ್ನು ಕೇಳಿಸಿಕೊಳ್ಳಲಿ. ಜೀವನ ಭದ್ರತೆ ಸಿಕ್ಕರೆ ರೈತರು ಒಪ್ಪಿಕೊಳ್ಳುತ್ತಾರೆ.
-ದಿಲೀಪ್ ಚವಾಣ, ರೈತ ಮುಖಂಡ ಸಾಂಬ್ರಾ
ಕಳೆದ ಒಂದೂವರೆ ದಶಕದಿಂದ ಯೋಜನೆ ರೂಪದಲ್ಲೇ ಇರುವ ನಗರದ ಹೊರ ವಲಯದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಿಂಗ್ ರಸ್ತೆಗೆ ಒಂದಲ್ಲ ಒಂದು ಅಡ್ಡಿಗಳು ಎದುರಾಗುತ್ತಲೇ ಇವೆ.
2006ರಲ್ಲಿ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣದ ನಿರ್ಧಾರವಾಗುತ್ತಿದ್ದಂತೆ ರಿಂಗ್ ರಸ್ತೆ ಯೋಜನೆ ಮೊಳಕೆಯೊಡೆದು ನಕ್ಷೆಗೆ ಇಳಿದಿತ್ತು. ಹೇಗೆ ಅನುಷ್ಠಾನ ಎಂಬುದರ ಕುರಿತು ವರ್ಷಗಟ್ಟಲೆ ಚರ್ಚೆಯಾಯಿತು. ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಿ ಸ್ವಂತ ನಿರ್ವಹಣೆ (ಬೂಟ್) ಮಾಡುವುದು, ಸರಕಾರವೇ ನಿರ್ವಹಣೆ ಮಾಡಬೇಕು ಎಂದೆಲ್ಲ ಚರ್ಚೆಯಾಗಿತ್ತು. ಆಡಳಿತ ಈ ನಿಟ್ಟಿನಲ್ಲಿ ಸಮೀಕ್ಷೆ ಆರಂಭಿಸಿದಾಗ ರೈತರು ವಿರೋಧಿಸಿದ್ದರು. ಇನ್ನು ಯೋಜನೆ ಜಾರಿಗೊಳಿಸಲು ಖಾಸಗಿಯವರೂ ಮುಂದೆ ಬಾರದ್ದರಿಂದ ಯೋಜನೆ ಚರ್ಚೆಗೆ ಸೀಮಿತವಾಗಿತ್ತು.
ಕಳೆದ ದಶಕದಲ್ಲಿ ಇದು ಆಗಾಗ ಚರ್ಚೆಗೆ ಬಂದು ಹೋದರೂ, ಅನುಷ್ಠಾನವಾಗಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆಯವರು ಅಲ್ಲಲ್ಲಿ ಸಂಪರ್ಕ ರಸ್ತೆಗಳ ನಿರ್ಮಾಣದ ಕಡೆಗೆ ಗಮನ ನೀಡಿ ನಗರದ ಮೇಲಾಗುವ ವಾಹನ ದಟ್ಟಣೆ ಪ್ರಮಾಣ ಕಡಿಮೆ ಮಾಡುವ ಪ್ರಯತ್ನ ಮಾಡಿದ್ದರು. ಆದರೆ, ಇದು ಪೂರ್ಣ ಪರಿಹಾರವಲ್ಲದ್ದರಿಂದ ಸಂಸದ ಸುರೇಶ ಅಂಗಡಿ, ರಿಂಗ್ ರಸ್ತೆ ನಿರ್ಮಾಣದ ಹೊಣೆಯನ್ನು ಪೂರ್ಣವಾಗಿ ಕೇಂದ್ರ ಸರಕಾರವೇ ವಹಿಸಿಕೊಳ್ಳಬೇಕೆಂದು ಒತ್ತಡ ಹಾಕಿ ಯಶಸ್ಸು ಕಂಡಿದ್ದರು. ಇದರ ಫಲವಾಗಿ ಕೇಂದ್ರ ಸಾರಿಗೆ ಸಚಿವರು ಕಳೆದ ಜುಲೈ ತಿಂಗಳಿನಲ್ಲಿ ಬೆಳಗಾವಿಗೆ ಬಂದು ರಿಂಗ್ ರಸ್ತೆ ಜತೆಗೆ ಖಾನಾಪುರ ಮತ್ತು ಗೋವಾ ರಸ್ತೆ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಹೋಗಿದ್ದಾರೆ.
ರಿಂಗ್ ರಸ್ತೆ ನಿರ್ಮಾಣ ಉಸ್ತುವಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ತೆಗೆದುಕೊಂಡಿದ್ದರಿಂದ ಅದು ತನ್ನ ಕೆಲಸ ಆರಂಭಿಸಿತ್ತು. ಸರ್ವೆ, ನಕ್ಷೆ ತಯಾರಿ ನಡೆಸಿತ್ತು. ಆದರೆ, ತಹಸೀಲ್ದಾರ, ಉಪವಿಭಾಗಾಧಿಕಾರಿ ಮತ್ತು ಇಂಜಿನಿಯರಿಂಗ್ ತಂಡದ ಜತೆಗೆ ಇಲಾಖೆಯವರು ಹೋದ ಕಡೆಯಲ್ಲೆಲ್ಲ ರೈತರು ವಿರೋಧಿಸುತ್ತಿದ್ದಾರೆ. ಯೋಜನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ಕಡೆಗಂತೂ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾರೆ. ಇದರಿಂದಾಗಿ ಅಧಿಕಾರಿಗಳು ಅಸಹಾಯಕತೆಗೆ ಸಿಲುಕಿದ್ದಾರೆ.
''ನಾವು ಸರಕಾರಿ ನೌಕರರು, ಮೇಲಿನ ಆದೇಶದಂತೆ ಕೆಲಸ ಮಾಡಲು ಬಂದಿದ್ದೇವೆ. ನಿಮ್ಮದು ಏನೇ ತಕರಾರು, ಆಕ್ಷೇಪಣೆಗಳು ಇದ್ದರೆ ಮೇಲಾಧಿಕಾರಿ ಇಲ್ಲವೆ ನ್ಯಾಯಾಲಯಕ್ಕೆ ತಿಳಿಸಿ. ನೀವು ಹೋಗಿ ಎಂದರೆ ನಾವಿಲ್ಲಿಂದ ಹೋಗುತ್ತೇವೆ'' ಎಂದು ಅಧಿಕಾರಿಗಳು ಸಮಜಾಯಿಷಿ ನೀಡುತ್ತಿದ್ದಾರೆ.
1327 ಎಕರೆ ಭೂಮಿ ಬೇಕು :
ನಗರ ಪೂರ್ವಭಾಗದ ಪುಣೆ ಹೆದ್ದಾರಿ ಕಡೆಯಿಂದ ಕಾಕತಿ, ಹಿಂಡಾಲ್ಕೋ, ಕಣಬರಗಿ, ಕಲಕಾಂಬ, ಮುಚ್ಚಂಡಿ, ಮುತಗಾ, ಶಿಂದೊಳ್ಳಿ, ಮಾಸ್ತಮರರ್ಡಿ ಮೂಲಕ ಸುವರ್ಣ ವಿಧಾನಸೌಧದ ಬಳಿ ಧಾರವಾಡ ಹೈವೇಗೆ ಸೇರಿಸುವುದು ಮತ್ತು ಪಶ್ಚಿಮಭಾಗದ ಧಾರವಾಡ ಹೈವೇಯಿಂದ ಹಲಗಾ, ಮಚ್ಛೆ, ಪೀರನವಾಡಿ, ಬೆಳಗುಂದಿ, ಉಚಗಾವಿ, ಅಳತಗೆ, ಬೆನಕನಹಳ್ಳಿ ಮೂಲಕ ಕಾಕತಿ ಹೈವೇಗೆ ಸೇರಿಸುವ ರಿಂಗ್ ರೋಡ್ ಇಲ್ಲವೆ ಸಂಪರ್ಕ ರಸ್ತೆಗೆ ಅಂದಾಜು 1,327 ಎಕರೆ ಜಮೀನು ಬೇಕಿದೆ. ಈ ಭಾಗದ ಭೂಮಿ ಫಲವತ್ತಾಗಿದೆ. ಇದನ್ನು ಅವಲಂಬಿಸಿಯೇ ನಾವು ಜೀವನ ನಡೆಸಿದ್ದೇನೆ. ಏನೇ ಆದರೂ ನಾವು ಭೂಸ್ವಾಧೀನಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ರಿಂಗ್ ರಸ್ತೆ ಬೇಕಿದ್ದರೆ ಹಿಂಡಾಲ್ಕೋ ಗುಡ್ಡ, ಮುಚ್ಚಂಡಿ ಗುಡ್ಡಿ, ಸುಳೇಬಾವಿ ಗುಡ್ಡದ ಮೂಲಕ ಧಾರವಾಡ ಹೈವೇ, ಇಲ್ಲಿಂದ ಹಲಗಾ, ಬಸ್ತವಾಡ, ಮಚ್ಛೆ ಮಾರ್ಗದಲ್ಲಿ ಫ್ಲೈಓವರ್ ನಿರ್ಮಿಸಬೇಕು ಎಂಬುದು ರೈತರ ಸಲಹೆ.
ನಾನು ರೈತ ಮತ್ತು ನಾಗರಿಕರ ಹಿತ ಕಾಯಲು ಸಿದ್ಧ. ಆದರೆ, ಎಲ್ಲದ್ದಕ್ಕೂ ಪ್ರತಿರೋಧ ಮಾಡಿದರೆ ಅಭಿವೃದ್ಧಿ ಯೋಜನೆಗಳು ಮುಂದುವರಿಯುವುದು ಕಷ್ಟವಾಗುತ್ತದೆ. 2-3 ಸಾವಿರ ಕೋಟಿ ರೂ. ವೆಚ್ಚದ ಈ ಯೋಜನೆ ಕೈ ತಪ್ಪಿಹೋಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ರೈತರ ಮನವೊಲಿಸುವ ಪ್ರಯತ್ನಗಳು ನಡೆದಿವೆ. ಅಧಿಕಾರಿಗಳೂ ಆ ಕೆಲಸ ಮಾಡುತ್ತಿದ್ದಾರೆ.
- ಸುರೇಶ ಅಂಗಡಿ, ಸಂಸದ
ರಿಂಗ್ ರಸ್ತೆ ನಿರ್ಮಾಣಕ್ಕೂ ಮೊದಲು ಆಡಳಿತ ಮತ್ತು ಸರಕಾರ ಜಮೀನು ಕಳೆದುಕೊಳ್ಳುವವರನ್ನು ವಿಶ್ವಾಸಕ್ಕೆ ತಗೆದುಕೊಳ್ಳಲಿ. ಅವರು ಏನು ಹೇಳುತ್ತಾರೆ ಎಂಬುದನ್ನು ಕೇಳಿಸಿಕೊಳ್ಳಲಿ. ಜೀವನ ಭದ್ರತೆ ಸಿಕ್ಕರೆ ರೈತರು ಒಪ್ಪಿಕೊಳ್ಳುತ್ತಾರೆ.
-ದಿಲೀಪ್ ಚವಾಣ, ರೈತ ಮುಖಂಡ ಸಾಂಬ್ರಾ