ಆ್ಯಪ್ನಗರ

ಹಳ್ಳ, ನದಿಯ ಸೇತುವೆ ಪರಿಶೀಲನೆ

ಖಾನಾಪುರ: ಪಾಂಡರಿ ನದಿ ಹಾಗೂ ಅಲಾತ್ರಿ ಹಳ್ಳ ತುಂಬಿ ಹರಿಯುತ್ತಿರುವ ಪರಿಣಾಮ ಪ್ರವಾಹದ ಸ್ಥಿತಿ ಏರ್ಪಟ್ಟಿದ್ದು ಈ ...

Vijaya Karnataka 9 Jul 2019, 5:00 am
ಖಾನಾಪುರ : ಪಾಂಡರಿ ನದಿ ಹಾಗೂ ಅಲಾತ್ರಿ ಹಳ್ಳ ತುಂಬಿ ಹರಿಯುತ್ತಿರುವ ಪರಿಣಾಮ ಪ್ರವಾಹದ ಸ್ಥಿತಿ ಏರ್ಪಟ್ಟಿದ್ದು ಈ ಹಿನ್ನೆಲೆಯಲ್ಲಿ ಸೋಮವಾರ ತಹಸೀಲ್ದಾರ್‌ ಶಿವಾನಂದ ಉಳ್ಳೇಗಡ್ಡಿ ಮತ್ತು ತಾಪಂ ಇಒ ಲಕ್ಷ ್ಮಣರಾವ್‌ ಯಕ್ಕುಂಡಿ ಶಿರೋಲಿ ಗ್ರಾಪಂ ವ್ಯಾಪ್ತಿಯ ತಿವೋಲಿ ಮತ್ತು ಮೋಹಿಶೇತ್‌ ಗ್ರಾಪಂ ವ್ಯಾಪ್ತಿಯ ಮಾಚಾಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳನ್ನು ಪರಿಶೀಲಿಸಿದರು.
Vijaya Karnataka Web BEL-8KHANAPUR 2


ಭಾನುವಾರ ಸುರಿದ ಭಾರಿ ಮಳೆಗೆ ತಿವೋಲಿ ಗ್ರಾಮದ ಹೊರವಲಯದ ಅಲಾತ್ರಿ ಹಳ್ಳದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ತಿವೋಲಿಯಿಂದ ಖಾನಾಪುರ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯ ಮೇಲೆ ಮೂರು ಅಡಿಗಳಷ್ಟು ನೀರು ಹರಿದಿತ್ತು. ಇದೇ ರೀತಿ ಪಾಂಡರಿ ನದಿಯ ಪ್ರವಾಹದ ಪರಿಣಾಮ ಮಾಚಾಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮಟ್ಟದಲ್ಲಿ ನೀರು ಹರಿದಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ನೀರಿನ ಹರಿವು ಜಾಸ್ತಿ ಇದ್ದಾಗ ಸೇತುವೆ ಮೇಲೆ ಸಂಚಾರ ಮಾಡದಂತೆ ಗ್ರಾಮಸ್ಥರಿಗೆ ಸೂಚಿಸುವಂತೆ ಶಿರೋಲಿ ಪಿಡಿಒ ಎಸ್‌.ಬಿ.ಉಪ್ಪಿನ ಮತ್ತು ಮೋಹಿಶೇತ ಪಿಡಿಒ ಪ್ರವೀಣ ಸಾಯನಾಯ್ಕ ಅವರಿಗೆ ಅಧಿಕಾರಿಗಳು ತಿಳಿಸಿದರು.

ವಿರಾಮ ಪಡೆದ ಮಳೆ
ಖಾನಾಪುರ:
ತಾಲೂಕಿನ ನಾಗರಗಾಳಿ, ಲೋಂಡಾ, ಕಣಕುಂಬಿ ಮತ್ತು ಭೀಮಗಡ ವನ್ಯಧಾಮ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕಳೆದೊಂದು ವಾರದಿಂದ ಭಾರೀ ಪ್ರಮಾಣದಲ್ಲಿ ಸುರಿದ ಮಳೆ ಸೋಮವಾರ ಕೊಂಚ ಮಟ್ಟಿಗೆ ತಗ್ಗಿತ್ತು. ಮಲಪ್ರಭಾ, ಮಹದಾಯಿ, ಪಾಂಡರಿ ನದಿಗಳಲ್ಲಿ ಮತ್ತು ಅಲಾತ್ರಿ, ಕಳಸಾ, ಬಂಡೂರಿ, ಮಂಗೇತ್ರಿ, ವಜ್ರಾ, ಪಣಸೂರಿ, ಕುಂಬಾರ, ತಟ್ಟಿ, ಕೋಟ್ನಿ ಮತ್ತಿತರ ಹಳ್ಳಗಳಲ್ಲಿ ನೀರು ಅಪಾರ ಪ್ರಮಾಣದಲ್ಲಿ ಹರಿಯುತ್ತಿದೆ. ಭಾನುವಾರ ಸಂಜೆಯಿಂದ ಜಲಾವೃತಗೊಂಡಿದ್ದ ತಿವೋಲಿ ಗ್ರಾಮದ ಬಳಿಯ ಅಲಾತ್ರಿ ಹಳ್ಳದ ಸೇತುವೆ ಸೋಮವಾರ ಮಧ್ಯಾಹ್ನದ ಬಳಿಕ ಸಂಚಾರಕ್ಕೆ ಮುಕ್ತವಾಗಿದೆ. ಸೋಮವಾರ ಗುಂಜಿಯಲ್ಲಿ 11 ಸೆಂಮೀ, ಲೋಂಡಾ ರೈಲು ನಿಲ್ದಾಣ, ಜಾಂಬೋಟಿ ಮತ್ತು ಕಣಕುಂಬಿಯಲ್ಲಿ 14 ಸೆಂಮೀ ಮಳೆ ಸುರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ