ಆ್ಯಪ್ನಗರ

ಇಂಧನ ತೆರಿಗೆ ಏರಿಕೆ ಖಂಡಿಸಿ ರಸ್ತೆ ತಡೆ

ಬಾಳೆಕುಂದ್ರಿ: ರಾಜ್ಯ ಸರಕಾರ ಪೆಟ್ರೋಲ್‌, ಡೀಸೆಲ್‌ ಮೇಲೆ ತೆರಿಗೆ ಏರಿಸಿರುವುದನ್ನು ಖಂಡಿಸಿ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ ಕಾರ್ಯಕರ್ತರು ಹಿಂಡಲಗಾ ಶ್ರೀ ...

Vijaya Karnataka 8 Jan 2019, 5:00 am
ಬಾಳೆಕುಂದ್ರಿ : ರಾಜ್ಯ ಸರಕಾರ ಪೆಟ್ರೋಲ್‌, ಡೀಸೆಲ್‌ ಮೇಲೆ ತೆರಿಗೆ ಏರಿಸಿರುವುದನ್ನು ಖಂಡಿಸಿ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ ಕಾರ್ಯಕರ್ತರು ಹಿಂಡಲಗಾ ಶ್ರೀ ಗಣಪತಿ ದೇವಸ್ಥಾನದ ಎದುರು ರಸ್ತೆ ತಡೆದು ಪ್ರತಿಭಟಿಸಿದರು.
Vijaya Karnataka Web BEL-7 BLK 1 PTO


ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ಕೇಂದ್ರ ಸರಕಾರ ಇಂಧನ ದರ ಇಳಿಸಿದೆ. ಆದರೆ, ರಾಜ್ಯ ಸರಕಾರ ಅವುಗಳ ಮೇಲೆ ತೆರಿಗೆ ಏರಿಸುವ ಮೂಲಕ ಜನರ ಮೇಲೆ ಬರೆ ಎಳೆದಿದೆ. ಕಾರಣ ಶೀಘ್ರ ತೆರಿಗೆಯನ್ನು ಇಳಿಸಬೇಕು ಮತ್ತು ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿರುವ ಸಚಿವ ಪುಟ್ಟರಂಗಶೆಟ್ಟಿ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಮೋಹಿತೆ, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರವೀಣ ಪಾಟೀಲ, ಯುವಮೋರ್ಚಾ ಅಧ್ಯಕ್ಷ ಚೇತನ ಪಾಟೀಲ, ಹಿರಿಯ ಮುಖಂಡರಾದ ರಾಮಚಂದ್ರ ಮನ್ನೋಳಕರ, ಅರುಣ ಕೋಲಕಾರ, ಡಾ. ಯಲ್ಲಪ್ಪಾ ಪಾಟೀಲ, ಹನುಮಂತ ಪಾಟೀಲ, ಕಾಚು ಸುಕಯೇ, ಸಾಗರ ಶೇರೆಕರ, ಸನತಕುಮಾರ್‌ ವಿ.ವಿ., ಅಭಯ ಅವಲಕ್ಕಿ, ಬಾಪು ಪಾಟೀಲ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ