ಮುನವಳ್ಳಿ : ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಕಳಸಾ ಬಂಡೂರಿ ಹೋರಾಟ ಸಮಿತಿ, ರೈತ ಸೇನೆ, ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು ಹಾಗೂ ರೈತರು ಮಂಗಳವಾರ ಪಟ್ಟಣದ ಪಂಚಲಿಂಗೇಶ್ವರ ಕ್ರಾಸ್ನಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದರು.
ಮಲಪ್ರಭಾ ನದಿಗೆ ಮಹದಾಯಿ, ಕಳಸಾಬಂಡೂರಿ ನಾಲಾ ಜೋಡಣೆಗೆ ಸಂಬಂಧಿಸಿದಂತೆ ನ್ಯಾಯಾಧಿಕರಣ ತೀರ್ಪು ನೀಡಿ ವರ್ಷವಾದರೂ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಗಮನ ಹರಿಸದೆ ಕಾಲಹರಣ ಮಾಡುತ್ತಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡರಾದ ಶಿವಾನಂದ ಮೇಟಿ, ಉಮೇಶ ಬಾಳಿ ಮಾತನಾಡಿ, ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಮಹದಾಯಿ ಐತೀರ್ಪಿನ ಪ್ರಕಾರ ಮಲಪ್ರಭೆಗೆ ನೀರು ಹರಿಸುವಂತೆ ಅಧಿಸೂಚನೆ ಹೊರಡಿಸಲು ಕೇಂದ್ರ ಸರಕಾರದ ಮೇಲೆ ರಾಜ್ಯ ಸರಕಾರ ಒತ್ತಡ ಹೇರಬೇಕು. ಮಲಪ್ರಭೆಗೆ ನೀರು ಹೋಗದಂತೆ ಕಾಲುವೆಗೆ ಕಟ್ಟಿರುವ ತಡೆಗೋಡೆ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಅಂಬರೀಷ ಯಲಿಗಾರ, ಸಿಂಗಯ್ಯ ಹಿರೇಮಠ, ಕಲ್ಲಪ್ಪ ನಲವಡೆ, ಅಂದಾನಿ ಗೋಮಾಡಿ, ಗಂಗಪ್ಪ ನಲವಡೆ, ಮೌನೇಶ ಬಡಿಗೇರ, ಐ.ಜಿ. ಚಂದರಗಿ, ಹ.ಬ. ಅಸೂಟಿ, ಅಬ್ದುಲ್ ಟಪಾಲ ಮತ್ತಿತರರು ಇದ್ದರು.
ಮಲಪ್ರಭಾ ನದಿಗೆ ಮಹದಾಯಿ, ಕಳಸಾಬಂಡೂರಿ ನಾಲಾ ಜೋಡಣೆಗೆ ಸಂಬಂಧಿಸಿದಂತೆ ನ್ಯಾಯಾಧಿಕರಣ ತೀರ್ಪು ನೀಡಿ ವರ್ಷವಾದರೂ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಗಮನ ಹರಿಸದೆ ಕಾಲಹರಣ ಮಾಡುತ್ತಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡರಾದ ಶಿವಾನಂದ ಮೇಟಿ, ಉಮೇಶ ಬಾಳಿ ಮಾತನಾಡಿ, ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಮಹದಾಯಿ ಐತೀರ್ಪಿನ ಪ್ರಕಾರ ಮಲಪ್ರಭೆಗೆ ನೀರು ಹರಿಸುವಂತೆ ಅಧಿಸೂಚನೆ ಹೊರಡಿಸಲು ಕೇಂದ್ರ ಸರಕಾರದ ಮೇಲೆ ರಾಜ್ಯ ಸರಕಾರ ಒತ್ತಡ ಹೇರಬೇಕು. ಮಲಪ್ರಭೆಗೆ ನೀರು ಹೋಗದಂತೆ ಕಾಲುವೆಗೆ ಕಟ್ಟಿರುವ ತಡೆಗೋಡೆ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ಅಂಬರೀಷ ಯಲಿಗಾರ, ಸಿಂಗಯ್ಯ ಹಿರೇಮಠ, ಕಲ್ಲಪ್ಪ ನಲವಡೆ, ಅಂದಾನಿ ಗೋಮಾಡಿ, ಗಂಗಪ್ಪ ನಲವಡೆ, ಮೌನೇಶ ಬಡಿಗೇರ, ಐ.ಜಿ. ಚಂದರಗಿ, ಹ.ಬ. ಅಸೂಟಿ, ಅಬ್ದುಲ್ ಟಪಾಲ ಮತ್ತಿತರರು ಇದ್ದರು.