ಆ್ಯಪ್ನಗರ

ರಸ್ತೆ ನಿರ್ಮಾಣ ಕಾಮಗಾರಿ ಸಂಚಾರಕ್ಕೆ ಕಿರಿಕಿರಿ

ಬೆಳಗಾವಿ: ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ನಿರ್ಮಾಣವಾಗುತ್ತಿರುವ ಇಲ್ಲಿನ ಟಿಳಕವಾಡಿ ಪ್ರದೇಶದ ಮಾಂಡೋಳಿ ...

Vijaya Karnataka 18 Jul 2019, 5:00 am
ಬೆಳಗಾವಿ : ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ನಿರ್ಮಾಣವಾಗುತ್ತಿರುವ ಇಲ್ಲಿನ ಟಿಳಕವಾಡಿ ಪ್ರದೇಶದ ಮಾಂಡೋಳಿ ರಸ್ತೆಯ ಎರಡೂ ಬದಿಗೆ ಅಗೆದಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವವರಿಗೆ ವಿಪರೀತ ತಾಪತ್ರಯವಾಗಿದೆ.
Vijaya Karnataka Web BLG-1707-2-52-17RAJU-6


ಈ ರಸ್ತೆಯನ್ನು ಮಾದರಿಯಾಗಿ ನಿರ್ಮಿಸಲಾಗುತ್ತಿದೆ. ಆಧುನಿಕ ಅನುಕೂಲಗಳನ್ನು ಹೊಂದಿರಲಿದೆ. ಆರಂಭದಲ್ಲಿ ವಿಳಂಬವಾದರೂ ಈಗ ಕೆಲಸ ತ್ವರಿತಗತಿ ಪಡೆದಿದೆ. ಆದರೆ ರಸ್ತೆಯ ಎರಡೂ ಬದಿಗೆ ಅಗೆದಿರುವುದರಿಂದ ವಾಹನಗಳು ಹೋಗಿಬರಲು ಸರ್ಕಸ್‌ ಮಾಡಬೇಕಿದೆ. ಆಯ ತಪ್ಪಿದರೆ ಈ ಬದಿಗೋ ಇಲ್ಲವೆ ಆ ಬದಿಗೋ ಉರುಳಿ ಬೀಳುವ ಸಾಧ್ಯತೆ ಇದೆ. ಹೀಗಾಗಿ ವಾಹನ ಸವಾರರು ಅಳುಕಿನಿಂದ ಸಾಗುತ್ತಾರೆ.

ಗುತ್ತಿಗೆದಾರ ಒಂದು ಬದಿಯ ರಸ್ತೆ ಕಾರ್ಯ ಪೂರ್ಣಗೊಳಿಸಿ ಇನ್ನೊಂದು ಬದಿಗೆ ಕೆಲಸ ತಗೆದುಕೊಳ್ಳಬೇಕು. ಎರಡೂ ಬದಿಗೆ ಅಗೆದು ಮಧ್ಯದಲ್ಲಿ ಸಂಚಾರಕ್ಕೆ ಅವಕಾಶ ನೀಡಿದರೆ ಮಳೆಗಾಲದ ಈ ಸಂದರ್ಭದಲ್ಲಿ ಅಪಾಯ ಮೇಲೆರಗುವ ಸಾಧ್ಯತೆಗಳಿವೆ. ಲೇಲೇ ಮೈದಾನದಿಂದ ವ್ಯಾಕ್ಸಿನ್‌ ಡಿಪೋ ಬಳಸಿ ಮಾಂಡೋಳಿ ರಸ್ತೆ ಸೇರುವ ರಸ್ತೆ ಸಂಚಾರ ಬಂದ್‌ ಮಾಡಿರುವುದರಿಂದ ನಾನಾ ಕಡೆಗೆ ಹೋಗಬೇಕಾದವರೂ ಇದೇ ರಸ್ತೆಗೆ ಬರುತ್ತಿದ್ದಾರೆ. ಹೀಗಾಗಿ ಇಲ್ಲಿ ಸಂಚಾರ ದಟ್ಟಣೆ ಹೆಚ್ಚಿದೆ.

ಇದು ಸುಗಮವಾಗಿ ಸಾಗುವಂತೆ ಕ್ರಮ ಕೈಗೊಳ್ಳಬೇಕಿದೆ. ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಮತ್ತು ಸಂಚಾರ ಪೊಲೀಸ್‌ ವಿಭಾಗದ ಅಧಿಕಾರಿಗಳು ಇದನ್ನು ಗಮನಿಸಬೇಕು ಎಂದು ಅಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ