ಆ್ಯಪ್ನಗರ

ರಸ್ತೆ ಹದಗೆಡಿಸಿದ ಹೆಸ್ಕಾಂ; ಮೇಯರ್‌ ಗರಂ

ಬೆಳಗಾವಿ: ಇನ್ನು ಮುಂದೆ ನಗರ ವ್ಯಾಪ್ತಿಯಲ್ಲಿ ರಸ್ತೆ ಅಗೆಯಲು ...

Vijaya Karnataka 25 Jul 2018, 5:00 am
ಬೆಳಗಾವಿ: ಇನ್ನು ಮುಂದೆ ನಗರ ವ್ಯಾಪ್ತಿಯಲ್ಲಿ ರಸ್ತೆ ಅಗೆಯಲು ಹೆಸ್ಕಾಂಗೆ ಅವಕಾಶ ನೀಡಬಾರದು ಎಂದು ಮೇಯರ್‌ ಬಸಪ್ಪ ಚಿಕ್ಕಲದಿನ್ನಿ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Vijaya Karnataka Web BLG-2407-2-52-24RAJU-6


ನಗರ ವ್ಯಾಪ್ತಿಯ ರಸ್ತೆ ಗುಂಡಿಗಳ ಕುರಿತು ನಾಗರಿಕರ ದೂರುಗಳ ಹಿನ್ನೆಲೆಯಲ್ಲಿ ಮಂಗಳವಾರ ಪಾಲಿಕೆ ಕಚೇರಿಯಲ್ಲಿ ಸದಸ್ಯರು ಮತ್ತು ಇಂಜಿನಿಯರ್‌ಗಳ ಸಭೆ ನಡೆಸಿದ ಮೇಯರ್‌, ಹೆಸ್ಕಾಂ ಕಾರ‍್ಯಕ್ಕೆ ಬೇಸರ ವ್ಯಕ್ತಪಡಿಸಿದರು.

ವಿದ್ಯುತ್‌ ಕೇಬಲ್‌ ಅಳವಡಿಸಲು ನಗರದ ರಸ್ತೆಗಳನ್ನು ಅಗೆಯಲಾಗಿದ್ದು ದುರಸ್ತಿ ಮಾಡಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಹಲವು ಬಾರಿ ಹೇಳಿದ್ದೇನೆ. ಹೆಸ್ಕಾಂ ಎಂಡಿ ಜತೆಗೂ ಈ ಕುರಿತು ಚರ್ಚಿಸಿದ್ದೇನೆ. ಆದರೂ, ರಸ್ತೆ ದುರಸ್ತಿಗೆ ಕ್ರಮ ಕೈಗೊಂಡಿಲ್ಲ. ಕಾಕತಿ ವೇಸ್‌, ಕಿರ್ಲೋಸ್ಕರ್‌ ರಸ್ತೆ, ಮಾರುತಿ ಗಲ್ಲಿ, ಗಣಪತಿ ಗಲ್ಲಿ, ಕಡೋಲ್ಕರ್‌ ಗಲ್ಲಿ ಹಾಗೂ ಇತರ ರಸ್ತೆಗಳನ್ನು ಅಗೆದು ರಸ್ತೆ ಸ್ವರೂಪವನ್ನೇ ಬದಲಾಯಿಸಲಾಗಿದೆ. ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದೆ.

ಇನ್ನು ಮುಂದೆ ರಸ್ತೆ ಅಗೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಯಾರಾರ‍ಯರೋ ಏನೇನೋ ಮಾಡಿ ಹೋಗುತ್ತಾರೆ. ಅದನ್ನೆಲ್ಲ ನೋಡಿಕೊಂಡು ಸುಮ್ಮನಿರಲು ಆಗುವುದಿಲ್ಲ. ಹೆಸ್ಕಾಂ ಸೇರಿದಂತೆ ಯಾರೇ ರಸ್ತೆ ಅಗೆತ ಆರಂಭಿಸಿದರೆ ನನಗೆ ತಿಳಿಸಿ. ಸದಸ್ಯರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದರು.

ಗುತ್ತಿಗೆದಾರರಿಗೆ ನೋಟಿಸ್‌: ನಗರದಲ್ಲಿ ಲೋಕೋಪಯೋಗಿ ಇಲಾಖೆ, ಕಾಂಟೋನ್ಮೆಂಟ್‌, ಬುಡಾ ರಸ್ತೆಗಳೂ ಇವೆ. ಆದರೆ, ಎಲ್ಲದಕ್ಕೂ ಪಾಲಿಕೆಯತ್ತ ಬೊಟ್ಟು ಮಾಡಲಾಗುತ್ತಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳ ಗುಂಡಿಗಳನ್ನು ಈಗಾಗಲೇ ಮುಚ್ಚಲಾಗುತ್ತಿದೆ. ಮಳೆ ಕಡಿಮೆಯಾದರೆ ಇನ್ನಷ್ಟು ತ್ವರಿತವಾಗಿ ಈ ಕೆಲಸ ಮಾಡಲಾಗುವುದು. ಎರಡು ವರ್ಷಗಳ ಉಸ್ತುವಾರಿ ಕರಾರಿನ ಮೇಲೆ ನಿರ್ಮಾಣವಾಗಿರುವ ರಸ್ತೆಗಳಲ್ಲಿ ಗುಂಡಿಗಳು ಇದ್ದರೆ ಗುತ್ತಿಗೆದಾರರಿಗೆ ತಿಳಿಸಿ ಮುಚ್ಚಿಸಲಾಗುತ್ತದೆ. ತೀರಾ ಹಾಳಾಗಿದ್ದರೆ ರಸ್ತೆ ಕೆಲಸವನ್ನು ಮತ್ತೊಮ್ಮೆ ಮಾಡಲು ಹೇಳುತ್ತೇವೆ. ಈಗಾಗಲೇ 3-4 ಗುತ್ತಿಗೆದಾರರಿಗೆ ನೋಟಿಸ್‌ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಉಪ ಮೇಯರ್‌ ಮಧುಶ್ರೀ ಪೂಜಾರ, ಮಾಜಿ ಮೇಯರ್‌ ಸರಿತಾ ಪಾಟೀಲ, ರಮೇಶ ಸೊಂಟಕ್ಕಿ, ರವಿ ಧೋತ್ರೆ, ರತನ ಮಾಸೇಕರ್‌, ರಮೇಶ ಕಳಸಣ್ಣವರ್‌, ವಿ. ಲೋಕೇಶ್‌, ಮಾಯಾ ಕಡೋಲಕರ್‌, ಡಾ.ದಿನೇಶ ನಾಶಿಪುಡಿ, ಶಾಂತಾ ಉಪ್ಪಾರ, ರಾಕೇಶ ಪಲ್ಲಂಗೆ, ರಾಜು ಬಿರ್ಜೆ, ಪಾಲಿಕೆ ಉತ್ತರ ಭಾಗದ ಮುಖ್ಯಅಭಿಯಂತರ ಆರ್‌.ಎಸ್‌. ನಾಯಿಕ, ದಕ್ಷಿಣ ಭಾಗದ ಮುಖ್ಯಅಭಿಯಂತರರಾದ ಲಕ್ಷ್ಮೇ ನಿಪ್ಪಾಣಿಕರ್‌ ಹಾಗೂ ಇತರೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ