ಆ್ಯಪ್ನಗರ

ಮಳೆ ಅಬ್ಬರಕ್ಕೆ ಕೆರೆಯಂತಾದ ರಸ್ತೆಗಳು

ಬೆಳಗಾವಿ: ಭಾನುವಾರ ಸುರಿದ ಮಳೆಗೆ ನಗರದ ಹಳೇ ಪುಣೆ-ಬೆಂಗಳೂರು ಮತ್ತು ರವಿವಾರ ಪೇಟೆ ರಸ್ತೆಯಲ್ಲಿ ನೀರು ನಿಂತು ಅವಾಂತರ ಸೃಷ್ಟಿಯಾಯಿತು...

Vijaya Karnataka 8 Jul 2019, 5:00 am
ಬೆಳಗಾವಿ : ಭಾನುವಾರ ಸುರಿದ ಮಳೆಗೆ ನಗರದ ಹಳೇ ಪುಣೆ-ಬೆಂಗಳೂರು ಮತ್ತು ರವಿವಾರ ಪೇಟೆ ರಸ್ತೆಯಲ್ಲಿ ನೀರು ನಿಂತು ಅವಾಂತರ ಸೃಷ್ಟಿಯಾಯಿತು.
Vijaya Karnataka Web BLG-0707-2-52-7PRAMOD7


ರಸ್ತೆಯ ಪಕ್ಕದ ಚರಂಡಿ ಹೂಳು ತೆಗೆಯದೇ ಇದ್ದರಿಂದ ನೀರು ನಿಂತು ಸಂಚಾರ ದುಸ್ತರವಾಯಿತು. ರಸ್ತೆಯಲ್ಲಿ ಸುಮಾರು ಎರಡು ಅಡಿವರೆಗೆ ನೀರು ನಿಂತಿದ್ದರಿಂದ ವ್ಯಾಪಾರಿಗಳು ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿದ್ದರು. ದ್ವಿಮುಖ ಸಂಚಾರ ಇರುವ ಈ ರಸ್ತೆಯಲ್ಲಿ ತಗ್ಗು ಇರುವ ರಸ್ತೆ ಸಂಪೂರ್ಣ ಕೆರೆಯಂತಾಗಿತ್ತು. ಇನ್ನೊಂದು ಕಡೆ ಅಷ್ಟೊಂದು ನೀರು ನಿಂತಿರಲಿಲ್ಲ.

ಮಳೆಗಾಲ ವಿಳಂಬವಾಗಿ ಆರಂಭವಾದರೂ ಪಾಲಿಕೆ ಅಧಿಕಾರಿಗಳು ಚರಂಡಿ ಹೂಳು ತೆಗೆಯುವ ಕೆಲಸ ಸಮರ್ಪಕವಾಗಿ ನಿರ್ವಹಿಸಿಲ್ಲ. ಅದರಿಂದಲೇ ಈ ಅವಾಂತರ ಸೃಷ್ಟಿಯಾಗಿದೆ ಎಂದು ಸ್ಥಳಿಯರು ಶಪಿಸುತ್ತಿರುವುದು ಕಂಡು ಬಂತು. ಇನ್ನೊಂದೆಡೆ ಮಳೆಯೂ ಆಗಾಗ ಜೋರಾಗಿ ಅಬ್ಬರಿಸಿದ್ದರಿಂದ ನಗರದ ಇತರ ರಸ್ತೆಗಳಲ್ಲಿಯೂ ನೀರು ದಟ್ಟವಾಗಿ ಹರಿಯಿತು. ಚರಂಡಿ, ಕಟ್ಟೆಗಳು ತುಂಬಿ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿದವು.

ಬೆಳಗ್ಗೆಯಿಂದಲೇ ಶುರುವಾದ ಮಳೆ ಬಿಟ್ಟು ಬಿಟ್ಟು ಜೋರಾಗಿ ಸುರಿಯಿತು. ಆಗಾಗ ತುಂತುರು ಮಳೆ ಕಾಣಿಸಿಕೊಂಡರೂ ಕೆಲವೆಡೆ ಭರ್ಜರಿಯಾಗಿ ಸುರಿಯಿತು. ಚರಂಡಿಗಳು ತುಂಬಿ ರಸ್ತೆಯಲ್ಲಿ ನೀರು ಹರಿಯಿತು. ಇದರಿಂದ ರಸ್ತೆಗಳಲ್ಲಿ ಸಂಚಾರ ಸಮಸ್ಯೆ ಉಂಟಾಗಿತ್ತು. ಬೀದಿ ಬದಿ ವ್ಯಾಪಾರಿಗಳು ಮಾರಾಟ ಸಾಮಗ್ರಿಗಳ ಮೇಲೆ ಪ್ಲಾಸ್ಟಿಕ್‌ ಹೊದಿಕೆ ಹಾಸಿಕೊಂಡೇ ಕುಳಿತುಕೊಳ್ಳುವಂತಾಯಿತು.

ಸಂಜೆ ವೇಳೆ ಕೆಲ ಗಂಟೆ ಬಿಡುವು ನೀಡಿತಾದರೂ ಮೋಡ ಆಕಾಶವನ್ನು ಆವರಿಸಿತ್ತು. ರಾತ್ರಿ ಮತ್ತೆ ಜೋರಾಗಿ ಸುರಿದ ಮಳೆ ರಸ್ತೆ, ಬೀದಿಗಳಲ್ಲಿ ನೀರು ಹರಿಸಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ