ಆ್ಯಪ್ನಗರ

ಅಪಘಾತದಲ್ಲಿ ಮೃತ ಇನ್ಸ್‌ಪೆಕ್ಟರ್‌ ಕುಟುಂಬಕ್ಕೆ 59.44 ಲಕ್ಷ ರೂ. ವಿಮೆ ಪರಿಹಾರ

ಕಾರು ಅಪಘಾತದಲ್ಲಿ ಮೃತಪಟ್ಟಿದ್ದ ಪೊಲೀಸ್‌ ಇನ್ಸ್‌ಪೆಕ್ಟರ್‌ ರಾಮಚಂದ್ರ ಬಳ್ಳಾರಿ ಕುಟುಂಬಕ್ಕೆ ವಿಮಾ ಕಂಪನಿ 5944 ಲಕ್ಷ ರೂ...

Vijaya Karnataka 25 Aug 2018, 5:00 am
ಬೆಳಗಾವಿ: ಕಾರು ಅಪಘಾತದಲ್ಲಿ ಮೃತಪಟ್ಟಿದ್ದ ಪೊಲೀಸ್‌ ಇನ್ಸ್‌ಪೆಕ್ಟರ್‌ ರಾಮಚಂದ್ರ ಬಳ್ಳಾರಿ ಕುಟುಂಬಕ್ಕೆ ವಿಮಾ ಕಂಪನಿ 59.44 ಲಕ್ಷ ರೂ. ಪರಿಹಾರ ನೀಡುವಂತೆ ಇಲ್ಲಿನ 1ನೇ ಹೆಚ್ಚುವರಿ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ.
Vijaya Karnataka Web rs 59 44 lakh for deceased inspector family in accident insurance solution
ಅಪಘಾತದಲ್ಲಿ ಮೃತ ಇನ್ಸ್‌ಪೆಕ್ಟರ್‌ ಕುಟುಂಬಕ್ಕೆ 59.44 ಲಕ್ಷ ರೂ. ವಿಮೆ ಪರಿಹಾರ


ಪ್ರಕರಣ ಹಿನ್ನೆಲೆ: 2016ರ ಡಿ. 29ರಂದು ನಿಪ್ಪಾಣಿಯಿಂದ ಬೆಳಗಾವಿ ಕಡೆಗೆ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಉಕ್ಕಡ ಸಮೀಪ ಅಪಘಾತವಾಗಿತ್ತು. ಆಗ ಗಂಭೀರವಾಗಿ ಗಾಯಗೊಂಡಿದ್ದ ಇನ್ಸ್‌ಪೆಕ್ಟರ್‌ ರಾಮಚಂದ್ರ ಬಳ್ಳಾರಿ ಅವರು ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದರು. ಈ ಕುರಿತು ಕಾಕತಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕುಟುಂಬಸ್ಥರು ನ್ಯಾಯಾಲಯದಲ್ಲಿ ಒಂದು ಕೋಟಿ ರೂ. ಪರಿಹಾರ ವಿಮೆ ನೀಡುವಂತೆ ದಾವೆ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ 59.44 ಲಕ್ಷ ರೂ.ಯನ್ನು ಶೇ. 6ರ ಬಡ್ಡಿದರದಲ್ಲಿ ದಾವೆ ದಾಖಲಿಸಿದ ದಿನದಿಂದ ಇಲ್ಲಿವರೆಗೆ ಎರಡು ತಿಂಗಳೊಳಗೆ ಕೋರ್ಟ್‌ಗೆ ಜಮೆ ಮಾಡುವಂತೆ ಆದೇಶ ನೀಡಿದೆ. ದಾವೆಯ ಪರವಾಗಿ ನ್ಯಾಯವಾದಿ ದಿನಕರ ಶೆಟ್ಟಿ ವಾದ ಮಂಡಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ