ಆ್ಯಪ್ನಗರ

ಗಣೇಶ್‌ ಹುಕ್ಕೇರಿ ರಾಜೀನಾಮೆ ವದಂತಿ, ಗೊಂದಲ

ಸರಕಾರದ ಮುಖ್ಯ ಸಚೇತಕರೂ ಆಗಿರುವ ಚಿಕ್ಕೋಡಿ-ಸದಲಗಾ ಶಾಸಕ ಗಣೇಶ್‌ ಹುಕ್ಕೇರಿ ...

Vijaya Karnataka 11 Jul 2019, 10:51 pm
ಬೆಳಗಾವಿ/ಯಕ್ಸಂಬಾ: ಸರಕಾರದ ಮುಖ್ಯ ಸಚೇತಕರೂ ಆಗಿರುವ ಚಿಕ್ಕೋಡಿ-ಸದಲಗಾ ಶಾಸಕ ಗಣೇಶ್‌ ಹುಕ್ಕೇರಿ ಕೂಡ ರಾಜೀನಾಮೆ ನೀಡಲು ತೆರಳಿದ್ದಾರೆಂಬ ವದಂತಿ ಬುಧವಾರ ಅವರ ಸ್ವಗ್ರಾಮವಾದ ಯಕ್ಸಂಬಾ ಸೇರಿದಂತೆ ಜಿಲ್ಲೆಯಲ್ಲಿ ಕೆಲಕಾಲ ಕಾರ್ಯಕರ್ತರನ್ನು ಗೊಂದಲಕ್ಕೆ ದೂಡಿತು. ಗಣೇಶ್‌ ಹುಕ್ಕೇರಿ ವಿಧಾನಸಭೆ ಅಧಿವೇಶನ ವಿಚಾರವಾಗಿ ಸ್ಪೀಕರ್‌ ರಮೇಶ್‌ಕುಮಾರ್‌ ಅವರನ್ನು ಭೇಟಿಯಾಗಲು ಅವರ ಕಚೇರಿಗೆ ತೆರಳಿದ್ದರು. ಆದರೆ, ಈ ಕುರಿತಂತೆ ಮಾಧ್ಯಮಗಳಲ್ಲಿ ಗಣೇಶ್‌ ಹುಕ್ಕೇರಿ ಕೂಡ ರಾಜೀನಾಮೆ ನೀಡಲು ಮುಂದಾಗಿದ್ದಾರೆಯೇ ಎಂಬ ಊಹಾಪೋಹದ ವರದಿ ಬಿತ್ತರವಾದ್ದರಿಂದ ಕಾರ್ಯಕರ್ತರು ಆತಂಕಕ್ಕೊಳಗಾದರು. ನೈಜ ಕಾರಣ ಗೊತ್ತಾಗಿ, ಗಣೇಶ್‌ ಹುಕ್ಕೇರಿ ರಾಜೀನಾಮೆ ನೀಡುತ್ತಿಲ್ಲ ಎಂಬುದು ಖಚಿತವಾದ ನಂತರ ನಿರಾಳರಾದರು. ಈ ಹಿಂದೆಯೂ ಒಮ್ಮೆ ಗಣೇಶ್‌ ಹುಕ್ಕೇರಿ ಬಿಜೆಪಿ ಸೇರುತ್ತಾರೆಂಬ ವದಂತಿ ಹರಡಿತ್ತು.
Vijaya Karnataka Web rumors of ganesh hukkeris resignation confusion
ಗಣೇಶ್‌ ಹುಕ್ಕೇರಿ ರಾಜೀನಾಮೆ ವದಂತಿ, ಗೊಂದಲ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ