ಆ್ಯಪ್ನಗರ

ಕುಸ್ತಿಗೆ ಪ್ರೋತ್ಸಾಹ ನೀಡಲು ಪೈಲ್ವಾನರ ಒತ್ತಾಯ

ಬೆಳಗಾವಿ: ಮಾಶಾಸನ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗುರುವಾರ ನರಗುಂದದ ಜೈ ಹನುಮಾನ ಕುಸ್ತಿ ಪೈಲ್ವಾನರ ಸಂಘದ ವತಿಯಿಂದ ...

Vijaya Karnataka 14 Dec 2018, 5:00 am
ಬೆಳಗಾವಿ : ಮಾಶಾಸನ ಹೆಚ್ಚಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗುರುವಾರ ನರಗುಂದದ ಜೈ ಹನುಮಾನ ಕುಸ್ತಿ ಪೈಲ್ವಾನರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
Vijaya Karnataka Web BEL-13 LBS 1


ಗ್ರಾಮೀಣ ಕ್ರೀಡೆಯಾದ ಕುಸ್ತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರಕಾರ ಮುಂದಾಗಬೇಕು. ಗ್ರಾಮೀಣ ಭಾಗದ ಕುಸ್ತಿ ಪಟುಗಳನ್ನು ಪೋತ್ಸಾಹಿಸಬೇಕು. ಆದರೆ, ಸರಕಾರ ಕುಸ್ತಿ ಪಟುಗಳಿಗೆ ಯಾವುದೇ ಸಹಕಾರ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕುಸ್ತಿ ಕ್ರೀಡೆ ಪೋತ್ಸಾಹಿಸುವ ನಿಟ್ಟಿನಲ್ಲಿ ಸರಕಾರ ಪ್ರತಿ ಗ್ರಾಮಗಳಲ್ಲಿ ಒಂದು ಗರಡಿ ಮನೆ ನಿರ್ಮಾಣ ಮಾಡಬೇಕು. ತಾಲೂಕಿಗೆ ಒಂದು ಕುಸ್ತಿ ಆಟದ ಮೈದಾನ ನಿರ್ಮಾಣ ಮಾಡಬೇಕು. ಮಾಶಾಸನ ಹೆಚ್ಚಿಸಬೇಕು. ಬಸ್‌ ಹಾಗೂ ರೈಲ್ವೆ ಪಾಸ್‌ ನೀಡಬೇಕು ಎಂದು ಸರಕಾರಕ್ಕೆ ಮನವಿ ಮೂಲಕ ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ