ಆ್ಯಪ್ನಗರ

ಶಾಂತಿಸಾಗರರ ಜೀವನ ತ್ಯಾಗಿಗಳಿಗೆ ಆದರ್ಶ

- ಯರನಾಳದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ...

Vijaya Karnataka 12 Jul 2019, 5:00 am
ಹುಕ್ಕೇರಿ : ಪ್ರಥಮಾಚಾರ್ಯ ಶಾಂತಿಸಾಗರ ಮುನಿ ಮಹಾರಾಜರ ತ್ಯಾಗಮಯ ಜೀವನ ಅತ್ಯಂತ ಗೌರವಶಾಲಿಯಾಗಿದ್ದು, ಜೈನ ಧರ್ಮಕ್ಕೆ ಮತ್ತು ಇಂದಿನ ತ್ಯಾಗಿಗಳಿಗೆ ಆದರ್ಶವಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದರು.
Vijaya Karnataka Web BEL-11 HUKKERI 02


ತಾಲೂಕಿನ ಯರನಾಳ ಗ್ರಾಮದಲ್ಲಿ ಗುರುವಾರ ಪ್ರಥಮಾಚಾರ್ಯ ಶಾಂತಿಸಾಗರ ಮುನಿ ಮಹಾರಾಜರ ದೀಕ್ಷಾ ಶತಮಾನೋತ್ಸವ ಅಂಗವಾಗಿ ಅವರ ಪಂಚಮ ಪಟ್ಟಾಧೀಶ ಆಚಾರ್ಯ ಶ್ರೀ 108 ವರ್ಧಮಾನ ಸಾಗರ ಮುನಿಗಳ ಚಾತುರ್ಮಾಸದ ನಿಮಿತ್ತ ಯರನಾಳ ಗ್ರಾಮ ಪ್ರವೇಶ ಸಮಾರೋಹ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಪ್ರಥಮಾಚಾರ್ಯ ಶಾಂತಿಸಾಗರ ಮುನಿಗಳು ದಿಗಂಬರ ಮುನಿ ಪರಂಪರೆಯನ್ನು ಮುಂದುವರಿಸಿ ಅದಕ್ಕೊಂದು ಹೊಸ ಆಯಾಮ ನೀಡಿದ್ದಾರೆ. ನೂರು ವರ್ಷಗಳ ಹಿಂದೆ ಅವರು ಕಠಿಣ ವೃತಗಳನ್ನು ಆಚರಿಸುವ ಮೂಲಕ ಜೈನ ಧರ್ಮದ ಸಿದ್ಧಾಂತಗಳನ್ನು ಎಲ್ಲೆಡೆ ಪ್ರಚಾರ ಪಡಿಸಿದ್ದಾರೆ. ಇಂತಹ ತ್ಯಾಗಿ ಜೀವನ ಗೌರವಶಾಲಿ ಜೀವನವಾಗಿದೆ ಎಂದರು.

ಸಾನಿಧ್ಯ ವಹಿಸಿದ್ದ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಶ್ರೀಗಳು ಮಾತನಾಡಿ, ನೂರು ವರ್ಷಗಳ ಹಿಂದೆ ಪ್ರಥಮಾಚಾರ್ಯ ಶಾಂತಿಸಾಗರ ಮುನಿಗಳು ಇದೇ ಯರನಾಳ ಗ್ರಾಮದಲ್ಲಿ ಮುನಿ ದೀಕ್ಷೆ ಸ್ವೀಕರಿಸುವ ಮೂಲಕ ದಿಗಂಬರ ಪರಂಪರೆಗೆ ಹೊಸ ದಿಕ್ಕು ತೋರಿಸಿದರು. ಅಂದಿನ ಕಠಿಣ ಸಂದರ್ಭದಲ್ಲಿಯೂ ಶಾಂತಿಸಾಗರ ಮುನಿಗಳು ಜೈನ ಪರಂಪರೆ ಪ್ರಚುರಪಡಿಸಲು ದೇಶದೆಲ್ಲೆಡೆ ಪ್ರಚಾರ ಕೈಗೊಂಡಿದ್ದರು. ಇಂತಹ ಮುನಿಗಳು ದೀಕ್ಷೆ ಸ್ವೀಕರಿಸಿದ ಯರನಾಳ ಗ್ರಾಮ ಪುಣ್ಯಭೂಮಿಯಾಗಿದೆ. ಮುಂಬರುವ ದಿನಗಳಲ್ಲಿ ಇದೇ ಗ್ರಾಮದಿಂದ ಹೊಸ ಯೋಜನೆಗಳನ್ನು ಕೈಗೊಳ್ಳಲಾಗುವುದು ಎಂದರು.

ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಶಶಿಕಾಂತ ನಾಯಿಕ, ಸಂಜಯ ಪಾಟೀಲ ಮಾತನಾಡಿದರು. ದೀಕ್ಷಾ ಶತಾಬ್ದಿ ಮಹೋತ್ಸವದ ರಾಷ್ಟ್ರೀಯ ಆಯೋಜನ ಸಮಿತಿ ಕಾರ್ಯಾಧ್ಯಕ್ಷ ಹಾಗೂ ದಕ್ಷಿಣ ಭಾರತ ಜೈನ ಸಭೆಯ ಅಧ್ಯಕ್ಷ ರಾವಸಾಹೇಬ ಪಾಟೀಲ ಅವರು ಅತಿಥಿಗಳನ್ನು ಸ್ವಾಗತಿಸಿದರು.

ಅಶೋಕ ಪಟನಿ, ಸರಿತಾ ಜೈನ, ಶ್ರೀಪಾಲ ಗಂಗವಾಲ, ರಾಕೇಶ ಸೇಠಿ. ಅನಿಲ ಸೇಠಿ, ಡಿ.ಎ.ಪಾಟೀಲ, ಸುರೇಶ ಸಬಲಾವತ, ವಿನೋದ ದೊಡ್ಡಣ್ಣವರ, ಸುರೇಶ ಪಾಟೀಳ, ಡಿ.ಎ.ಪಾಟೀಲ,ಮಹಾವೀರ ನಿಲಜಗಿ, ರೋಹಿತ ಚೌಗಲಾ, ಮರಪ್ಪ ಮುನ್ನೋಳಿ, ರಾಜು ಖೇಮಲಾಪುರೆ, ರಾಹುಲ ಖೇಮಲಾಪುರೆ, ಬಾಹುಬಲಿ ನಾಗನೂರೆ, ಸಂಜು ನಿಲಜಗಿ, ರವೀಂದ್ರ ಚೌಗುಲಾ, ಪುಷ್ಪಕ ಹನಮಣ್ಣವರ ಪಪ್ಪುಗೌಡ ಪಾಟೀಲ, ಭೂಪಾಲ ಚೌಗಲಾ, ಜಿನಗೌಡ ಪಾಟೀಲ ಉಪಸ್ಥಿತರಿದ್ದರು.

ಶ್ರೀಗಳಿಗೆ ಭವ್ಯ ಸ್ವಾಗತ :
ಬಡಕುಂದ್ರಿ ಗ್ರಾಮದ ಬಳಿ ಆಚಾರ್ಯ ಶ್ರೀ ವರ್ಧಮಾನ ಸಾಗರ ಮುನಿಗಳಿಗೆ ಭವ್ಯ ಸ್ವಾಗತ ಕೋರಲಾಯಿತು. ಹುಕ್ಕೇರಿಯಿಂದ ಮುನಿಗಳು ಆಗಮಿಸುತ್ತಿದ್ದಂತೆ ಮಹಾವೀರ ನಿಲಜಗಿ ಮತ್ತು ಅವರ ಕುಟುಂಬದ ಸದಸ್ಯರು ಪಾದಪೂಜೆ ನೆರವೇರಿಸಿದರು. ಯರನಾಳ ಬಳಿ ವೀರೇಂದ್ರ ಹೆಗ್ಗಡೆಯವರು ಶ್ರೀಗಳಿಗೆ ಪಾದಪೂಜೆ ನೆರವೇರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ