‘ನಾವು ಹಿಟ್ಲರ್ ಅಪ್ಪಂದಿರು. ದಾದಾಗಿರಿ ಹುಟ್ಟು ಹಾಕಿದ್ದೇ ಶಿವಸೇನೆ’; ಬಿಜೆಪಿ ವಿರುದ್ಧ ಶಿವಸೇನೆ ಕಿಡಿ
ಪಶ್ಚಿಮ ಬಂಗಾಳ ಬಗ್ಗೆ ಮಾತಾಡುವ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಯಡಿಯೂರಪ್ಪ ಸರಕಾರದಲ್ಲಿ ಬೆಳಗಾವಿಯಲ್ಲಿ ಮರಾಠಿಗರ ಮೇಲೆ ಆಗುತ್ತಿರುವ ಅನ್ಯಾಯ ಕಣ್ಣಿಗೆ ಕಾಣುತ್ತಿಲ್ಲ. ಕೇಂದ್ರ ಸರಕಾರ ಬೆಳಗಾವಿಯ ಮರಾಠಿಗರಿಗೆ ನ್ಯಾಯ ಒದಗಿಸಲಿ. ಅದನ್ನು ಬಿಟ್ಟು ದಾದಾಗಿರಿ ನಡೆಸಿದರೆ ಶಿವಸೇನೆ ಸುಮ್ಮನಿರದು ಎಂದು ಸಂಜಯ್ ರಾವತ್ ವಾಗ್ದಾಳಿ ನಡೆಸಿದರು.
Vijaya Karnataka Web 15 Apr 2021, 8:03 am
ಹೈಲೈಟ್ಸ್:
- ನಾವು ಹಿಟ್ಲರ್ ಅಪ್ಪಂದಿರು. ದಾದಾಗಿರಿ ಹುಟ್ಟು ಹಾಕಿದವರೇ ನಾವು
- ನಮಗೆ ದಾದಾಗಿರಿ ನಡೆಸುವುದು ನಿಮಗಿಂತಲೂ ಚೆನ್ನಾಗಿ ಗೊತ್ತು
- ಬಿಜೆಪಿ ವಿರುದ್ಧ ಮಹಾರಾಷ್ಟ್ರದ ಶಿವಸೇನೆ ಸಂಸದ ಸಂಜಯ್ ರಾವತ್ ಕಿಡಿ
ಬೆಳಗಾವಿ: ನಾವು ಹಿಟ್ಲರ್ ಅಪ್ಪಂದಿರು. ದಾದಾಗಿರಿ ಹುಟ್ಟು ಹಾಕಿದವರೇ ನಾವು. ನಮಗೆ ದಾದಾಗಿರಿ ನಡೆಸುವುದು ನಿಮಗಿಂತಲೂ ಚೆನ್ನಾಗಿ ಗೊತ್ತು ಎಂದು ಮಹಾರಾಷ್ಟ್ರದ ಶಿವಸೇನೆ ಸಂಸದ ಸಂಜಯ್ ರಾವತ್ ಗುಡುಗಿದ್ದಾರೆ. ನಗರದಲ್ಲಿ ಬುಧವಾರ ಲೋಕಸಭೆ ಉಪಚುನಾವಣೆಯ ಶಿವಸೇನೆ ಬೆಂಬಲಿತ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳ ಬಗ್ಗೆ ಮಾತಾಡುವ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಯಡಿಯೂರಪ್ಪ ಸರಕಾರದಲ್ಲಿ ಬೆಳಗಾವಿಯಲ್ಲಿ ಮರಾಠಿಗರ ಮೇಲೆ ಆಗುತ್ತಿರುವ ಅನ್ಯಾಯ ಕಣ್ಣಿಗೆ ಕಾಣುತ್ತಿಲ್ಲ. ಕೇಂದ್ರ ಸರಕಾರ ಬೆಳಗಾವಿಯ ಮರಾಠಿಗರಿಗೆ ನ್ಯಾಯ ಒದಗಿಸಲಿ. ಅದನ್ನು ಬಿಟ್ಟು ದಾದಾಗಿರಿ ನಡೆಸಿದರೆ ಶಿವಸೇನೆ ಸುಮ್ಮನಿರದು ಎಂದು ವಾಗ್ದಾಳಿ ನಡೆಸಿದರು.
ಗಡಿ ವಿವಾದ ವಿಷಯವನ್ನು 70 ವರ್ಷಗಳಿಂದಲೂ ಜೀವಂತ ಇಟ್ಟು ಕೊಂಡು ಬರುತ್ತಿರುವ ಏಕೈಕ ಪಕ್ಷ ನಮ್ಮದು. ಮರಾಠಿಗರ ಅಸ್ಮಿತಿಯೇ ಭಗವಾಧ್ವಜ. ಇದಕ್ಕೆ ಕೈ ಹಚ್ಚಿದರೆ, ಧಕ್ಕೆ ತಂದರೆ ಬಿಡುವುದಿಲ್ಲ. ಜಮ್ಮು ಕಾಶ್ಮೀರದಲ್ಲಿನ 371 ಕಲಂ ತೆಗೆದು ಹಾಕಿರುವ ಪ್ರಧಾನಿಗೆ ನಿಜವಾಗಲೂ ಶಕ್ತಿ ಇದ್ದರೆ ಬೆಳಗಾವಿ ಗಡಿ ವಿವಾದಕ್ಕೂ ಪರಿಹಾರ ನೀಡಲಿ ಎಂದು ಒತ್ತಾಯಿಸಿದರು. ಕೊಲ್ಲಾಪುರ ಶಾಸಕ ಧೈರ್ಯಶೀಲ ಮಾನೆ, ಎಂಇಎಸ್ ಮುಖಂಡ ದೀಪಕ ದಳವಿ ಮಾತನಾಡಿದರು.
ಗಡಿ ವಿವಾದ ವಿಷಯವನ್ನು 70 ವರ್ಷಗಳಿಂದಲೂ ಜೀವಂತ ಇಟ್ಟು ಕೊಂಡು ಬರುತ್ತಿರುವ ಏಕೈಕ ಪಕ್ಷ ನಮ್ಮದು. ಮರಾಠಿಗರ ಅಸ್ಮಿತಿಯೇ ಭಗವಾಧ್ವಜ. ಇದಕ್ಕೆ ಕೈ ಹಚ್ಚಿದರೆ, ಧಕ್ಕೆ ತಂದರೆ ಬಿಡುವುದಿಲ್ಲ. ಜಮ್ಮು ಕಾಶ್ಮೀರದಲ್ಲಿನ 371 ಕಲಂ ತೆಗೆದು ಹಾಕಿರುವ ಪ್ರಧಾನಿಗೆ ನಿಜವಾಗಲೂ ಶಕ್ತಿ ಇದ್ದರೆ ಬೆಳಗಾವಿ ಗಡಿ ವಿವಾದಕ್ಕೂ ಪರಿಹಾರ ನೀಡಲಿ ಎಂದು ಒತ್ತಾಯಿಸಿದರು. ಕೊಲ್ಲಾಪುರ ಶಾಸಕ ಧೈರ್ಯಶೀಲ ಮಾನೆ, ಎಂಇಎಸ್ ಮುಖಂಡ ದೀಪಕ ದಳವಿ ಮಾತನಾಡಿದರು.