ಆ್ಯಪ್ನಗರ

ಸಂಕೇಶ್ವರ: ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

ಸಂಕೇಶ್ವರ: ತೈಲ ಬೆಲೆ ಏರಿಕೆ ಖಂಡಿಸಿ ಸೋಮವಾರ ಕರೆ ನೀಡಿದ್ದ ಭಾರತ ಬಂದ್‌ಗೆ ಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು...

Vijaya Karnataka 11 Sep 2018, 5:00 am
ಸಂಕೇಶ್ವರ: ತೈಲ ಬೆಲೆ ಏರಿಕೆ ಖಂಡಿಸಿ ಸೋಮವಾರ ಕರೆ ನೀಡಿದ್ದ ಭಾರತ ಬಂದ್‌ಗೆ ಪಟ್ಟಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
Vijaya Karnataka Web BEL-10-SANK-01


ಎಂದಿನಂತೆ ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿದ್ದವು. ವಾಹನ ಸಂಚಾರ ಕೂಡ ಎಂದಿನಂತಿತ್ತು. ಸರಕಾರದ ಮುನ್ನೆಚ್ಚರಿಕೆ ಆದೇಶದ ನಿಮಿತ್ತ ಶಾಲಾ ಕಾಲೇಜುಗಳು ಮಾತ್ರ ಮುಚ್ಚಿದ್ದವು.

ಕಾಂಗ್ರೆಸ್‌ ಕಾರ್ಯಕರ್ತರು ಪಟ್ಟಣದ ಹಳೆ ಪಿಬಿ ರಸ್ತೆ ಹಾಗೂ ಸಂಕೇಶ್ವರ-ಗೋಕಾಕ ರಸ್ತೆಯನ್ನು ಬಂದ್‌ ಮಾಡಿ ಪ್ರತಿಭಟಿಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ನಂತರ ಸಂಕೇಶ್ವರ ಕಂದಾಯ ನಿರೀಕ್ಷ ಕರ ಅವರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಮಾಜಿ ಸಚಿವ ಎ.ಬಿ.ಪಾಟೀಲ ಪೆಟ್ರೋಲ್‌, ಡೀಸೆಲ್‌ ಹಾಗೂ ಅಡುಗೆ ಅನಿಲಗಳ ಮತ್ತು ದಿನಬಳಕೆ ಮತ್ತು ಅಗತ್ಯ ವಸ್ತುಗಳಿಗೆ ತೆರಿಗೆ ವಿಧಿಸಿದ್ದರಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ದೇಶದ ಜನಹಿತ ಕಾಪಾಡುವ ಬದ್ಧತೆ ಕಾಂಗ್ರೆಸ್‌ ಪಕ್ಷ ಕ್ಕೆ ಮಾತ್ರ ಸಾಧ್ಯವಿದೆ ಎಂದರು.

ಹಿರಿಯ ಮುಖಂಡ ನಾಗಪ್ಪಣ್ಣಾ ಕರಜಗಿ, ಸಂಜಯ ನಷ್ಟಿ, ಡಾ.ಜಯಪ್ರಕಾಶ ಕರಜಗಿ, ಬಸನಗೌಡ ಪಾಟೀಲ, ಗಂಗಾಧರ ಮುಡಸಿ, ಪುರಸಭೆ ಸದಸ್ಯರಾದ ಸೇವಂತಾ ಕಬ್ಬೂರಿ, ಪಾರ್ವತಿ ನಾಯಿಕ, ಚಿದಾನಂದ ಕರದಣ್ಣವರ, ಸವಿತಾ ನಷ್ಠಿ, ಸಂಗೀತಾ ಕೋಳಿ, ವಿನೋದ ನಾಯಿಕ, ಅಪ್ಪಾಜಿ ಮರಡಿ, ಲತಾ ಮರಡಿ. ರಿಜ್ವಾನ ರಾಂಪುರೆ, ಪ್ರಶಾಂತ ಮಣ್ಣಿಕೇರಿ, ಸುರೇಶ ಬಾಡಕರ, ದಿಲೀಪ ಹೊಸಮನಿ, ಮಹೇಶ ಹಟ್ಟಿಹೊಳಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ