ಆ್ಯಪ್ನಗರ

ಸತೀಶ್‌ ಜಾರಕಿಹೊಳಿ ನಾಮಪತ್ರ ತಿರಸ್ಕೃತ

ಗೋಕಾಕ: ಸಹೋದರ ಲಖನ್‌ ಜಾರಕಿಹೊಳಿ ಅವರ ...

Vijaya Karnataka 20 Nov 2019, 5:00 am
ಗೋಕಾಕ: ಸಹೋದರ ಲಖನ್‌ ಜಾರಕಿಹೊಳಿ ಅವರ ಪರ್ಯಾಯವಾಗಿ ಶಾಸಕ ಸತೀಶ ಜಾರಕಿಹೊಳಿ ಸಲ್ಲಿಸಿದ್ದ ನಾಲ್ಕೂ ನಾಮಪತ್ರಗಳು ತಿರಸ್ಕೃತವಾಗಿವೆ. ಸತೀಶ ಅವರು ಕಾಂಗ್ರೆಸ್‌ ಹೆಸರಿನಲ್ಲಿನಾಮಪತ್ರ ಸಲ್ಲಿಸಿದ್ದರು. ಬಿ ಫಾಮ್‌ರ್‍ ಇಲ್ಲಮತ್ತು ಕೆಲ ಆಯ್ಕೆಗಳನ್ನು ಸರಿಯಾಗಿ ಭರ್ತಿ ಮಾಡದ ಕಾರಣಕ್ಕೆ ಉಮೇದುವಾರಿಕೆ ತಿರಸ್ಕರಿಸಲಾಗಿದೆ. ಲಖನ್‌ ಜಾರಕಿಹೊಳಿ ಸಲ್ಲಿಸಿದ್ದ ನಾಲ್ಕು ನಾಮಪತ್ರಗಳಲ್ಲಿಎರಡು ತಿರಸ್ಕೃತವಾಗಿದ್ದು, ಇನ್ನೆರಡು ಸಿಂಧುವಾಗಿದೆ. ಹಾಗಾಗಿ ಅವರು ಕಣದಲ್ಲಿಉಳಿದುಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ, ಜೆಡಿಎಸ್‌ನ ಅಶೋಕ ಪೂಜಾರಿ ನಾಮಪತ್ರಗಳು ಸ್ವೀಕಾರವಾಗಿವೆ.
Vijaya Karnataka Web satish jarakiholi nomination rejected
ಸತೀಶ್‌ ಜಾರಕಿಹೊಳಿ ನಾಮಪತ್ರ ತಿರಸ್ಕೃತ


ಉಳಿದಂತೆ ಗೋಕಾಕ ಮತಕ್ಷೇತ್ರದಲ್ಲಿಒಟ್ಟು 13 ಅಭ್ಯರ್ಥಿಗಳಿಂದ 24 ನಾಮಪತ್ರ ಸಲ್ಲಿಕೆಯಾಗಿದ್ದವು. ಅದರಲ್ಲಿಸತೀಶ ಜಾರಕಿಹೊಳಿ ಮತ್ತು ವಿವೇಕಾನಂದ ಜತ್ತಿ ಅವರ ನಾಮಪತ್ರ ತಿರಸ್ಕೃತವಾಗಿವೆ. 11 ಅಭ್ಯರ್ಥಿಗಳ ನಾಮಪತ್ರಗಳು ಸ್ವೀಕೃತವಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ