ಆ್ಯಪ್ನಗರ

ನನ್ನನ್ನು ಯಾವ ಪಕ್ಷದಿಂದ ಸಿಎಂ ಮಾಡ್ತಾರೆ? ರಮೇಶ್‌ ಜಾರಕಿಹೊಳಿಗೆ ಸತೀಶ್‌ ಜಾರಕಿಹೊಳಿ ಪ್ರಶ್ನೆ

ಜಲಸಂಪನ್ಮೂಲ ಇಲಾಖೆ ಅತ್ಯಂತ ಸೂಕ್ಷ್ಮವಾಗಿದೆ. ಹೇಗೆ ರಮೇಶ್‌ ಜಾರಕಿಹೊಳಿ ನಿಭಾಯಿಸುತ್ತಾರೆ ಎಂಬುದು ನೋಡೋಣ ಎಂದು ಕಾಂಗ್ರೆಸ್‌ ಶಾಸಕ ಸತೀಶ್‌ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.

Vijaya Karnataka Web 13 Feb 2020, 3:27 pm
ಬೆಳಗಾವಿ: ಮಾಜಿ ಸಚಿವ ಸತೀಶ್‌ ಜಾರಕಿಹೊಳಿಗೆ ಮುಖ್ಯಮಂತ್ರಿ ಆಗೋ ಯೋಗವಿದೆ ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿಕೆಗೆ ಕಾಂಗ್ರೆಸ್‌ ಶಾಸಕ ಸತೀಶ್‌ ಜಾರಕಿಹೊಳಿ ಟಾಂಗ್‌ ನೀಡಿದ್ದಾರೆ. ಗೋಕಾಕ್ ತಹಶೀಲ್ದಾರ್ ಕಚೇರಿಯಲ್ಲಿ ನಮ್ಮ ಮಾತು ಕೇಳುತ್ತಿಲ್ಲ. ಇನ್ನು ಮುಖ್ಯಮಂತ್ರಿ ಮಾಡೋ ಮಾತು ದೂರ ಎಂದಿದ್ದಾರೆ.
Vijaya Karnataka Web satish jarkiholi toi


ಅಲ್ಲದೆ, ಯಾವ ಪಕ್ಷದಿಂದ ಮುಖ್ಯಮಂತ್ರಿ ಮಾಡುತ್ತಾರೆ? ಇವನಿಗೆ ಏನು ಅಧಿಕಾರವಿದೆ? ಬೇರೆ ಪಕ್ಷದಲ್ಲಿದ್ದು ಇನ್ನೊಂದು ಪಕ್ಷದ ಮುಖಂಡನ ಬಗ್ಗೆ ಮಾತನಾಡೋದು ಸರಿಯಲ್ಲ ಎಂದು ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ಸಹೋದರ ಹಾಗೂ ಸಚಿವ ರಮೇಶ್‌ ಜಾರಕಿಹೊಳಿ ವಿರುದ್ಧ ಕಿಡಿ ಕಾರಿದ್ದಾರೆ.

ಜತೆಗೆ, ಬಿಜೆಪಿ ಮುಖಂಡರು ರಮೇಶ್‌ ಜಾರಕಿಹೊಳಿಯನ್ನು ನಿಯಂತ್ರಿಸಬೇಕು. ಪ್ರಧಾನಿ ಮೋದಿ, ಅಮಿತ್ ಶಾ ಗಿಂತ ರಮೇಶ್‌ ಜಾರಕಿಹೊಳಿ ಪವರ್ ಫುಲ್ ಆದ್ನಾ. ನಮ್ಮ ಪಕ್ಷದಲ್ಲಿ ಇದ್ದು ಮಾತನಾಡಿದ್ರೆ ಓಕೆ. ಬಿಜೆಪಿಯಲ್ಲಿ ಇದ್ದು ಈ ರೀತಿ ಮಾತನಾಡೋದು ಸರಿಯಲ್ಲ ಎಂದು ಸತೀಶ್‌ ಜಾರಕಿಹೊಳಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಮಹದಾಯಿ ಯೋಜನೆಯಲ್ಲಿ ಕೇಂದ್ರ ರಾಜ್ಯದ ಪರವಿಲ್ಲ: ಸತೀಶ್‌ ಜಾರಕಿಹೊಳಿ

ಇನ್ನು, ಸತೀಶ್ ಜಾರಕಿಹೊಳಿ 20 ವರ್ಷದಲ್ಲಿ ಮಾಡದೇ ಇರೋದು 2 ವರ್ಷದಲ್ಲಿ ಮಾಡಿದ್ದೇನೆ ಎಂಬ ರಮೇಶ ಜಾರಕಿಹೊಳಿ ಹೇಳಿಕೆ ವಿಚಾರದ ಬಗ್ಗೆ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವರು, ಇದರ ಅರ್ಥ ನಾನು ಮುಂದಿನ 20 ವರ್ಷ ಎನು ಮಾಡಲ್ಲ ಅಂದಹಾಗಿದೆ. ಕೆಲಸ ಮಾಡೋದು ರಕ್ತದಲ್ಲಿ ಇರಬೇಕು. ರಮೇಶ್‌ ಹಿಂದಿನ 20 ವರ್ಷನು ಏನು ಮಾಡಿಲ್ಲ, ಮುಂದಿನ 20 ವರ್ಷನೂ ಏನು ಮಾಡಲ್ಲ ಎಂದು ಟಾಂಗ್‌ ನೀಡಿದ್ದಾರೆ.

ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಖಾತೆ ಪಡೆದುಕೊಂಡ ಹಿಂದಿದೆ ರಾಜಕೀಯ ಸೇಡು!

ಸಚಿವ ರಮೇಶ ಜಾರಕಿಹೊಳಿಗೆ ಜಲಸಂಪನ್ಮೂಲ ಖಾತೆ ನೀಡಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಹೋದರ ಸತೀಶ್‌ ಜಾರಕಿಹೊಳಿ, ಜಲಸಂಪನ್ಮೂಲ ಇಲಾಖೆ ಅತ್ಯಂತ ಸೂಕ್ಷ್ಮವಾಗಿದೆ. ಇದನ್ನು ರಮೇಶ್‌ ಜಾರಕಿಹೊಳಿ ಹೇಗೆ ನಿಭಾಯಿಸುತ್ತಾರೆ ಎಂಬುದು ನೋಡೋಣ. ಅಂತರರಾಜ್ಯ ನೀರು ಹಂಚಿಕೆ ವಿವಾದಗಳು ಇವೆ. 30-40 ವರ್ಷಗಳ ಹಳೆಯ ವಿವಾದಗಳು ಇವೆ. ರಮೇಶ ಜಾರಕಿಹೊಳಿ ಹೇಗೆ ಇತ್ಯರ್ಥ ಪಡಿಸಲಿದ್ದಾರೆ ನೋಡೋಣ ಎಂದು ಬೆಳಗಾವಿಯಲ್ಲಿ ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.

ರಮೇಶ್‌ಗೆ ಜಲಸಂಪನ್ಮೂಲ ಖಾತೆ ಸಿಗದಿದ್ದರೆ ಸಿಎಂ ಯಡಿಯೂರಪ್ಪ ವಿರುದ್ಧವೇ ಬಂಡಾಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ