ಆ್ಯಪ್ನಗರ

ರಮೇಶ್‌ಗೆ ಸವಾಲು ಹಾಕಿದ ಸತೀಶ್‌ ಜಾರಕಿಹೊಳಿ

ಬೆಳಗಾವಿ: ಪ್ರವಾಹದ ಸಂದರ್ಭದಲ್ಲಿ ಬಿದ್ದಿರುವ ...

Vijaya Karnataka 30 Oct 2019, 5:00 am
ಬೆಳಗಾವಿ: ಪ್ರವಾಹದ ಸಂದರ್ಭದಲ್ಲಿ ಬಿದ್ದಿರುವ ಮನೆಗಳ ಮಣ್ಣು ತೆಗೆಯಲು ಒಂದು ಟ್ರಿಪ್‌ ಟ್ರ್ಯಾಕ್ಟರ್‌ಗೆ 1200 ರೂ. ಪಡೆಯಲಾಗಿದೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಸ್ಪಷ್ಟನೆ ನೀಡಬೇಕು ಎಂದು ಶಾಸಕ ಸತೀಶ ಜಾರಕಿಹೊಳಿ ಹಿರಿಯ ಸಹೋದರನಿಗೆ ಸವಾಲು ಹಾಕಿದ್ದಾರೆ.
Vijaya Karnataka Web satish zarakiholi challenged ramesh
ರಮೇಶ್‌ಗೆ ಸವಾಲು ಹಾಕಿದ ಸತೀಶ್‌ ಜಾರಕಿಹೊಳಿ


ಮಂಗಳವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ರಮೇಶ ನನ್ನ ಬಂಡವಾಳ ಬಯಲು ಮಾಡುವ ಮೊದಲು 1200 ರೂ. ಟ್ರಾ ್ಯಕ್ಟರ್‌ ಬಾಡಿಗೆ ಪಡೆದಿದ್ದನ್ನು ಮೊದಲು ಹೇಳಲಿ'' ಎಂದು ಹೇಳಿದರು.

''ರಮೇಶ ಜಾರಕಿಹೊಳಿ ಬದ್ಧತೆ ಇಲ್ಲದ ರಾಜಕಾರಣಿ. ಅವನ ಹೇಳಿಕೆಗೆ ಪ್ರತಿ ಸಾರಿ ಉತ್ತರ ಕೊಡಲು ಸಾಧ್ಯವಿಲ್ಲ. ನಮ್ಮ ಮೀತಿಯಲ್ಲಿನಾವು ಹೇಳಿಕೆ ನೀಡಬೇಕು. ಅವನ ನಾಲಗೆ ಒಳಗೆ ಇರುವುದಿಲ್ಲ. ಹೊರಗೇ ಇರುತ್ತದೆ. ನನ್ನ ಮುಂದೆ ಅವರೆಲ್ಲಶೂನ್ಯ ಎಂದು ಮೊದಲೇ ಹೇಳಿದ್ದೇನೆ'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ