ಆ್ಯಪ್ನಗರ

ಬೆಳಗಾವಿ ಜಿಲ್ಲೆಯಲ್ಲಿ ಮಳೆಯ ಆರ್ಭಟ: ಸವದತ್ತಿ-ಧಾರವಾಡ ರಾಜ್ಯ ಹೆದ್ದಾರಿ ಸಂಚಾರ ಮತ್ತೆ ಸ್ಥಗಿತ

ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿ ಮಳೆ ಬಿಟ್ಟೂಬಿಡದೆ ಸುರಿಯುತ್ತಿದೆ. ಮುಂಗಾರು ಮಳೆ ಹಿನ್ನೆಲೆ ಜಿಲ್ಲೆಯ ಬಹುತೇಕ ಭಾಗ ದ್ವೀಪವಾಗಿತ್ತು. ಈಗ ಮತ್ತೆ ಹಿಂಗಾರು ಮಳೆಯಿಂದಾಗಿ ರಸ್ತೆ ಸಂಚಾರ ಬಂದ್‌ ಆಗಿದೆ.

Vijaya Karnataka Web 20 Oct 2019, 11:37 am
ಬೆಳಗಾವಿ: ಮುಂಗಾರು ಮಳೆ ಮುಗಿದರೂ ಈ ಬಾರಿ ಬೆಳಗಾವಿ ಜಿಲ್ಲೆಗೆ ಮಳೆ ಬಿಟ್ಟೂ ಬಿಡದೆ ಕಾಡುತ್ತಿದೆ. ಹಿಂಗಾರು ಮಳೆಯ ಆರ್ಭಟದಿಂದಾಗಿ ಬೆಳಗಾವಿ ಜಿಲ್ಲೆಯ ಸವದತ್ತಿ-ಧಾರವಾಡ ರಾಜ್ಯ ಹೆದ್ದಾರಿ ಸಂಚಾರ ಮತ್ತೆ ಸ್ಥಗಿತಗೊಂಡಿದೆ. ರಸ್ತೆ ಸಂಚಾರ ಸ್ಥಗಿತದಿಂದಾಗಿ ಜನರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ.
Vijaya Karnataka Web dharwad road closed 1


ಪಿರಿಯಾಪಟ್ಟಣ: ಹಲವು ಗ್ರಾಮಗಳು ಜಲಾವೃತ

ಶನಿವಾರ ರಾತ್ರಿಯಿಡಿ ಸುರಿದ ಭಾರಿ ಮಳೆ ಪರಿಣಾಮವಾಗಿ ಇನಾಮಹೊಂಗಲ ಗ್ರಾಮದ ಬಳಿ ನಡೆಯುತ್ತಿರುವ ಸೇತುವೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ರಭಸದಿಂದ ಹರಿಯುತ್ತಿರುವ ತುಪರಿ ಹಳ್ಳದ ನೀರು ಆವರಿಸಿ ತಾತ್ಕಾಲಿಕ ಸಂಚಾರ ರಸ್ತೆ ಬಂದ್ ಆಗಿದೆ.

ಮಳೆಯಿಂದ ರಸ್ತೆ ಸಂಚಾರ ಸ್ಥಗಿತ

ಭಾರಿ ಮಳೆ: ಶಿವಮೊಗ್ಗ- ಉಡುಪಿ ರಸ್ತೆ ಸಂಚಾರ ಸ್ಥಗಿತ

ಧಾರವಾಡದಿಂದ ಸವದತ್ತಿ ಮಾರ್ಗವಾಗಿ ಸಂಚರಿಸಬೇಕಾದ ವಾಹನಗಳು ಉಪ್ಪಿನ ಬೆಟಗೇರಿ ದೊಡವಾಡ ಸುತಗಟ್ಟಿ ಮೂಲಕ ಬೆಳವಡಿ-ಸವದತ್ತಿ ಹೆದ್ದಾರಿ ತಲುಪುತ್ತಿವೆ. ಅಲ್ಲದೆ, ಕರಿಕಟ್ಟಿ ಮಾರ್ಗದ ರಸ್ತೆಯ ಕಿರು ಸೇತುವೆ ಕುಸಿದು ಸಂಚಾರ ಸಹ ಬಂದ್ ಆಗಿದೆ. ಇನ್ನು ಭಾರಿ ಮಳೆಯಿಂದಾಗಿ ಸುತಗಟ್ಟಿ ರಸ್ತೆಯೂ ಹಾಳಾಗುವ ಸರದಿ ಎದುರಾಗಿದೆ ಎಂದೂ ಜನರು ಭೀತಿ ವ್ಯಕ್ತಪಡಿಸಿದ್ದಾರೆ.


ಮಳೆಯಿಂದ ರಸ್ತೆ ಸಂಚಾರ ಸ್ಥಗಿತ


ಭೂಕುಸಿತ ಪುಣೆ-ಬೆಂಗಳೂರು ಹೆದ್ದಾರಿ ಬಂದ್‌

ಮುಂಗಾರು ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಪ್ರವಾಹ ಎದುರಾಗಿತ್ತು. ಈಗ ಮುಂಗಾರು ಮಳೆ ಮುಗಿದರೂ ಮಳೆ ಮಾತ್ರ ಜಿಲ್ಲೆಯನ್ನು ಬಿಡುತ್ತಿಲ್ಲ ಎನ್ನುವಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ