ಆ್ಯಪ್ನಗರ

ಪ್ರವಾಹ ಹೋದ ನಂತರ ಸ್ವಚ್ಛತೆಗಾಗಿ ಪರದಾಟ

ರಾಮದುರ್ಗ: ಮಹಾಪ್ರವಾಹ ಕಡಿಮೆಯಾಗುತ್ತಿದ್ದಂತೆಯೇ ...

Vijaya Karnataka 15 Aug 2019, 5:00 am
ರಾಮದುರ್ಗ: ಮಹಾಪ್ರವಾಹ ಕಡಿಮೆಯಾಗುತ್ತಿದ್ದಂತೆಯೇ ಮನೆಗಳನ್ನು ತೊರೆದಿದ್ದ ಜನರು ಮತ್ತೆ ತಮ್ಮ ಮನೆಗಳಿಗೆ ಬಂದು ಮಣ್ಣು ತುಂಬಿಕೊಂಡಿದ್ದ ಇದ್ದಬಿದ್ದ ವಸ್ತುಗಳನ್ನು ಸ್ವಚ್ಛಗೊಳಿಸಲು ಹರಸಾಹಸ ಪಡುತ್ತಿದ್ದಾರೆ.
Vijaya Karnataka Web BEL-14RD2


ಮನೆಯಲ್ಲಿದ್ದ ಟಿವಿ, ಫ್ರಿಜ್‌, ಮಿಕ್ಸಿ ಸೇರಿದಂತೆ ಬಟ್ಟೆಗಳು, ಹಾಸಿಗೆಗಳು ನೀರಿನಲ್ಲಿ ತೊಯ್ದು ನಾಶವಾಗಿವೆ. ಅಡುಗೆ ಪಾತ್ರೆಗಳಿಗೆ ಮಣ್ಣು ಮೆತ್ತಿಕೊಂಡಿದ್ದು, ಶುಚಿಗೊಳಿಸುತ್ತಿದ್ದಾರೆ.

ಮನೆಗಳ ಮುಂದೆ ಕಸದ ರಾಶಿಯೇ ಬಿದ್ದಿದೆ. ದುರ್ನಾತ ಬೀರುತ್ತಿದ್ದು, ರೋಗಭೀತಿಯಲ್ಲಿ ಜನರು ಕಾಲ ಕಳೆಯುಂತಾಗಿದೆ. ಮಹಾಮಳೆಗೆ ತಾಲೂಕಿನ ನೇಕಾರರ ಬದುಕು ಸಂಪೂರ್ಣ ನೀರಿನಲ್ಲಿಯೇ ಕೊಚ್ಚಿಕೊಂಡು ಹೋಗಿದ್ದು, ಅವರು ಅತಂತ್ರ ಸ್ಥಿತಿಯಲ್ಲಿದ್ದಾರೆ.

ಮಗ್ಗುಗಳು ತುಕ್ಕು ಹಿಡಿದಿವೆ. ವಿದ್ಯುತ್‌ ಪಂಪ್‌ಗಳಿಗೆ ನೀರು ಹೊಕ್ಕು ನಾಶವಾಗಿವೆ. ಮಗ್ಗದ ಸಲಾಯಿ ಮತ್ತು ನೇಯ್ಗೆಯ ಎಳೆಗಳು ನಾಶವಾಗಿವೆ. ತಾಲೂಕಿನಲ್ಲಿ 800ಕ್ಕೂ ಹೆಚ್ಚು ವಿದ್ಯುತ್‌ ಮಗ್ಗಗಳು ಸಂಪೂರ್ಣ ನಾಶವಾಗಿದ್ದು, 5 ಕೋಟಿ ರೂ.ಗಿಂತ ಹೆಚ್ಚು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಬಿಕೋ ಎನ್ನುತ್ತಿರುವ ಗ್ರಾಮಗಳು:
ಪ್ರವಾಹ ಕಡಿಮೆಯಾಗುತ್ತಿದ್ದಂತೆಯೇ ಗ್ರಾಮಗಳಿಗೆ ತೆರಳಿ ಮನೆಯಲ್ಲಿರುವ ಇದ್ದಬಿದ್ದ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದು, ಗ್ರಾಮಗಳು ಜನರಿಲ್ಲದೆ ಹಾಳೂರಿನಂತೆ ಬಿಕೋ ಎನ್ನುತ್ತಿವೆ. ಗಲ್ಲಿಗಲ್ಲಿಗಳಲ್ಲಿ ಅಡಿಯಷ್ಟು ಎತ್ತರ ಕೆಸರು ಆವರಿಸಿಕೊಂಡಿದೆ. ಮನೆಯಲ್ಲಿರುವ ಮಕ್ಕಳ ಪುಸ್ತಕಗಳು ನೀರಿನಲ್ಲಿ ನೆನೆದು ನಿರುಪಯುಕ್ತವಾಗಿವೆ. ಇನ್ನೆಷ್ಟು ದಿನ ಇಂತಹ ಸಮಸ್ಯೆ ಎದುರಿಸುವುದು ಎಂದು ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ