ರಾಜು ಉಸ್ತಾದ್ ಬೆಳಗಾವಿ
ಹವಾಮಾನ ವೈಪರೀತ್ಯ ಬೆಳಗಾವಿ ಮಾರುಕಟ್ಟೆಯಲ್ಲಿ ಮೀನಿನ ಬಹುದೊಡ್ಡ ಕೊರತೆಯನ್ನುಂಟು ಮಾಡಿದ್ದು, ಇದರಿಂದಾಗಿ ಮಳೆಗಾಲದ ಏಡಿಗಳಿಗೆ ಇನ್ನಿಲ್ಲದ ಬೇಡಿಕೆ ಬಂದಿದೆ.
ಈ ಭಾಗದ ಮೀನು ಪ್ರಿಯರಿಗೆ ಬೆಳಗಾವಿ ದೊಡ್ಡ ಮಾರುಕಟ್ಟೆಯಾಗಿದೆ. ಇಲ್ಲಿಗೆ ನಿತ್ಯ ಕಾರವಾರ, ಗೋವಾ ಮತ್ತು ಮಹಾರಾಷ್ಟ್ರ ಸಮುದ್ರಗಳ ತರಹೇವಾರಿ ಮೀನುಗಳ ರಾಶಿ ಬರುತ್ತದೆ. ಆದರೆ 'ವಾಯು' ಚಂಡುಮಾರುತದ ಹಿನ್ನೆಲೆಯಲ್ಲಿ ಮೀನುಗಾರಿಕೆ ತಲ್ಲಣಗೊಂಡಿದೆ. ಇದರಿಂದಾಗಿ ಮೀನು ಬಾರದೆ ಮಾರುಕಟ್ಟೆ ಭಣ ಭಣ ಎನ್ನುತ್ತಿದೆ. ಆದರೆ ಮಳೆಗಾಲದ ಹವಾಮಾನಕ್ಕೆ ಸಹಜವಾಗಿ ಉತ್ಪನ್ನವಾಗುವ ಹೊಳೆ, ಕೆರೆ, ಜಲಾಶಯ ಮತ್ತು ಇತರೆ ಜಲಮೂಲಗಳ ಏಡಿಗಳು ಬೇಡಿಕೆ ಸೃಷ್ಟಿಸಿಕೊಂಡಿವೆ.
ಯಾಂತ್ರಿಕ ಮೀನುಗಾರಿಕೆ ಆಗಸ್ಟ್ವರೆಗೆ ಬಂದ್ ಇದ್ದರೂ, ದೋಣಿಗಳಲ್ಲಿ ನಡೆಯುವ ಮೀನುಗಾರಿಕೆಯಿಂದ ಸಾಕಷ್ಟು ಮೀನು ಪ್ರತಿವರ್ಷ ಮಾರುಕಟ್ಟೆಗೆ ಬರುತ್ತಿತ್ತು. ಇದು ದುಬಾರಿಯಾದರೂ ಲಭ್ಯವಾಗುತ್ತಿದ್ದರಿಂದ ಜನ ಖರೀದಿಸುತ್ತಿದ್ದರು. ಆದರೆ ಈ ಬಾರಿ ಸಮುದ್ರದೊಳಗಿನ ವಿಪ್ಲವದಿಂದಾಗಿ ಸಣ್ಣ ದೋಣಿಗಳೂ ನೀರಿಗೆ ಇಳಿಯುವುದು ಕಷ್ಟವಾಗಿದ್ದರಿಂದ ಮೀನಿನ ಕೊರತೆ ದೊಡ್ಡ ಪ್ರಮಾಣದಲ್ಲಿ ಸೃಷ್ಟಿಗೊಂಡಿದೆ. ಹೋಟೆಲ್ಗಳ ಎದುರು ನಿತ್ಯ ಕಾಣಿಸುತ್ತಿದ್ದ 'ಮೀನಿನ ಊಟ'ದ ಫಲಕಗಳೂ ಕಾಣೆಯಾಗಿವೆ. ಮೀನುಗಳ ಸಂತಾನಾಭಿವೃದ್ಧಿಯ ಅವಧಿ ಮುಗಿದು ಸಮುದ್ರದೊಳಗೆ ಯಾಂತ್ರಿಕ ಮೀನುಗಾರಿಕೆ ಆರಂಭವಾಗುವವರೆಗೂ ಇದೇ ಸ್ಥಿತಿ ಇರಲಿದೆ ಎನ್ನುತ್ತಾರೆ ವ್ಯಾಪಾರಿಗಳು.
ವಾಪ್ಯಾರಕ್ಕೆ ಶುಕ್ರದೆಸೆ: ಮೀನುಗಾರಿಕೆಗಾಗಿರುವ ಈ ಹಿನ್ನಡೆ ಏಡಿ ವ್ಯಾಪಾರಕ್ಕೆ ಶುಕ್ರದೆಸೆ ತಂದಿದೆ. ಬೆಳಗಾವಿಗೆ ಎಲ್ಲ ಕಡೆಗಳಿಂದ ಏಡಿ ವ್ಯಾಪಾರಿಗಳು ಬಂದರೂ ಮಲಪ್ರಭಾ ನದಿ ವ್ಯಾಪ್ತಿಯವರು ಹೆಚ್ಚಿಗೆ ಇದ್ದಾರೆ. ಹಿಡಕಲ್ ಮತ್ತು ಧೂಪದಾಳ ಜಲಾಶಯ ಮತ್ತು ಅವುಗಳ ಹಿನ್ನೀರಿನಲ್ಲಿ ಇವುಗಳನ್ನು ಹಿಡಿದುಕೊಂಡು ತರುತ್ತಿದ್ದಾರೆ. ಸದ್ಯ ಖಾನಾಪುರ ರಸ್ತೆಯಲ್ಲಿರುವ ಮೀನು ಮಾರುಕಟ್ಟೆ ಪಕ್ಕದಲ್ಲೇ ಇವರದ್ದು ದೊಡ್ಡ ಮಾರುಕಟ್ಟೆ ನಿರ್ಮಾಣವಾಗಿದೆ.
ಏಡಿಗಳ ಗಾತ್ರಕ್ಕನುಗುಣವಾಗಿ ಅವುಗಳ ದರ ಇದೆ. 60 ರೂ.ಗಳಿಂದ 120 ರೂ.ಗಳವರೆಗೆ ಜೋಡಿಗಳು ಇವೆ. ಮೀನಿನ ಲಭ್ಯತೆ ಇದ್ದಾಗ ದೊಡ್ಡ ಗಾತ್ರದ ಏಡಿಗಳೇ 50 ರೂ.ಗಳಿಗೆ ಜೋಡಿ ಸಿಗುತ್ತಿದ್ದವು. ಬೆಳಗ್ಗೆ ತಂದವರು ಸಂಜೆವರೆಗೂ ಗ್ರಾಹಕರ ನಿರೀಕ್ಷೆಯಲ್ಲಿ ಇರಬೇಕಾಗುತ್ತಿತ್ತು. ಏಡಿ ಪ್ರಿಯರಷ್ಟೇ ಇವರತ್ತ ಬಂದು ಖರೀದಿ ಮಾಡುತ್ತಿದ್ದರು. ಆದರೀಗ ಮೀನು ಮಾರುಕಟ್ಟೆಗೆ ಬರುವವರೆಲ್ಲರೂ ಇವರ ಬಳಿಗೆ ಬಂದುಹೋಗಬೇಕಾದ ಅನಿವಾರ್ಯತೆ ಸೃಷ್ಟಿಗೊಂಡಿದೆ.
ಆಹಾರ ಪದಾರ್ಥವಾಗಿ ಏಡಿ :
ಏಡಿ ಪೋಷಕಾಂಶಗಳ ಆಗರ. ಇದರಲ್ಲಿ ಮನುಷ್ಯನ ದೇಹಕ್ಕೆ ಬೇಕಿರುವ ವಿಟಾಮಿನ್ 'ಡಿ', ಕ್ಯಾಲ್ಸಿಯಂ, ಜಿಂಕ್, ಕೊಬ್ಬು ಇರುತ್ತದೆ. ಇದು ಒಳ್ಳೆಯ ಕಫ ಹೆಚ್ಚಿಸಿ ರೋಗ ನಿರೋಧಕಶಕ್ತಿ ಬೆಳೆಸುತ್ತದೆ. ಹೃದಯ, ಸಂಧಿವಾತ, ಸ್ನಾಯು, ಕೀಲು ವ್ಯಾಧಿಗಳಿಗೆ ಆಹಾರ ಔಷಧ. ಸಂತಾನ ಪ್ರಾಪ್ತಿಗೆ ನೆರವಾಗುವ ಪೋಷಕಾಂಶಗಳು ಇವೆ ಎನ್ನುತ್ತಾರೆ ಬಿ.ಎಂ. ಕಂಕಣವಾಡಿ ಆಯುರ್ವೇದ ಕಾಲೇಜಿನ ಸಹಪ್ರಾಧ್ಯಾಪಕರಾದ ಡಾ. ಸಂಜೀವ ಟೊಣ್ಣಿ ಮತ್ತು ಮಹಾಂತೇಶ ರಾಮಣ್ಣವರ್ ತಿಳಿಸಿದ್ದಾರೆ.
ಹವಾಮಾನ ವೈಪರೀತ್ಯ ಬೆಳಗಾವಿ ಮಾರುಕಟ್ಟೆಯಲ್ಲಿ ಮೀನಿನ ಬಹುದೊಡ್ಡ ಕೊರತೆಯನ್ನುಂಟು ಮಾಡಿದ್ದು, ಇದರಿಂದಾಗಿ ಮಳೆಗಾಲದ ಏಡಿಗಳಿಗೆ ಇನ್ನಿಲ್ಲದ ಬೇಡಿಕೆ ಬಂದಿದೆ.
ಈ ಭಾಗದ ಮೀನು ಪ್ರಿಯರಿಗೆ ಬೆಳಗಾವಿ ದೊಡ್ಡ ಮಾರುಕಟ್ಟೆಯಾಗಿದೆ. ಇಲ್ಲಿಗೆ ನಿತ್ಯ ಕಾರವಾರ, ಗೋವಾ ಮತ್ತು ಮಹಾರಾಷ್ಟ್ರ ಸಮುದ್ರಗಳ ತರಹೇವಾರಿ ಮೀನುಗಳ ರಾಶಿ ಬರುತ್ತದೆ. ಆದರೆ 'ವಾಯು' ಚಂಡುಮಾರುತದ ಹಿನ್ನೆಲೆಯಲ್ಲಿ ಮೀನುಗಾರಿಕೆ ತಲ್ಲಣಗೊಂಡಿದೆ. ಇದರಿಂದಾಗಿ ಮೀನು ಬಾರದೆ ಮಾರುಕಟ್ಟೆ ಭಣ ಭಣ ಎನ್ನುತ್ತಿದೆ. ಆದರೆ ಮಳೆಗಾಲದ ಹವಾಮಾನಕ್ಕೆ ಸಹಜವಾಗಿ ಉತ್ಪನ್ನವಾಗುವ ಹೊಳೆ, ಕೆರೆ, ಜಲಾಶಯ ಮತ್ತು ಇತರೆ ಜಲಮೂಲಗಳ ಏಡಿಗಳು ಬೇಡಿಕೆ ಸೃಷ್ಟಿಸಿಕೊಂಡಿವೆ.
ಯಾಂತ್ರಿಕ ಮೀನುಗಾರಿಕೆ ಆಗಸ್ಟ್ವರೆಗೆ ಬಂದ್ ಇದ್ದರೂ, ದೋಣಿಗಳಲ್ಲಿ ನಡೆಯುವ ಮೀನುಗಾರಿಕೆಯಿಂದ ಸಾಕಷ್ಟು ಮೀನು ಪ್ರತಿವರ್ಷ ಮಾರುಕಟ್ಟೆಗೆ ಬರುತ್ತಿತ್ತು. ಇದು ದುಬಾರಿಯಾದರೂ ಲಭ್ಯವಾಗುತ್ತಿದ್ದರಿಂದ ಜನ ಖರೀದಿಸುತ್ತಿದ್ದರು. ಆದರೆ ಈ ಬಾರಿ ಸಮುದ್ರದೊಳಗಿನ ವಿಪ್ಲವದಿಂದಾಗಿ ಸಣ್ಣ ದೋಣಿಗಳೂ ನೀರಿಗೆ ಇಳಿಯುವುದು ಕಷ್ಟವಾಗಿದ್ದರಿಂದ ಮೀನಿನ ಕೊರತೆ ದೊಡ್ಡ ಪ್ರಮಾಣದಲ್ಲಿ ಸೃಷ್ಟಿಗೊಂಡಿದೆ. ಹೋಟೆಲ್ಗಳ ಎದುರು ನಿತ್ಯ ಕಾಣಿಸುತ್ತಿದ್ದ 'ಮೀನಿನ ಊಟ'ದ ಫಲಕಗಳೂ ಕಾಣೆಯಾಗಿವೆ. ಮೀನುಗಳ ಸಂತಾನಾಭಿವೃದ್ಧಿಯ ಅವಧಿ ಮುಗಿದು ಸಮುದ್ರದೊಳಗೆ ಯಾಂತ್ರಿಕ ಮೀನುಗಾರಿಕೆ ಆರಂಭವಾಗುವವರೆಗೂ ಇದೇ ಸ್ಥಿತಿ ಇರಲಿದೆ ಎನ್ನುತ್ತಾರೆ ವ್ಯಾಪಾರಿಗಳು.
ವಾಪ್ಯಾರಕ್ಕೆ ಶುಕ್ರದೆಸೆ: ಮೀನುಗಾರಿಕೆಗಾಗಿರುವ ಈ ಹಿನ್ನಡೆ ಏಡಿ ವ್ಯಾಪಾರಕ್ಕೆ ಶುಕ್ರದೆಸೆ ತಂದಿದೆ. ಬೆಳಗಾವಿಗೆ ಎಲ್ಲ ಕಡೆಗಳಿಂದ ಏಡಿ ವ್ಯಾಪಾರಿಗಳು ಬಂದರೂ ಮಲಪ್ರಭಾ ನದಿ ವ್ಯಾಪ್ತಿಯವರು ಹೆಚ್ಚಿಗೆ ಇದ್ದಾರೆ. ಹಿಡಕಲ್ ಮತ್ತು ಧೂಪದಾಳ ಜಲಾಶಯ ಮತ್ತು ಅವುಗಳ ಹಿನ್ನೀರಿನಲ್ಲಿ ಇವುಗಳನ್ನು ಹಿಡಿದುಕೊಂಡು ತರುತ್ತಿದ್ದಾರೆ. ಸದ್ಯ ಖಾನಾಪುರ ರಸ್ತೆಯಲ್ಲಿರುವ ಮೀನು ಮಾರುಕಟ್ಟೆ ಪಕ್ಕದಲ್ಲೇ ಇವರದ್ದು ದೊಡ್ಡ ಮಾರುಕಟ್ಟೆ ನಿರ್ಮಾಣವಾಗಿದೆ.
ಏಡಿಗಳ ಗಾತ್ರಕ್ಕನುಗುಣವಾಗಿ ಅವುಗಳ ದರ ಇದೆ. 60 ರೂ.ಗಳಿಂದ 120 ರೂ.ಗಳವರೆಗೆ ಜೋಡಿಗಳು ಇವೆ. ಮೀನಿನ ಲಭ್ಯತೆ ಇದ್ದಾಗ ದೊಡ್ಡ ಗಾತ್ರದ ಏಡಿಗಳೇ 50 ರೂ.ಗಳಿಗೆ ಜೋಡಿ ಸಿಗುತ್ತಿದ್ದವು. ಬೆಳಗ್ಗೆ ತಂದವರು ಸಂಜೆವರೆಗೂ ಗ್ರಾಹಕರ ನಿರೀಕ್ಷೆಯಲ್ಲಿ ಇರಬೇಕಾಗುತ್ತಿತ್ತು. ಏಡಿ ಪ್ರಿಯರಷ್ಟೇ ಇವರತ್ತ ಬಂದು ಖರೀದಿ ಮಾಡುತ್ತಿದ್ದರು. ಆದರೀಗ ಮೀನು ಮಾರುಕಟ್ಟೆಗೆ ಬರುವವರೆಲ್ಲರೂ ಇವರ ಬಳಿಗೆ ಬಂದುಹೋಗಬೇಕಾದ ಅನಿವಾರ್ಯತೆ ಸೃಷ್ಟಿಗೊಂಡಿದೆ.
ಆಹಾರ ಪದಾರ್ಥವಾಗಿ ಏಡಿ :
ಏಡಿ ಪೋಷಕಾಂಶಗಳ ಆಗರ. ಇದರಲ್ಲಿ ಮನುಷ್ಯನ ದೇಹಕ್ಕೆ ಬೇಕಿರುವ ವಿಟಾಮಿನ್ 'ಡಿ', ಕ್ಯಾಲ್ಸಿಯಂ, ಜಿಂಕ್, ಕೊಬ್ಬು ಇರುತ್ತದೆ. ಇದು ಒಳ್ಳೆಯ ಕಫ ಹೆಚ್ಚಿಸಿ ರೋಗ ನಿರೋಧಕಶಕ್ತಿ ಬೆಳೆಸುತ್ತದೆ. ಹೃದಯ, ಸಂಧಿವಾತ, ಸ್ನಾಯು, ಕೀಲು ವ್ಯಾಧಿಗಳಿಗೆ ಆಹಾರ ಔಷಧ. ಸಂತಾನ ಪ್ರಾಪ್ತಿಗೆ ನೆರವಾಗುವ ಪೋಷಕಾಂಶಗಳು ಇವೆ ಎನ್ನುತ್ತಾರೆ ಬಿ.ಎಂ. ಕಂಕಣವಾಡಿ ಆಯುರ್ವೇದ ಕಾಲೇಜಿನ ಸಹಪ್ರಾಧ್ಯಾಪಕರಾದ ಡಾ. ಸಂಜೀವ ಟೊಣ್ಣಿ ಮತ್ತು ಮಹಾಂತೇಶ ರಾಮಣ್ಣವರ್ ತಿಳಿಸಿದ್ದಾರೆ.