ಐಗಳಿ: ಸಮೀಪದ ಕೋಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಕುಂಬಾರ ತೋಟದ ಶಾಲೆ ಹತ್ತಿರ ಅಥಣಿ-ಗುಡ್ಡಾಪುರ ರಸ್ತೆಯಲ್ಲಿ ಬಸ್ ಓವರ್ಟೇಕ್ ಮಾಡಲು ಹೋದ ಬೈಕ್ ಸವಾರ ನಿಯಂತ್ರಣ ತಪ್ಪಿ ಬಸ್ಸಿಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಮಹಾಲಿಂಗಪುರ ಪಟ್ಟಣದ ಸಚಿನ್ ಚನ್ನಪ್ಪ ಪೀರನಗಡ್ಡಿ (21) ಮೃತರು. ಹಿಂಬದಿ ಸವಾರ ರವಿ ಕಂಕಣವಾಡಿ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮತ್ತೊಂದು ಘಟನೆಯಲ್ಲಿ ಯಲಿಹಡಲಗಿ ಗ್ರಾಮದ ಹೊರವಲಯದಲ್ಲಿ ದ್ವಿಚಕ್ರ ವಾಹನ ಚಾಲಕನ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಹಿಂಬದಿ ಕುಳಿತ ಮಹಿಳೆ ಮೃತಪಟ್ಟಿದ್ದಾರೆ. ಉಗಾರ ಖುರ್ದದ ಸುವರ್ಣಾ ನಾವಿ (50) ಮೃತರು. ಇವರು ಮುಚ್ಚಂಡಿ ಧರಿದೇವರ ದರ್ಶನ ಪಡೆದು ಮರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಎರಡೂ ಘಟನೆಗಳ ಕುರಿತು ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.
ಪ್ರತ್ಯೇಕ ಅಪಘಾತ: ಇಬ್ಬರು ಸಾವು
ಸಮೀಪದ ಕೋಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಕುಂಬಾರ ತೋಟದ ಶಾಲೆ ಹತ್ತಿರ ಅಥಣಿ-ಗುಡ್ಡಾಪುರ ರಸ್ತೆಯಲ್ಲಿ ಬಸ್ ಓವರ್ಟೇಕ್ ಮಾಡಲು ಹೋದ ಬೈಕ್ ಸವಾರ ನಿಯಂತ್ರಣ ತಪ್ಪಿ ಬಸ್ಸಿಗೆ ...
Vijaya Karnataka 8 Dec 2018, 5:00 am