ಆ್ಯಪ್ನಗರ

ಹಿಡಕಲ್‌ ಡ್ಯಾಂನಲ್ಲಿ ಸಮಸ್ಯೆಗಳ ಸರಮಾಲೆ

ಯಮಕನಮರಡಿ: ಹುಕ್ಕೇರಿ ತಾಲೂಕಿನ ಹಿಡಕಲ್‌ ಡ್ಯಾಂ ಯೋಜನಾ ಪ್ರದೇಶವಾಗಿದ್ದರೂ ಕೆಲವು ಕಾಲನಿಗಳಲ್ಲಿ ನೀರು ಸರಬರಾಜು ಸರಿಯಾಗಿ ಆಗದೆ ಕಾಲನಿಯ ಜನರು ಜಲಾಶಯಕ್ಕೆ ...

Vijaya Karnataka 23 Oct 2018, 5:00 am
ಯಮಕನಮರಡಿ: ಹುಕ್ಕೇರಿ ತಾಲೂಕಿನ ಹಿಡಕಲ್‌ ಡ್ಯಾಂ ಯೋಜನಾ ಪ್ರದೇಶವಾಗಿದ್ದರೂ ಕೆಲವು ಕಾಲನಿಗಳಲ್ಲಿ ನೀರು ಸರಬರಾಜು ಸರಿಯಾಗಿ ಆಗದೆ ಕಾಲನಿಯ ಜನರು ಜಲಾಶಯಕ್ಕೆ ಹೋಗಿ ದ್ವಿಚಕ್ರ ವಾಹನ ಮೇಲೆ ಹಾಗೂ ಸೈಕಲ್‌ ಮೇಲೆ ತರುವ ಪರಿಸ್ಥತಿ ಬಂದೊದಗಿದೆ.
Vijaya Karnataka Web BEL-22YMD2


ಪ್ರತಿ ತಿಂಗಳಲ್ಲಿ 3 ಬಾರಿ ಯಂತ್ರ ಸ್ಥಗಿತಗೊಂಡು ಕಾಲನಿಯ ನಿವಾಸಿಗಳು ತೊಂದರೆ ಅನುಭವಿಸಬೇಕಾಗಿದೆ. ನೀರನ್ನು ಶುದ್ಧೀಕರಣ ಮಾಡದೆ ಕಾಲನಿಯ ಜನರಿಗೆ ಪೂರೈಸುವಲ್ಲಿ ನಿಗಮದ ಅಧಿಕಾರಿಗಳು ವಿಫಲರಾಗಿದ್ದಾರೆ.

ಹದಗೆಟ್ಟ ರಸ್ತೆಗಳು:
ಬಸವೇಶ್ವರ ಕಾಲೇಜಿನಿಂದ ಬಸ್‌ ನಿಲ್ದಾಣದ ಮುಖ್ಯ ರಸ್ತೆ ಕೆಟ್ಟು ಬಸ್ಸು ವಾಹನಗಳು ದ್ವಿಚಕ್ರ ವಾಹನಗಳು ಅಪಘಾತಕ್ಕಿಡಾಗುತ್ತಿವೆ. ಜನರಿಗೆ ರಸ್ತೆಯ ಮೇಲೆ ಓಡಾಡಲು ತಗ್ಗು ದಿಣ್ಣೆಗಳಿಂದಾಗಿ ಅನಾನುಕೂಲವಾಗಿದೆ. ಕಾಲನಿಯ ಗಟಾರಗಳು ಕಸದಿಂದ ತುಂಬಿವೆ. ಮನೆಗಳ ಮುಂದೆ ಕಾಂಗ್ರೆಸ್‌ ಕಸ ಬೆಳೆದು ಸೊಳ್ಳೆಗಳ ಕಾಟದಿಂದ ರೋಗಗಳು ಹರಡುತ್ತಿವೆ. ಮನೆಗಳ ಹಿಂಬದಿ ಹಂದಿಗಳ ಕಾಟ ವಿಪರೀತವಾಗಿದೆ. ಬಸ್‌ ನಿಲ್ದಾಣದಲ್ಲಿ ಕತ್ತೆ, ಕುದುರೆಗಳ ಕಾಟವೂ

ನಾಯಿ-ಮಂಗಗಳ ಹಾವಳಿ:
ಕಾಲನಿ ತುಂಬ ನಾಯಿಗಳು, ಮಂಗಗಳ ಹಾವಳಿ ಅತಿಯಾಗಿದೆ. ನಾಯಿಗಳು ಜನರ ಮೇಲೆ ದಾಳಿಯಿಡುತ್ತಿದ್ದರೆ ಮಂಗಗಳು ಮನೆಗಳ ಚಾವಣಿ ನಾಶಪಡಿಸುತ್ತಿವೆ. ನಿಗಮದ ಅಧಿಕಾರಿಗಳಾಗಲಿ, ಹೊಸಪೇಟ ಗ್ರಾಮ ಪಂಚಾಯಿತಿಯವರಾಗಲಿ, ಅಗತ್ಯ ಕ್ರಮ ವಹಿಸುವಂತೆ ಹಿಡಕಲ್‌ ಡ್ಯಾಂನ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ