ಆ್ಯಪ್ನಗರ

ಗೋಟೂರ, ಚಿಕಾಲಗುಡ್ಡದ ದೇವಾಲಯಗಳಲ್ಲಿ ಸರಣಿಗಳ್ಳತನ

ಉಳ್ಳಾಗಡ್ಡಿ ಖಾನಾಪುರ : ಯಮಕನಮರಡಿ ಮತಕ್ಷೇತ್ರದ ವ್ಯಾಪ್ತಿಯ ...

Vijaya Karnataka 10 Nov 2019, 5:00 am
ಉಳ್ಳಾಗಡ್ಡಿ ಖಾನಾಪುರ: ಯಮಕನಮರಡಿ ಮತಕ್ಷೇತ್ರದ ವ್ಯಾಪ್ತಿಯ ಗೋಟೂರ ಹಾಗೂ ಚಿಕಾಲಗುಡ್ಡ ಗ್ರಾಮದಲ್ಲಿಶುಕ್ರವಾರ ರಾತ್ರಿ ದೇವಸ್ಥಾನಗಳಲ್ಲಿಸರಣಿ ಕಳ್ಳತನ ನಡೆದಿದೆ.
Vijaya Karnataka Web 9 UK 1A092050
ಹಾಗೂ ಚಿಕಾಲಗುಡ್ಡ ಗ್ರಾಮದ ಸಾಯಿ ಮಂದಿರದ ಕಾಣಿಕೆ ಪೆಟ್ಟಿಗೆ ಒಡೆದ ಕಳ್ಳರು.


ಕಳ್ಳರು ದೇವಸ್ಥಾನದ ಹೊರಗಿನ ಹಾಗೂ ಗರ್ಭಗುಡಿಯ ಎರಡು ಕೀಲಿಗಳನ್ನು ಮುರಿದು 10ಗ್ರಾಂ ಬಂಗಾರದ ಮಂಗಳಸೂತ್ರ, ಹಾಗೂ ಬಂಗಾರದ ಚಿಕ್ಕ ಮಂಗಳಸೂತ್ರ, ಬೆಳ್ಳಿಯ 2 ಕಣ್ಣುಬೊಟ್ಟುಗಳು, ಬೆಳ್ಳಿಯ ನಾಲ್ಕು ತೊಲೆ ಗುಂಡುಗಡಿಗೆ ಹಾಗೂ ದೇವಿಯ ಮೂಗುತಿ ಕಳ್ಳತನ ಮಾಡಿದ್ದಾರೆ. ಅಲ್ಲದ ಗರ್ಭಗುಡಿಯಲ್ಲಿರುವ ಕಾಣಿಕೆ ಪೆಟ್ಟಿಗೆಯನ್ನೂ ತೆಗೆದುಕೊಂಡು ಹೋಗಿದ್ದಾರೆ.

ಶುಕ್ರವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೆಇರುವ ಚಿಕಾಲಗುಡ್ಡ ಗ್ರಾಮದ ಸಾಯಿ ಮಂದಿರದಲ್ಲಿನ ವಿದ್ಯುತ್‌ ಫ್ಯೂಜ್‌ ತೆಗೆದ ಕಳ್ಳರು ಗರ್ಭಗುಡಿ ಮುಂಭಾಗದಲ್ಲಿರುವ ಕಾಣಿಕೆ ಪಟ್ಟಿಗೆ ಹಾಗೂ ಗರ್ಭ ಗುಡಿಯಲ್ಲಿರುವ ಟ್ರೇಜರಿ ಲಾಕರ್‌ ಮುರಿದಿದ್ದಲ್ಲದೆ ಸಿಸಿ ಕ್ಯಾಮರಾದ ವೈರ್‌ ಕಡಿತಗೊಳಿಸಿ ಕಳ್ಳತನ ಮಾಡಿದ್ದಾರೆ. ಮತ್ತೊಂದು ಲಾಕರ್‌ ಮುರಿಯಲು ಯತ್ನಿಸಿದ ಕಳ್ಳರು ವಿಫಲರಾಗಿದ್ದಾರೆ.

ಚಿಕಾಲಗುಡ್ಡದ ಹಿರಣ್ಯಕೇಶಿ ನದಿ ದಡದಲ್ಲಿರುವ ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿನ ಸುಮಾರು 7 ತೊಲೆಯಷ್ಟಿರುವ ಗುಂಡುಗಡಿಗೆಯನ್ನು ಸಹ ಕಳುವು ಮಾಡಲಾಗಿದೆ.

ಗೋಟೂರ ಗ್ರಾಪಂ ಎದುರಿನ ರಂಗ ಮಂದಿರದಲ್ಲಿರುವ ಗ್ರಾಪಂ ಸಿಸಿ ಕ್ಯಾಮರಾದಲ್ಲಿಚಿತ್ರಿಕರಣಗೊಂಡ ದೃಶ್ಯವನ್ನು ಪೋಲಿಸರು ಪರಿಶೀಲಿಸಿದ್ದು ಈ ದೃಶ್ಯದಲ್ಲಿಬೆಳಗಿನಜಾವ 3 ಗಂಟೆಯ ಸುಮಾರು ದ್ವಿಚಕ್ರ ವಾಹನದಲ್ಲಿಬಂದು ಕಳ್ಳತನ ಮಾಡಿರುವುದು ಕಂಡುಬಂದಿದೆ. ಸಂಕೇಶ್ವರ ಹಾಗೂ ಯಮಕನಮರಡಿ ಪೊಲೀಸರು ತಮ್ಮ ವ್ಯಾಪ್ತಿಯ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ