ಆ್ಯಪ್ನಗರ

ಸೇವಾ ಪುಸ್ತಕ ಕಳವು ಆರೋಪ ಸಾಬೀತು ಶಿಕ್ಷಕ ಪೂಜೇರಿ ಅಮಾನತ್ತಿಗೆ ಡಿಡಿಪಿಐ ಆದೇಶ

ಬೈಲಹೊಂಗಲ: ಮೇಲಾಧಿಕಾರಿಯ ಸಹಿಗಾಗಿ ಗುಡಕಟ್ಟಿ ಶಾಲಾಶಿಕ್ಷಕ ಎಸ್‌ಬಿ...

Vijaya Karnataka 22 Feb 2019, 5:00 am
ಬೈಲಹೊಂಗಲ: ಮೇಲಾಧಿಕಾರಿಯ ಸಹಿಗಾಗಿ ಗುಡಕಟ್ಟಿ ಶಾಲಾಶಿಕ್ಷಕ ಎಸ್‌.ಬಿ. ಕೌಜಲಗಿ ಅವರು ಪಟ್ಟಣದ ಬಿಇಒ ಕಚೇರಿಯಲ್ಲಿ ಇಟ್ಟು ಹೋಗಿದ್ದ ವೃತ್ತಿ ಸೇವಾ ಪುಸ್ತಕದ ಕಳವು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷಕ ಪೂಜೇರಿ ಅವರನ್ನು ಡಿಡಿಪಿಐ ಅವರು ಅಮಾನತ್ತುಗೊಳಿಸಿದ್ದಾರೆ.
Vijaya Karnataka Web service book missing case teacher pujari suspended
ಸೇವಾ ಪುಸ್ತಕ ಕಳವು ಆರೋಪ ಸಾಬೀತು ಶಿಕ್ಷಕ ಪೂಜೇರಿ ಅಮಾನತ್ತಿಗೆ ಡಿಡಿಪಿಐ ಆದೇಶ


ಘಟನೆಯ ಹಿನ್ನೆಲೆ :
ತಾಲೂಕಿನ ಆನಿಗೋಳ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷ ಕ ಎಸ್‌.ವಿ. ಪೂಜೇರಿ ಅವರು ಕೌಜಲಗಿ ಅವರ ಮೇಲೆ ವೈಮನಸ್ಸು ಹೊಂದಿದ್ದರು. ಏಕಾಏಕಿ ಪುಸ್ತಕ ಕಾಣೆಯಾದ ಹಿನ್ನೆಲೆಯಲ್ಲಿ ಶಿಕ್ಷಕ ಕೌಜಲಗಿ ಅವರು ಅಧಿಕಾರಿಗಳ ಮುಂದೆ ಪೂಜೇರಿ ಮೇಲೆ ಸಂಶಯ ವ್ಯಕ್ತಪಡಿಸಿದ್ದರು. ಕೊನೆಗೆ ಕೌಜಲಗಿ ಅವರು ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಗಾಬರಿಗೊಂಡ ಪೂಜೇರಿ ಸೇವಾ ಪುಸ್ತಕವನ್ನು ಬಿಇಒ ಕಚೇರಿ ಬಾಗಿಲ ಬಳಿ ಇಟ್ಟು ಹೋಗಿದ್ದರು. ಇದು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯದಿಂದ ಪೂಜೇರಿ ಮೇಲಿನ ಆರೋಪ ಸಾಬೀತಾಗಿದ್ದು, ದೃಶ್ಯವನ್ನು ಬಿಇಒ ಪಾರ್ವತಿ ವಸ್ತ್ರದ ಡಿಡಿಪಿಐಗೆ ವರದಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ತಡರಾತ್ರಿ ಶಿಕ್ಷಕ ಪೂಜೇರಿಯನ್ನು ಡಿಡಿಪಿಐ ಅವರು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಸೇವಾ ಪುಸ್ತಕದಲ್ಲಿದ್ದ 5 ಪುಟಗಳು ಕಾಣೆಯಾಗಿದ್ದವು. ನಂತರದಲ್ಲಿ ಇವುಗಳನ್ನು ತಂದು ಒಪ್ಪಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ