ಆ್ಯಪ್ನಗರ

ಜಿಎಸ್ಟಿಯಿಂದ ವ್ಯಾಪಾರಕ್ಕೆ ಹಿನ್ನಡೆ

ಬೆಳಗಾವಿ: ಜಿಎಸ್‌ಟಿ ದೇಶದ ವ್ಯವಹಾರಿಕ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ...

Vijaya Karnataka 13 Oct 2019, 5:00 am
ಬೆಳಗಾವಿ: ಜಿಎಸ್‌ಟಿ ದೇಶದ ವ್ಯವಹಾರಿಕ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇದರಿಂದ ಶೇರು ಮಾರುಕಟ್ಟೆ, ಬ್ಯಾಂಕಿಂಗ್‌, ಶೈಕ್ಷಣಿಕ ಕ್ಷೇತ್ರದ ಮೇಲೆ ಹೊಡೆತಬಿದ್ದಿದೆ ಎಂದು ಆರ್‌ಸಿಯು ಕುಲಪತಿ ಪ್ರೊ. ಎಂ. ರಾಮಚಂದ್ರಗೌಡ ಹೇಳಿದರು.
Vijaya Karnataka Web 12RAJU-6080435


ಇಲ್ಲಿನ ಮರಾಠಾ ಮಂಡಳ ಪದವಿ ಮಹಾವಿದ್ಯಾಲಯದಲ್ಲಿಶನಿವಾರ ಆಯೋಜಿಸಿದ್ದ 'ವ್ಯಾಪಾರೀಕರಣ ಪ್ರಗತಿ-ಸವಾಲು ಹಾಗೂ ಪರಿಹಾರ ಕುರಿತ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿ, ಜಿಎಸ್‌ಟಿಯಿಂದ ವ್ಯಾಪಾರಿ ರಂಗಕ್ಕೆ ನಷ್ಟವಾಗಿದೆ. ಖರೀದಿಗೆ ಗ್ರಾಹಕರು ಆಸಕ್ತಿ ತೋರುತ್ತಿಲ್ಲಎಂದರು.

ಸಾವಿತ್ರಿಭಾಯಿ ಫುಲೆ ವಿಶ್ವವಿದ್ಯಾಲಯದ ಡಾ. ರತಿಕಾಂತ ರೇ ಮಾತನಾಡಿ, ನಮ್ಮ ನೆರೆಯ ರಾಷ್ಟ್ರ ಚೀನಾ ಅಭಿವೃದ್ಧಿ ಮತ್ತು ಸಂಶೋಧನೆಯಲ್ಲಿಮುಂದಿದೆ. ನಾವೂ ಕೂಡ ಈ ನಿಟ್ಟಿನಲ್ಲಿಸಾಗಬೇಕೆಂದು ತಿಳಿಸಿದರು.

ಪ್ರೊ. ಡಾ. ಜೆ.ಪಿ. ಭೋಸಲೆ ಮತ್ತು ಡಾ. ಎ.ಬಿ. ಪವಾರ ಸ್ವಾಗತಿಸಿದರು. ಪ್ರೊ. ಬಾವಡೇಕರ ಪರಿಚಯಿಸಿದರು. ಡಾ. ಪ್ರಕಾಶ ಮಾಡಕರ, ಡಾ. ಪ್ರಕಾಶ ವಿವಾಕರನ್‌, ಡಾ. ಸುನೀತ ಪಾನೀಕರ, ಡಾ. ಗೌರವ ಸಾಹಿನಿ, ಪ್ರೊ. ಎಸ್‌.ಜಿ. ಸೊನ್ನದ, ಪ್ರೊ. ಶೀಲಾ ನಾಯಕ, ಡಾ. ಎ.ಆರ್‌. ರೊಟ್ಟಿ, ಪ್ರೊ. ಮನೋಹರ ಪಾಟೀಲ, ಡಾ. ಎನ್‌.ಎಚ್‌. ರಾಯಪುರ, ಪ್ರೊ. ಎ.ಎ. ಮುತಗೇಕರ, ಪ್ರೊ. ಜಿ.ಎಂ. ಕರ್ಕಿ, ಪ್ರೊ. ರೇಖಾ ಬಾವಡೇಕರ್‌, ಸಮ್ಮೇಳನದ ಸಂಯೋಜಕ ಪ್ರೊ. ಆರ್‌.ಎಂ. ತೇಲಿ, ಪ್ರೊ. ಜಿ.ವೈ. ಚಿನ್ನಾಳಕರ, ಸಹ ಕಾರ‍್ಯದರ್ಶಿ ಡಾ. ಎಚ್‌.ಜೆ. ಮುಳೇರಾಖಿ, ಪ್ರೊ. ಕೆ.ಜಿ. ಹೊಸಕೋಟಿ, ಪ್ರೊ. ಜೆ.ಬಿ. ಅಂಚಿ, ಪ್ರೊ. ರಾಜು ಹಟ್ಟಿ, ಪ್ರೊ. ಅರ್ಚನಾ, ಪ್ರೊ. ನಾಡಗೌಡ, ರಾಮಾ ಮಾಸ್ತಿಹೊಳಿ ಹಾಗೂ ಇತರರು ಉಪಸ್ಥಿತರಿದ್ದರು. ಪ್ರೊ. ವ್ಹಿ.ಎಂ. ತಿರ್ಲಾಪುರ ನಿರೂಪಿಸಿದರು. ಡಾ. ಎಸ್‌.ಬಿ. ದಾಸೋಗ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ