ಆ್ಯಪ್ನಗರ

ಸರಕಾರಗಳ ಕಾನೂನಿನಿಂದ ಸಹಕಾರ ಸಂಘಗಳಿಗೆ ಹಿನ್ನಡೆ

ಮುನವಳ್ಳಿ: ಸಹಕಾರಿ ಸಂಘಗಳ ಮೇಲೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿವಿಧ ...

Vijaya Karnataka 23 Sep 2019, 5:00 am
ಮುನವಳ್ಳಿ: ಸಹಕಾರಿ ಸಂಘಗಳ ಮೇಲೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿವಿಧ ಕಾನೂನುಗಳನ್ನು ಜಾರಿಗೆ ತರುತ್ತಿರುವುದರಿಂದ ಸಹಕಾರ ಸಂಘಗಳ ಅಭಿವೃದ್ಧಿಯಾಗುತ್ತಿಲ್ಲ. ಮಹಾಮಂಡಳದಲ್ಲಿಈ ಕುರಿತು ಚರ್ಚಿಸಿ ಸಹಕಾರಿ ಸಂಘಗಳಿಗೆ ನ್ಯಾಯ ಒದಗಿಸಿಕೊಡಲು ನಿರ್ಣಯ ಕೈಗೊಳ್ಳುತ್ತೇವೆ ಎಂದು ರಾಜ್ಯ ಪತ್ತಿನ ಸಹಕಾರಿ ಸಂಘಗಳ ಮಹಾಮಂಡಳದ ವತಿಯಿಂದ ಬೆಳಗಾವಿ ವಿಭಾಗದಿಂದ ನಿರ್ದೇಶಕರಾಗಿ ಆಯ್ಕೆಗೊಂಡ ಸಹಕಾರಿ ಧುರೀಣ ಉಮೇಶ ಬಾಳಿ ಹೇಳಿದರು.
Vijaya Karnataka Web 22 MNL 2_53


ಪಟ್ಟಣದ ನೂತನ ಮಹಿಳಾ ಸಹಕಾರಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿಶನಿವಾರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಶಿಕ್ಷಕಿ ಜಯಶ್ರೀ ಕುಲಕರ್ಣಿ, ಶಿಕ್ಷಕ ಅಶೋಕ ಹಿರೇಮಠ, ವಿ.ಎಸ್‌.ಯಕ್ಕುಂಡಿ, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾಣಿ, ನಾಗೇಶ ಹೊನ್ನಳ್ಳಿ, ಅನ್ನಪೂರ್ಣ ಲಂಬೂನವರ, ಹೇಮಾವತಿ ಹೊನ್ನಳ್ಳಿ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಕಾರ್ಯ ನಿರ್ವಾಹಕಿ ರಾಚವ್ವ ಅರಳಿಮಟ್ಟಿ ಮಾತನಾಡಿ, ಸಂಘವು 8.85 ಲಕ್ಷ ರೂ. ಲಾಭ ಗಳಿಸಿದೆ ಎಂದರು.

ಸಂಸ್ಥೆಯ ಅಧ್ಯಕ್ಷೆ ಮಹಾದೇವಿ ಭಂಡಾರಿ, ಸವಿತಾ ಹಂಜಿ, ಮಾಲಾ ಬೆಳವಲಗಿಡದ, ಯಲ್ಲವ್ವ ಜಾವೂರ, ತಿಪ್ಪವ್ವ ಶಿವಪೇಟಿ, ದಾಕ್ಷಾಯಿಣಿ ಗೋಪಶೆಟ್ಟಿ, ಗೌರವ್ವ ಜಾವೂರ, ಕಾಶವ್ವ ಮರಲಿಂಗಣ್ಣವರ, ಲಕ್ಷಿತ್ರ್ಮೕ ಅತ್ತಿಮರದ, ಯಶೋಧಾ ತಳವಾರ, ನೀಲವ್ವ ನಾಯ್ಕರ, ಅನ್ನಪೂರ್ಣ ಕಮಲಾಪೂರ, ಸುರೇಶ ಜಾವೂರ, ಕೇಶವ ಭಂಡಾರಿ, ಶ್ರೀಶೈಲ ಹಂಜಿ, ನಾರಾಯಣ ಕಲಾಲ, ವೀರಣ್ಣ ಬೆಳವಲಗಿಡದ, ಮಹಾದೇವಪ್ಪ ಗೋಪಶೆಟ್ಟಿ, ಆನಂದ ಹಂಜಿ, ರಾಜು ಮಹೇಂದ್ರಕರ, ಗುರು ಬೆಳವಲಗಿಡದ, ಎಸ್‌.ಎಸ್‌. ರೇಶ್ಮಿ ಮತ್ತಿತರರು ಇದ್ದರು. ಬಾಳು ಹೊಸಮನಿ ಕಾರ್ಯಕ್ರಮ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ