ಆ್ಯಪ್ನಗರ

ಶಿವಸಾಗರ ಶುಗರ್ಸ್‌ ಕಾರ್ಖಾನೆಯ ಏಳು ನಿರ್ದೇಶಕರು ಅನರ್ಹ

ರಾಮದುರ್ಗ: ತಾಲೂಕಿನ ಉದುಪುಡಿಯ ಶಿವಸಾಗರ ಶುಗರ್ಸ್‌ ಮತ್ತು ಅಗ್ರೋ ...

Vijaya Karnataka 27 Feb 2019, 5:00 am
ರಾಮದುರ್ಗ : ತಾಲೂಕಿನ ಉದುಪುಡಿಯ ಶಿವಸಾಗರ ಶುಗರ್ಸ್‌ ಮತ್ತು ಅಗ್ರೋ ಪ್ರೊಡಕ್ಟ್ ಕಂಪನಿಯ ಅಕ್ರಮ ವ್ಯವಹಾರಗಳ ಹಿನ್ನೆಲೆಯಲ್ಲಿ ಕಾರ್ಖಾನೆಯ ಅಧ್ಯಕ್ಷ ರಾಜೇಂದ್ರ ಪಾಟೀಲ ಸೇರಿದಂತೆ ಏಳು ನಿರ್ದೇಶಕರನ್ನು ಪುಣೆಯ ರೆಜಿಸ್ಟರ್‌ ಆಫ್‌ ಕಂಪನಿ 5 ವರ್ಷಗಳ ಕಾಲ ನಿರ್ದೇಶಕ ಹುದ್ದೆಯಿಂದ ಅನರ್ಹಗೊಳಿಸಿದೆ ಎಂದು ಕಾರ್ಖಾನೆಯ ಮಾಜಿ ನಿರ್ದೇಶಕ ಪ್ರಶಾಂತ ಯಾದವಾಡ ಹೇಳಿದರು.
Vijaya Karnataka Web BEL-26RD1


ಸ್ಥಳೀಯ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ''ಪುಣೆಯ ರೆಜಿಸ್ಟರ್‌ ಆಫ್‌ ಕಂಪನಿ ವಿಚಾರಣೆ ನಡೆಸಿ ಜನವರಿ 25ರಿಂದ 2024ರವರೆಗೆ ಕಾರ್ಖಾನೆಯ ಅಧ್ಯಕ್ಷ ರಾಜೇಂದ್ರ ಪಾಟೀಲ, ನಿರ್ದೇಶಕರಾದ ಅರುಣ ಹವಾಲ್ದಾರ, ಶಂಕರ ಹನುಮಂತ ಹವಾಲ್ದಾರ, ಸಂದೀಪ ಹವಾಲ್ದಾರ, ಅಭಿಜಿತ ದಿನಕರ ಸದಾವರ್ತಿ, ಸುಧೀರ ಅರುಣ ಹವಾಲ್ದಾರ, ರಾಹುಲ್‌ಸಿಂಗ ರಾಜೇಂದ್ರ ಪಾಟೀಲರನ್ನು ಶಿವಸಾಗರ ಸಕ್ಕರೆ ಕಾರ್ಖಾನೆ ಸೇರಿದಂತೆ ಇದೇ ಉದ್ದೇಶ ಹೊಂದಿರುವ ಯಾವದೇ ತರಹದ ಕಂಪನಿಗೆ ನಿರ್ದೇಶಕರಾಗದಂತೆ ನಿಷೇಧಿಸಿ ಆದೇಶ ಹೊರಡಿಸಿದೆ'', ಎಂದು ಹೇಳಿದರು.

''ರಾಜೇಂದ್ರ ಪಾಟೀಲ ಸೇರಿದಂತೆ ಏಳು ಜನರು ಶಿವಸಾಗರ ಶುಗರ್ಸ್‌ ಆ್ಯಂಡ್‌ ಅಗ್ರೋ ಪ್ರೊಡಕ್ಟ್ ಕಂಪನಿಗೆ 40 ಸಾವಿರದಷ್ಟು ಷೇರುದಾರರಿದ್ದು ಇವರೆಲ್ಲರನ್ನು ನಿರ್ಲಕ್ಷಿಸಿ ಸರ್ವ ಸಾಧರಣ ಸಭೆ ಕರೆಯದೆ ಸರ್ವಾಧಿಕಾರದಿಂದ ವರ್ತಿಸಿದ್ದಾರೆ. ಅಲ್ಲದೆ 2014ರ ಫೆ. 14 ರಂದು ಖೊಟ್ಟಿ ದಾಖಲೆ ಸೃಷ್ಟಿ ಮಾಡಿ 10 ಜನ ನಿರ್ದೇಶಕರನ್ನು ಏಕಾಏಕಿ ತೆಗೆದುಹಾಕಿದ್ದರು. ಈ ಕುರಿತು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು ತನಿಖೆ ನಡೆಯುತ್ತಿದೆ'', ಎಂದು ಅವರು ತಿಳಿಸಿದರು.

''ಕಾರ್ಖಾನೆಯ ಆರಂಭಕ್ಕೆ ವಿವಿಧ ಬ್ಯಾಂಕುಗಳಿಂದ ಸಾಲ ಪಡೆಯಲಾಗಿದ್ದು, ಸಾಲದ ಕಂತು ಪಾವತಿಸಿಲ್ಲ. ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಿದ ಬಿಲ್‌ ಹಾಗೂ ಟ್ರ್ಯಾಕ್ಟ್ರ್‌ಗಳಿಗೆ ಹಣ ನೀಡದೆ ವಂಚನೆ ಮಾಡಿದ್ದಾರೆ. ಕೆಲವು ಕಾರ್ಮಿಕರ ಹೆಸರಿನಲ್ಲಿ ಸಾಲ ಮಾಡಿದ್ದಾರೆ. ಮೂರು ಹಂಗಾಮಿನಿಂದ ಕಬ್ಬು ನುರಿಸುವ ಪ್ರಕ್ರಿಯೆ ಸ್ಥಗಿತಗೊಳಿಸಿ ಕಾರ್ಖಾನೆಯ ಬಾಗಿಲು ಮುಚ್ಚಿದ್ದು ಶೀಘ್ರದಲ್ಲಿ ಈ ಎಲ್ಲ ವಿವಾಧಗಳಿಗೆ ತೆರೆ ಬೀಳುವ ಮುನ್ಸೂಚನೆ ದೊರೆತಿದ್ದು ಮತ್ತೆ ಕಾರ್ಖಾನೆಯ ಆರಂಭಕ್ಕೆ ಪ್ರಯತ್ನಿಸಲಾಗುವುದು'', ಎಂದು ತಿಳಿಸಿದರು.

ಭೀರಪ್ಪ ಹಣಬರಟ್ಟಿ, ಬಸು ಗುನ್ನಾನಟ್ಟಿ, ಸುರೇಶ ಮೇಸಾಲಿ, ಅಶೋಕ ವಾಡೇದಾರ, ಸುಧಾಕರ ಮೆಸಾಲೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ