ಆ್ಯಪ್ನಗರ

ಶಿವು ಉಪ್ಪಾರ ಸಾವು ಪ್ರಕರಣ; ವಸ್ತುನಿಷ್ಠ ತನಿಖೆಗೆ ಆಗ್ರಹ

ಹುಕ್ಕೇರಿ: ಶಿವು ಉಪ್ಪಾರ ಗೋ ರಕ್ಷ ಕರಾಗಿದ್ದು ಅವರ ಸಾವಿನ ಪ್ರಕರಣದಲ್ಲಿ ಹಲವು ಅನುಮಾನಗಳಿದ್ದು ವಸ್ತುನಿಷ್ಠ ತನಿಖೆ ನಡೆಸಿ ಕುಟುಂಬಸ್ಥರಿಗೆ ನ್ಯಾಯ ದೊರಕಿಸಿ ...

Vijaya Karnataka 4 Jun 2019, 5:00 am
ಹುಕ್ಕೇರಿ : ಶಿವು ಉಪ್ಪಾರ ಗೋ ರಕ್ಷ ಕರಾಗಿದ್ದು ಅವರ ಸಾವಿನ ಪ್ರಕರಣದಲ್ಲಿ ಹಲವು ಅನುಮಾನಗಳಿದ್ದು ವಸ್ತುನಿಷ್ಠ ತನಿಖೆ ನಡೆಸಿ ಕುಟುಂಬಸ್ಥರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಅಗ್ರಹಿಸಿ ಸ್ಥಳೀಯ ವಂದೇ ಮಾತರಂ ಹಾಗೂ ಶ್ರೀರಾಮ ಸೇನೆ ಸಂಘಟನೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
Vijaya Karnataka Web BEL-3HUKKERIO01


ಪಟ್ಟಣದ ಹಳೇ ಬಸ್‌ ನಿಲ್ದಾಣದಿಂದ ಸೋಮವಾರ ತಹಸೀಲ್ದಾರ್‌ ಕಚೇರಿಯವರಿಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಶಿವು ಉಪ್ಪಾರ ಸಾವನ್ನು ಪೊಲೀಸರು ಆತ್ಮಹತ್ಯೆ ಎಂದು ದಾಖಲಿಸಿಕೊಂಡಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅದೊಂದು ವ್ಯವಸ್ಥ್ಥಿತವಾಗಿ ನಡೆಸಿದ ಕೊಲೆ ಎಂಬುದು ಮೆಲ್ನೋಟಕ್ಕೆ ಕಾಣುತ್ತಿದೆ. ಅದನ್ನು ಮುಚ್ಚಿ ಹಾಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರಕರಣದ ನಿಷ್ಪಕ್ಷ ಪಾತ ತನಿಖೆಯಾಗಬೇಕು. ಬಡತನದಲ್ಲಿರುವ ಉಪ್ಪಾರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಧನ ನೀಡಿ ಸ್ಪಂದಿಸಬೇಕು ಎಂದು ಅಗ್ರಹಿಸಿದರು.

ವಂದೇ ಮಾತರಂ ವೇದಿಕೆಯ ಸಂಚಾಲಕ ಹಾಗೂ ಪುರಸಭೆ ಸದಸ್ಯ ಭೀಮಶಿ ಗೋರಖನಾಥ, ಸಂತೋಷ ಸುಣಗಾರ, ಚೇತನ ಪವಾರ, ಶಿವಾಜಿ ಘಾಟಗೆ, ಬಸವರಾಜ ನಾಯಿಕ, ಸುಭಾಷ ಹಾವಣ್ಣವರ, ರಾಜು ಉಪ್ಪಾರ, ಗಜಾನನ ಕಾಗಿನಕರ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ