ಬೆಳಗಾವಿ: ಸುಮಾರು ಒಂದು ತಿಂಗಳ ಹಿಂದೆ ಜಿಲ್ಲೆಯ ಹಲವೆಡೆ ಅಕಾಲಿಕವಾಗಿ ಸುರಿದ್ದ ಮಳೆ ಬುಧವಾರ ಸಂಜೆ ಮತ್ತೊಮ್ಮೆ ನಗರದಲ್ಲಿ ಜಿನುಗಿತು. ಬೆಳಗ್ಗೆ ಬಿಸಿಲಿನ ಕಾವು ಕವಿದಿದ್ದ ನಗರದಲ್ಲಿ ಸಂಜೆಯಾಗುತ್ತಿದ್ದಂತೆಯೇ ಮೋಡ ಕವಿದುಕೊಂಡಿತು. ಸುಮಾರು 6 ಗಂಟೆಯಷ್ಟೊತ್ತಿಗೆ ಮಳೆ ಹನಿಗಳು ಭೂ ಸ್ಪರ್ಶಕ್ಕೆ ತೊಡಗಿದವು. ರಾತ್ರಿ ಎಂಟು ಗಂಟೆವರೆಗೂ ಇದೇ ರೀತಿ ತುಂತುರು ಮಳೆ ನಗರದಲ್ಲಿ ತಂಪೆರೆಯಿತು. ಇನ್ನೊಂದೆಡೆ ಬೆಳಗ್ಗೆಯಷ್ಟೇ ಕ್ಯಾಬೀಜ್ಗೆ ದರ ಸಿಗುತ್ತಿಲ್ಲ ಎಂದು ರೈತರು ಪ್ರತಿಭಟನೆ ನಡೆಸಿದ್ದರು. ಅದರ ಬೆನ್ನಲ್ಲೇ ಬೆಳೆ ಕಟಾವು ಸಂದರ್ಭದಲ್ಲಿ ಅಕಾಲಿಕ ಮಳೆ ಕಾಣಿಸಿಕೊಂಡಿರುವುದು ರೈತರಲ್ಲಿ ಭಯ ಹುಟ್ಟಿಸಿದೆ. ಜತೆಗೆ ದ್ರಾಕ್ಷಿ ಕೂಡ ಕೊಯ್ಲು ಹಂತಕ್ಕೆ ಬಂದಿದ್ದು, ಅದಕ್ಕೆ ಈಗ ಬಿಸಿಲಿನ ಅಗತ್ಯವಿದೆ. ಹೀಗಿರುವಾಗ ಮಳೆಯ ಆಗಮನ ದ್ರಾಕ್ಷಿ ಬೆಳೆಗಾರರಲ್ಲೂ ಆತಂಕ ಮೂಡಿಸಿದೆ.
ಬೆಳಗಾವಿ: ಜಿನುಗಿದ ಮಳೆ
ಜಿನುಗಿದ ಮಳೆ ಬೆಳಗಾವಿ: ಸುಮಾರು ಒಂದು ತಿಂಗಳ ಹಿಂದೆ ಜಿಲ್ಲೆಯ ಹಲವೆಡೆ ಅಕಾಲಿಕವಾಗಿ ಸುರಿದ್ದ ಮಳೆ ಬುಧವಾರ ಸಂಜೆ ಮತ್ತೊಮ್ಮೆ ನಗರದಲ್ಲಿ ಜಿನುಗಿತು...
Vijaya Karnataka 15 Mar 2018, 5:00 am