ಪ್ರಧಾನಿ ಬಗ್ಗೆ ಏಕವಚನದಲ್ಲಿ ಮಾತಾಡುವ ಸಿದ್ದರಾಮಯ್ಯ ಕ್ಷಮೆಯಾಚಿಸಲಿ
ಚಿಕ್ಕೋಡಿ : ದೇಶದ ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಮಾಜಿ ಸಚಿವೆ, ಬಿಜೆಪಿ ...
Vijaya Karnataka 21 Apr 2019, 5:00 am
ಚಿಕ್ಕೋಡಿ : ದೇಶದ ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಮಾಜಿ ಸಚಿವೆ, ಬಿಜೆಪಿ ರಾಜ್ಯಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಮೋದಿಯವರ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯನವರಿಗಿಲ್ಲ. ಕಾಂಗ್ರೆಸ್ನವರಂತೆ ನಾವು ಬುದ್ದಿವಂತರಲ್ಲ. ಆದರೆ ಕಾಂಗ್ರೆಸ್ನವರು ತಮ್ಮ ಬುದ್ಧಿಯನ್ನು ರಾಜ್ಯ ಹಾಳು ಮಾಡುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ'', ಎಂದು ಆಕ್ರೋಶ ವ್ಯಕ್ತ ಪಡಿಸಿದರು.
''ರಾಜ್ಯದ ಮೈತ್ರಿ ಸರಕಾರಕ್ಕೆ ಕೇವಲ ಮಂಡ್ಯ ಮತ್ತು ಹಾಸನ ಕಾಣಿಸುತ್ತಿವೆ. ಉತ್ತರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತಾಳಿದೆ. ಚುನಾವಣೆ ಮುಗಿದ ತಕ್ಷ ಣ ರಾಜ್ಯದಲ್ಲಿನ ಮೈತ್ರಿ ಸರಕಾರ ತಾನಾಗಿಯೇ ಪತನವಾಗಲಿದೆ'', ಎಂದರು.
ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಶಿಕಾಂತ ನಾಯಿಕ, ಕಾರ್ಯದರ್ಶಿ ದುಂಡಪ್ಪಾ ಬೆಂಡವಾಡೆ, ಮಹೇಶ ತೆಂಗಿನಕಾಯಿ, ಪೂರ್ಣಿಮಾ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಮೋದಿಯವರ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯನವರಿಗಿಲ್ಲ. ಕಾಂಗ್ರೆಸ್ನವರಂತೆ ನಾವು ಬುದ್ದಿವಂತರಲ್ಲ. ಆದರೆ ಕಾಂಗ್ರೆಸ್ನವರು ತಮ್ಮ ಬುದ್ಧಿಯನ್ನು ರಾಜ್ಯ ಹಾಳು ಮಾಡುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ'', ಎಂದು ಆಕ್ರೋಶ ವ್ಯಕ್ತ ಪಡಿಸಿದರು.
''ರಾಜ್ಯದ ಮೈತ್ರಿ ಸರಕಾರಕ್ಕೆ ಕೇವಲ ಮಂಡ್ಯ ಮತ್ತು ಹಾಸನ ಕಾಣಿಸುತ್ತಿವೆ. ಉತ್ತರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ತಾಳಿದೆ. ಚುನಾವಣೆ ಮುಗಿದ ತಕ್ಷ ಣ ರಾಜ್ಯದಲ್ಲಿನ ಮೈತ್ರಿ ಸರಕಾರ ತಾನಾಗಿಯೇ ಪತನವಾಗಲಿದೆ'', ಎಂದರು.
ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಶಿಕಾಂತ ನಾಯಿಕ, ಕಾರ್ಯದರ್ಶಿ ದುಂಡಪ್ಪಾ ಬೆಂಡವಾಡೆ, ಮಹೇಶ ತೆಂಗಿನಕಾಯಿ, ಪೂರ್ಣಿಮಾ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.