ಆ್ಯಪ್ನಗರ

ರೈತರಿಂದ ತಹಸೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕಿ ಮನವಿ ಸಲ್ಲಿಕೆ

ಅಥಣಿ: ರೈತರ ಬೇಡಿಕೆ ಈಡೇರಿಸದೆ ಕಬ್ಬು ನುರಿಸುವ ಕಾರ್ಯಾರಂಭ ಮಾಡಿರುವ ಅಥಣಿ ಫಾರ್ಮರ್ಸ್‌, ಕೆಂಪವಾಡ ಮತ್ತು ಕೊಕಟನೂರು ಸಕ್ಕರೆ ಕಾರ್ಖಾನೆಗಳ ಉತ್ಪಾದನೆಯನ್ನು ...

Vijaya Karnataka 12 Nov 2018, 5:00 am
ಅಥಣಿ : ರೈತರ ಬೇಡಿಕೆ ಈಡೇರಿಸದೆ ಕಬ್ಬು ನುರಿಸುವ ಕಾರ್ಯಾರಂಭ ಮಾಡಿರುವ ಅಥಣಿ ಫಾರ್ಮರ್ಸ್‌, ಕೆಂಪವಾಡ ಮತ್ತು ಕೊಕಟನೂರು ಸಕ್ಕರೆ ಕಾರ್ಖಾನೆಗಳ ಉತ್ಪಾದನೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ನೂರಾರು ರೈತರು ಅಥಣಿ ತಹಸೀಲ್ದಾರ್‌ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
Vijaya Karnataka Web BEL-11 ATHANI-02


ಅಥಣಿ ಫಾರ್ಮರ್ಸ್‌ ಸಕ್ಕರೆ ಕಾರ್ಖಾನೆಯ ಮಾಲೀಕರೂ ಆದ ಶಾಸಕ ಶ್ರೀಮಂತ ಪಾಟೀಲರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ತಹಸೀಲ್ದಾರ್‌ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ತಹಸೀಲ್ದಾರ್‌ ಎಂ.ಎನ್‌. ಬಳಿಗಾರ ಮತ್ತು ಕಬ್ಬು ಬೆಳೆಗಾರರ ನಡುವೆ ಮಾತಿನ ಚಕಮಕಿ ನಡೆಯಿತು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿ ಡಿವೈಎಸ್‌ಪಿ ರಾಮಣ್ಣ ಬಸರಗಿ, ಸಿಪಿಐ ಎಚ್‌. ಶೇಖರ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಈ ವೇಳೆ ಮಾತನಾಡಿದ ರೈತ ಮುಖಂಡರು, ಕಾರ್ಖಾನೆಗಳ ಮಾಲೀಕರು ರೈತರ ವಿರುದ್ಧ ಗೂಂಡಾ ವರ್ತನೆ ತೋರುತ್ತಿದ್ದಾರೆ. ಕೆಲ ಗೂಂಡಾಗಳನ್ನು ಕರೆಸಿ ಶನಿವಾರ ಕೆಂಪವಾಡ ಕ್ರಾಸ್‌ ಬಳಿ ಕಾರ್ಖಾನೆ ಆರಂಭಿಸುವಂತೆ ಪ್ರತಿಭಟನೆ ಮಾಡಿಸಿದ್ದಾರೆ. ಅಷ್ಟೇ ಅಲ್ಲದೆ ರೈತ ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಲು ಎಲ್ಲ ಸಿದ್ಧತೆ ನಡೆಸಿದ್ದಾರೆ ಎಂದು ಆರೋಪಿಸಿದರು.

ಕಾರ್ಖಾನೆಗಳು ಕಬ್ಬು ಬೆಳೆಗಾರರ ಹಿಂದಿನ ವರ್ಷದ ಬಾಕಿ ಬಿಲ್‌ ಪಾವತಿಸಬೇಕು. ಈ ವರ್ಷ ಕಬ್ಬಿಗೆ ಎಫ್‌ಆರ್‌ಪಿ ದರ ಪ್ರಕಟಣೆ ಮಾಡಬೇಕು. ನಾಳೆಯೊಳಗೆ (ನ.12)ಆರಂಭಿಸಿರುವ ಕಾರ್ಖಾನೆಗಳನ್ನು ಸ್ಥಗಿತಗೊಳಿಸದಿದ್ದರೆ ಸಕ್ಕರೆ ಕಾರ್ಖಾನೆಗಳ ವಿರುದ್ಧ ತೀವ್ರ ಹೋರಾಟ ನಡೆಸುತ್ತೇವೆ. ಆಗ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ತಾಲೂಕು ಆಡಳಿತವೇ ಹೊಣೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಶೀತಲ ಪಾಟೀಲ, ಪ್ರಕಾಶ ಹಳ್ಳೊಳ್ಳಿ, ಅಪ್ಪಾಸಾಬ ಚೌಗಲ, ಗಜಾನನ ಎರಡೋಲಿ, ರವಿ ಘಾಣಿಗೇರ ಮತ್ತಿತರರು ಉಪಸ್ಥಿತರಿದ್ದರು.

ಕಬ್ಬು ತುಂಬಿದ ಟ್ಯಾಕ್ಟರ್‌ಗಳ ತಡೆ :
ಅಥಣಿ ತಾಲೂಕಿನ ಅಥಣಿ ಪಾರ್ಮರ್ಸ್‌, ಕೆಂಪವಾಡ ಮತ್ತು ಕೊಕಟನೂರ ಸಕ್ಕರೆ ಕಾರ್ಖಾನೆಗಳು ಭಾನುವಾರ ಉತ್ಪಾದನೆ ಆರಂಭಿಸಿದ್ದವು. ಆ ಕಾರ್ಖಾನೆಗೆ ಕಬ್ಬು ತುಂಬಿಕೊಂಡು ಹೋಗುವ ಟ್ರ್ಯಾಕ್ಟರ್‌ ಟೈಯರ್‌ಗಳ ಗಾಳಿ ತಗೆದು ರೈತರು ಪ್ರತಿಭಟನೆ ನಡೆಸಿದರು. ಇದರಿಂದ ನಡುದಾರಿಯಲ್ಲೇ ನಿಂತ ಕಬ್ಬು ಹೇರಿದ್ದ ಟ್ರ್ಯಾಕ್ಟರ್‌ಗಳಿಂದ ಟ್ರಾಫಿಕ್‌ ಕಿರಕಿರಿ ಉಂಟಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ