ಆ್ಯಪ್ನಗರ

ಶಿವಶಕ್ತಿ ಸಕ್ಕರೆ ಕಾರ್ಖಾನೆ ವಿದ್ಯುತ್‌ ಘಟಕಕ್ಕೆ ‘ಸಿಲ್ವರ್‌ ಅವಾರ್ಡ್‌’

ಇಂಗಳಿ: ಚೆನ್ನೈನ ದಕ್ಷಿಣ ಭಾರತ ಕಬ್ಬು ಮತ್ತು ಸಕ್ಕರೆ ತಂತ್ರಜ್ಞರ ಸಂಸ್ಥೆಯಿಂದ ಯಡ್ರಾಂವ ಗ್ರಾಮದ ಶಿವಶಕ್ತಿ ಸಕ್ಕರೆ ಕಾರ್ಖಾನೆಯ ವಿದ್ಯುತ್‌ ಘಟಕಕ್ಕೆ ...

Vijaya Karnataka 2 Jul 2019, 5:00 am
ಇಂಗಳಿ : ಚೆನ್ನೈನ ದಕ್ಷಿಣ ಭಾರತ ಕಬ್ಬು ಮತ್ತು ಸಕ್ಕರೆ ತಂತ್ರಜ್ಞರ ಸಂಸ್ಥೆಯಿಂದ ಯಡ್ರಾಂವ ಗ್ರಾಮದ ಶಿವಶಕ್ತಿ ಸಕ್ಕರೆ ಕಾರ್ಖಾನೆಯ ವಿದ್ಯುತ್‌ ಘಟಕಕ್ಕೆ 2018-19 ನೇ ಸಾಲಿನ 'ಸಿಲ್ವರ್‌ ಅವಾರ್ಡ್‌' ನೀಡಿ ಗೌರವಿಸಲಾಗಿದೆ.
Vijaya Karnataka Web BEL-1INGALI3


ಕಾರ್ಖಾನೆಯ ರೂವಾರಿಗಳಾದ ರಾಜ್ಯ ಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಹಾಗೂ ಅಮಿತ್‌ ಪ್ರಭಾಕರ ಕೋರೆಯವರ ನೇತೃತ್ವದ ಆಡಳಿತ ಮಂಡಳಿಯ ಸೂಕ್ತ ನಿರ್ಣಯ, ರೈತರ ಸಹಕಾರ ಮತ್ತು ಅಧಿಕಾರಿ ಹಾಗೂ ಕಾರ್ಮಿಕರ ಸತತ ಪ್ರಯತ್ನದ ಫಲವಾಗಿ 2018-19ರ ಸಾಲಿನಲ್ಲಿ ಶಿವಶಕ್ತಿ ಸಕ್ಕರೆ ಕಾರ್ಖಾನೆಯ ವಿದ್ಯುತ್‌ ಉತ್ಪಾದಕ ವಿಭಾಗಕ್ಕೆ ಉತ್ತಮ ಕಾರ್ಯನಿರ್ವಹಣೆ, ಪೂರ್ಣ ಪ್ರಮಾಣದ ಸಾಮರ್ಥ್ಯ‌ ಬಳಕೆ, ದಕ್ಷ ತೆ ಮತ್ತು ಕಾರ್ಯಕ್ಷ ಮತೆಯನ್ನು ಪರಿಗಣಿಸಿ ಕರ್ನಾಟಕ ವಲಯದಲ್ಲಿ ಈ ಪ್ರಶಸ್ತಿ ನೀಡಲಾಗಿದೆ.

ಜೂ.28ರಂದು ಚೆನ್ನೈನಲ್ಲಿ ಜರುಗಿದ ಸಂಸ್ಥೆಯ 49ನೇ ವಾರ್ಷಿಕ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿಯ ಯಶಸ್ಸು ಸಿಬ್ಬಂದಿ, ರೈತರು, ಕಾರ್ಮಿಕರಿಗೆ ಸಲ್ಲಲಿ :
ಕಾರ್ಖಾನೆಯು ಕಳೆದ ಹಂಗಾಮಿನಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಕಬ್ಬು ನುರಿಸಿ ಉತ್ತಮ ಇಳುವರಿಯೊಂದಿಗೆ ಸಕ್ಕರೆ ಉತ್ಪಾದನೆ ಮಾಡಿರುತ್ತದೆ. ಇದರ ಜತೆಗೆ ಕಾರ್ಖಾನೆಯ ಉಪ ಉತ್ಪನ್ನ ಘಟಕಗಳಾದ ಸಹವಿದ್ಯುತ್‌ ಮತ್ತು ಡಿಸ್ಟಿಲರಿ ಘಟಕಗಳು ಸಹ ಪೂರ್ಣ ಕ್ಷ ಮತೆಯೊಂದಿಗೆ ಕಾರ್ಯನಿರ್ವಹಿಸಿದ್ದಕ್ಕೆ ಕಾರ್ಖಾನೆ ಪ್ರಶಸ್ತಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದು ಡಾ. ಪ್ರಭಾಕರ ಕೋರೆ ಪ್ರತಿಕ್ರಿಯಿಸಿದ್ದಾರೆ.

ಕಾರ್ಖಾನೆಯು ತನ್ನ ಕಾರ್ಯಕ್ಷ ಮತೆಗೆ ತಕ್ಕಂತೆ ಬೇಕಾಗುವ ಪರ್ಯಾಪ್ತ ಪ್ರಮಾಣದ ಕಬ್ಬನ್ನು ಲಭ್ಯವಾಗಿಸಿಕೊಳ್ಳುವ ದೃಷ್ಟಿಯಿಂದ ತನ್ನ ಕಾರ್ಯಕ್ಷೇತ್ರದಲ್ಲಿ ವಿವಿಧ ಕೃಷಿ ಅಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಹೆಚ್ಚಿನ ಇಳುವರಿಯ ಕಬ್ಬನ್ನು ಪಡೆದಿದೆ. ಈ ಪ್ರಶಸ್ತಿಗಳ ಶ್ರೇಯಸ್ಸು ಕಾರ್ಖಾನೆಯ ಸದಸ್ಯಬಾಂಧವರಿಗೂ, ಕಬ್ಬು ಪೂರೈಸಿದ ಸಮಸ್ತ ರೈತಬಾಂಧವರಿಗೂ ಹಾಗೂ ಕಾರ್ಮಿಕವರ್ಗದವರಿಗೂ ಸಲ್ಲುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ