ಆ್ಯಪ್ನಗರ

ರಾಜ್ಯದ ಸಾಲಮನ್ನಾ ಯೋಜನೆ ಸರಳೀಕರಣ ಆಗಲಿ

ಯರಗಟ್ಟಿ: ರೈತರಿಗಾಗಿ ರಾಜ್ಯ ಸರಕಾರದ ಸಾಲಮನ್ನಾ ಯೋಜನೆ ಗೊಂದಲಮಯವಾಗಿದೆ...

Vijaya Karnataka 9 Jun 2019, 5:00 am
ಯರಗಟ್ಟಿ: ರೈತರಿಗಾಗಿ ರಾಜ್ಯ ಸರಕಾರದ ಸಾಲಮನ್ನಾ ಯೋಜನೆ ಗೊಂದಲಮಯವಾಗಿದೆ. ಇದನ್ನು ಸರಳೀಕರಿಸಿ ಕೃಷಿಕರಿಗೆ ಅನುಕೂಲವಾಗುವಂತೆ ರೂಪಿಸಬೇಕು ಎಂದು ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಹಾಗೂ ಶಾಸಕ ಆನಂದ ಮಾಮನಿ ಆಗ್ರಹಿಸಿದರು.
Vijaya Karnataka Web simplify the state loan debt plan
ರಾಜ್ಯದ ಸಾಲಮನ್ನಾ ಯೋಜನೆ ಸರಳೀಕರಣ ಆಗಲಿ


ಅವರು ಇಲ್ಲಿನ ಬಿಡಿಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ ನಡೆದ ಬ್ಯಾಂಕ್‌ ನಿರೀಕ್ಷಕ ಹಾಗೂ ಸೊಸೈಟಿಗಳ ಕಾರ್ಯದರ್ಶಿಗಳ ಬೀಳ್ಕೊಡುವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ಈ ಮೊದಲು ಸವದತ್ತಿ ತಾಲೂಕನ್ನು ಸಂಪೂರ್ಣ ಕಡೆಗಣಿಸಲಾಗಿತ್ತು. ಇತ್ತೀಚಿನ 4 ವರ್ಷಗಳ ಅವಧಿಯಲ್ಲಿ 210 ಕೋಟಿ ರೂ. ಶೂನ್ಯ ಬಡ್ಡಿ ದರದ ಸಾಲ ತರಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ತಮ್ಮೆಲ್ಲರ ಸಹಕಾರ ಇದ್ದರೆ ಸಾಲದ ಮೊತ್ತವನ್ನು ದ್ವಿಗುಣಗೊಳಿಸಲಾಗುವುದು ಎಂದು ಹೇಳಿದರು.

ನಿವೃತ್ತರಾದ ಯರಗಟ್ಟಿ ಬಿಡಿಸಿಸಿ ಬ್ಯಾಂಕ್‌ ನಿರೀಕ್ಷಕ ಜಿ.ಎಲ್‌. ಹಿರೇಮಠ, ಸತ್ತಿಗೇರಿಯ ಕಾರ್ಯದರ್ಶಿ ನಿಂಗಪ್ಪ ಪತ್ತಾರ, ಕಡಬಿಯ ಶಿವಲಿಂಗಪ್ಪ ದಯನ್ನವರ, ಬೆನಕಟ್ಟಿಯ ಮಲ್ಲಪ್ಪ ಬಿಷ್ಟನ್ನವರ ಅವರನ್ನು ಸತ್ಕರಿಸಿ ಬೀಳ್ಕೊಡಲಾಯಿತು.

ಎಪಿಎಂಸಿ ಮಾಜಿ ಅಧ್ಯಕ್ಷ ಬಸಯ್ಯ ಹಿರೇಮಠ ಮಾತನಾಡಿದರು. ಪಿಕೆಪಿಎಸ್‌ ಅಧ್ಯಕ್ಷರಾದ ರಾಮನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕ್‌ ಅಧಿಕಾರಿ ಸಿ.ಆರ್‌.ಪಾಟೀಲ, ಈರಣ್ಣ ಚಳಕೊಪ್ಪ, ಸುಭಾಸಗೌಡ ಪಾಟೀಲ, ಮಹಾಂತೇಶ ಗೋಡಿ, ವಿಠ್ಠಲ ಬಂಟನೂರ, ಯರಗಟ್ಟಿ ಭಾಗದ ಎಲ್ಲ ಪಿಕೆಪಿಎಸ್‌ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಬಸವರಾಜ ಹಸಬಿ ಸ್ವಾಗತಿಸಿ, ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ