ಆ್ಯಪ್ನಗರ

ಖೋಟಾ ನೋಟು ಚಲಾವಣೆ ಆರು ಆರೋಪಿಗಳ ಬಂಧನ

ಬೆಳಗಾವಿ/ಮರಕುಂಬಿ: ಖೋಟಾ ನೋಟು ಚಲಾವಣೆಗೆ ಸಂಬಂಧಿಸಿದಂತೆ ...

Vijaya Karnataka 18 Feb 2020, 5:00 am
ಬೆಳಗಾವಿ/ಮರಕುಂಬಿ: ಖೋಟಾ ನೋಟು ಚಲಾವಣೆಗೆ ಸಂಬಂಧಿಸಿದಂತೆ ಮುರಗೋಡು ಠಾಣೆ ಪೊಲೀಸರು ಸೋಮವಾರ ಆರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
Vijaya Karnataka Web six arrested for circulation of counterfeited currency
ಖೋಟಾ ನೋಟು ಚಲಾವಣೆ ಆರು ಆರೋಪಿಗಳ ಬಂಧನ


ಗೋಕಾಕ ತಾಲೂಕಿನ ಅಡಿಬಟ್ಟಿಯ ಸುರೇಶ ಸಿದ್ಧಪ್ಪ ಮುರಿ (27), ಸುರೇಶ ಲಕ್ಷ್ಮಣ ಮೂಲಿ (24), ಮಲ್ಲಪ್ಪ ಮಹಾದೇವ ಗೋಲನ್ನವರ (24), ಚಿಕ್ಕೋಡಿ ತಾಲೂಕು ಬೋರಗಾಂವ್‌ ಗ್ರಾಮದ ವಿಜಯ ಉಮೇಶ ಬೇಡಕಿಹಾಳೆ (26), ಅಕ್ಷಯ ದತ್ತಾತ್ರೇಯ ವಡ್ಡರ (24), ಸೂರಜ ದತ್ತಾತ್ರೇಯ ವಡ್ಡರ (21) ಬಂಧಿತ ಆರೋಪಿಗಳು. ಇವರಿಂದ 500 ರೂ. ಮುಖ ಬೆಲೆಯ 18 ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸವದತ್ತಿ ತಾಲೂಕು ಯರಗಟ್ಟಿಯ ಬಾರೊಂದರಲ್ಲಿಆರೋಪಿ ಸುರೇಶ ಮುರಿ 500 ರೂ. ಮುಖಬೆಲೆಯ ನೋಟು ಕೊಟ್ಟು ವಿಸ್ಕಿ ಖರೀದಿಸಿದ್ದ. 'ನೋಟು ಸರಿ ಇಲ್ಲ' ಎಂದು ಕ್ಯಾಶಿಯರ್‌ ಹೇಳಿದರೂ 'ಸರಿ ಇದೆ' ಎಂದು ವಾದಿಸಿ ಬಲವಂತವಾಗಿ ಕೊಟ್ಟು ಹೋಗಿದ್ದ. ರಾತ್ರಿ ನೋಟು ಎಣಿಸುವಾಗ ಆರೋಪಿ ಕೊಟ್ಟ ನೋಟು ನಕಲಿ ಎಂದು ಗೊತ್ತಾಗಿದೆ ಎಂದು ಈ ಸಂಬಂಧ ಬಾರ್‌ನ ಕ್ಯಾಶಿಯರ್‌ ಮನೋಜ ಭೋವಿ ಮುರಗೋಡ ಠಾಣೆಗೆ ಕೊಟ್ಟ ದೂರಿನಲ್ಲಿತಿಳಿಸಿದ್ದಾರೆ.

ತನಿಖೆ ನಡೆಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ಬಂಧಿಸಿ, ಖೋಟಾ ನೋಟು ತಯಾರಿಸಲು ಬಳಸುತ್ತಿದ್ದ ಸಾಮಗ್ರಿಗಳನ್ನು ಜಪ್ತಿ ಮಾಡಿ ವಶಪಡಿಸಿಕೊಂಡಿದ್ದಾರೆ. ಮುರಗೋಡ ಪಿಎಸ್‌ಐ ಪ್ರವೀಣ ಗಂಗೋಳ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ